Skip to main content

ರಾಜಕೀಯ ಕ್ಷೇತ್ರ ಇಸ್ಲಾಮಿಗೆ ಅನ್ಯವಲ್ಲ. ನಿಭಂದನೆಗಳಾಧರಿತ ತನ್ನದೇ ಆದ ರೂಪ ಹಾಗೂ ಶೈಲಿಯಲ್ಲಿರುವ ರಾಜಕೀಯ ವಿಧಾನ ಇಸ್ಲಾಮಿನಲ್ಲೂ ಇದೆ. ಆದರೆ ಪ್ರಸಕ್ತ ಭಾರತದಲ್ಲಿರುವ ರಾಜಕೀಯ ಕ್ಷೇತ್ರ ಜಗತ್ತಿನಲ್ಲಿ ಏನೆಲ್ಲಾ ಕೊಳೆ ಹಾಗೂ ಕೊಳಕುಗಳಿವೆಯೋ ಅದನ್ನೆಲ್ಲಾ ಮೆತ್ತಿಕೊಂಡ ಅತ್ಯಂತ ಭೃಷ್ಟ ಕ್ಷೇತ್ರವಾಗಿದೆ. ಭೃಷ್ಟಾಚಾರ ,ಹಗರಣಗಳಿಂದ ಮುಕ್ತವಾದ ರಾಜಕೀಯವನ್ನು ಕನಸಿನಲ್ಲಿಯೂ ಕೂಡಾ ಸಂಕಲ್ಪಿಸಲೂ ಅಸಾಧ್ಯ.ಅಷ್ಟರಮಟ್ಟಿಗೆ ಈ ಕ್ಷೇತ್ರ ಅಧಪತನ ಹೊಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಮುಂದಕ್ಕೆ ಇದು ಮರುಕಳಿಸದಿರಲಿ

ರಾಜಕೀಯ ಕ್ಷೇತ್ರ ಇಸ್ಲಾಮಿಗೆ ಅನ್ಯವಲ್ಲ. ನಿಭಂದನೆಗಳಾಧರಿತ ತನ್ನದೇ  ಆದ ರೂಪ ಹಾಗೂ ಶೈಲಿಯಲ್ಲಿರುವ ರಾಜಕೀಯ ವಿಧಾನ ಇಸ್ಲಾಮಿನಲ್ಲೂ ಇದೆ. ಆದರೆ ಪ್ರಸಕ್ತ ಭಾರತದಲ್ಲಿರುವ ರಾಜಕೀಯ ಕ್ಷೇತ್ರ ಜಗತ್ತಿನಲ್ಲಿ ಏನೆಲ್ಲಾ ಕೊಳೆ ಹಾಗೂ ಕೊಳಕುಗಳಿವೆಯೋ ಅದನ್ನೆಲ್ಲಾ ಮೆತ್ತಿಕೊಂಡ ಅತ್ಯಂತ ಭೃಷ್ಟ ಕ್ಷೇತ್ರವಾಗಿದೆ. ಭೃಷ್ಟಾಚಾರ ,ಹಗರಣಗಳಿಂದ ಮುಕ್ತವಾದ ರಾಜಕೀಯವನ್ನು ಕನಸಿನಲ್ಲಿಯೂ ಕೂಡಾ ಸಂಕಲ್ಪಿಸಲೂ ಅಸಾಧ್ಯ.ಅಷ್ಟರಮಟ್ಟಿಗೆ ಈ ಕ್ಷೇತ್ರ ಅಧಪತನ ಹೊಂದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಧರ್ಮಗುರುಗಳಿಗೆ ಸಮಾಜದಲ್ಲಿ ಉನ್ನತವಾದ ಘನತೆ ಹಾಗೂ ಗೌರವವಿದೆ. ಧರ್ಮಗುರು ಎಂಬುದು ಪವಿತ್ರವಾದ ಹುದ್ದೆ.  ದರ್ಮಗುರುಗಳು ಧರಿಸುವ ಶುಭ್ರ ಶ್ವೇತವರ್ಣದ ವಸ್ತ್ರವು ಈ ಪವಿತ್ರತೆಯ ಸಂಕೇತವೆಂದೇ ಹೇಳಬಹುದು. ಇಂತಹಾ ಪವಿತ್ರ ಹಾಗೂ ಶುಭ್ರ ಹುದ್ದೆಗೆ ರಾಜಕೀಯದ ಕೊಳೆಯನ್ನು ಲೇಪಿಸುವುದು ಸಮರ್ಥನೀಯವಲ್ಲ. ಧರ್ಮಗುರುಗಳು ರಾಜಕೀಯ ಪುಡಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದವರಲ್ಲ. ತಮ್ಮ ಘಣತೆ ಹಾಗೂ ಗೌರವದ ಬಗ್ಗೆ ತಾವೇ ಮೊದಲು ಅರಿತುಕೊಳ್ಳಬೇಕು. ಅದನ್ನು ತಾವೇ ನಗಣ್ಯವಾಗಿ ಕಂಡರೆ ಮತ್ತೆ ಇತರರು ಅದಕ್ಕೆ ಎಷ್ಟು ಬೆಲೆ ಕಟ್ಟುವರು ಎಂಬುದನ್ನು ಆಲೋಚಿಸಬೇಕು. ರಾಜಕೀಯ ಪುಡಾರಿಗಳ ಅಡಿಯಾಳುಗಳಾಗಿ ಸಣ್ಣತನವನ್ನು ಪ್ರದರ್ಶಿಸಿ ಇಲ್ಲಿ  ಅನಾಹುತಗಳು ಸಂಭವಿಸಿದರೆ ಅದಕ್ಕೆ ತಾವೇ ಹೊಣೆ ಎಂಬುದನ್ನು ಮರೆಯಬಾರದು. ಆದ್ದರಿಂದ ಯಾವುದೇ ರಾಜಕೀಯ ಪಕ್ಷವಿರಲಿ,ಅವರು ನಡೆಸುವ ರಾಜಕೀಯ ಡೊಂಬರಾಟಕ್ಕೆ ಉಸ್ತಾದರುಗಳು ಇನ್ನಾದರೂ ತೆರಳದೆ ಜಾಗ್ರತೆ ಪಾಲಿಸಬೇಕು.

ಇಂದು ಮುಸ್ಲಿಂ ಧರ್ಮಗುರುಗಳ ಸಮಾವೇಶ ನಡೆಸಿದ ಬಿಜೆಪಿಯವರೊಂದಿಗೆ ಸಣ್ಣ ವಿನಂತಿಯೇನೆಂದರೆ ಇಂದು ಭಾರತದ ಅತೀ ದೊಡ್ಡ ಸಮಸ್ಯೆ ಕೋಮು ಸಂಘರ್ಷಗಳು. ಜಾತಿಧರ್ಮದ ಹೆಸರಲ್ಲಿ ಕಚ್ಚಾಡಿಕೊಂಡು ಹಲವರು ಸಾಯುತ್ತಿದ್ದಾರೆ. ನಮ್ಮ ದ.ಕ.ಜಿಲ್ಲೆಯಲ್ಲಂತೂ ಇದರ ಸಮಸ್ಯೆ ಇತರೆಡೆಗಿಂತ ಸ್ವಲ್ಪ ಜಾಸ್ತಿಯೇ ಇದೆಯೆಂದು ನಿಮಗೂ ಗೊತ್ತು. ನೀವು ಮುತುವರ್ಜಿ ವಹಿಸಿ ಮುಂದಡಿ ಇಟ್ಟರೆ ಈ ಸಮಸ್ಯೆ ಪರಿಹಾರವಾಗುವುದಂತೂ ನೂರಕ್ಕೆ ನೂರು ಖಂಡಿತ. ಅದಕ್ಕಾಗಿ ನೀವು ಈ ರೀತಿಯ ರಾಜಕೀಯ ಡ್ರಾಮಕ್ಕೆ ಬದಲಾಗಿ ಹಿಂದು ಮತ್ತು ಮುಸ್ಲಿಮರ ಧರ್ಮಗುರುಗಳನ್ನು ಒಂದೇ ವೇದಿಕೆಗೆ ಕರೆಸಿ *ಶಾಂತಿಸಮಾವೇಶ*  ನಡೆಸಿ. ಅದರಲ್ಲಿ ಉಭಯ ಧರ್ಮದ ನಾಯಕರು ಶಾಂತಿ,ಸಮಾಧಾನ,ಒಗ್ಗಟ್ಟು ಹಾಗೂ ಪ್ರೀತಿಯ ಸಂದೇಶ ಹಾಗೂ ಕರೆಗಳನ್ನು ನೀಡಲಿ.ನೀವು ಅದಕ್ಕೆ ವೇದಿಕೆ ಸಿದ್ಧಪಡಿಸಿ . ಅಂತಹಾ ಕಾರ್ಯಕ್ರಮವನ್ನು ನೀವು ಮಾಡುವುದಾದರೆ ನಾವದನ್ನು ಸ್ವಾಗತಿಸುತ್ತೇವೆ, ಮೆಚ್ಚುತ್ತೇವೆ. ಇದರಿಂದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಧರ್ಮಗುರುಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ ಅವರ ಶುಭ್ರತೆಗೆ ಕೊಳಕನ್ನು ಲೇಪಿಸಲು ಮಾತ್ರ ಪ್ರಯತ್ನಿಸಬೇಡಿ. ಅವರ ವಸ್ತ್ರ ಸಮಾಜಕ್ಕೆ ಪರಿಮಳ ಬೀಸಬೇಕಾದ ವಸ್ತ್ರ . ಅದನ್ನು ರಾಜಕೀಯದ ದುರ್ನಾತ ಬೀರುವಂತಹಾ ವಸ್ತ್ರವನ್ನಾಗಿ ಪರಿವರ್ತಿಸಬೇಡಿ.

ಕಾಂಗ್ರೆಸ್ ,ಜೆಡಿಎಸ್ ಮುಂತಾದ ಇತರ ಪಕ್ಷಗಳೊಂದಿಗೆ ಹೇಳಲಿಕ್ಕಿರುವುದು ಇಂದು ಬಿಜೆಪಿ ನಡೆಸಿತು ಎಂಬ ಕಾರಣದಿಂದ ನಾಳೆ ನೀವೂ ನಡೆಸಲು ಪ್ರಯತ್ನಿಸಬೇಡಿ.ಇದು ಇಂದಿಗೇ ಕೊನೆಗೊಳ್ಳಬೇಕು, ಇಂತಹಾ ದುಸ್ಸಾಹಸಕ್ಕೆ ಬಿಜೆಪಿ ಸಹಿತ ಯಾವುದೇ ಪಕ್ಷದವರು ಮುಂದಕ್ಕೆ ಕೈಹಾಕಬಾರದು. ಇನ್ನು ಒಮ್ಮೆಯೂ ಇದು ಮರುಕಳಿಸಬಾರದು. ಉಲಮಾಗಳನ್ನು ನಿಮ್ಮ ರಾಜಕೀಯ ಚದುರಂಗಾಟಕ್ಕೆ ಬಳಸಬೇಡಿ. ಅವರಿಗೆ ಅವರದೇ ಆದ ಕರ್ತವ್ಯ, ಹೊಣೆಗಾರಿಕೆಗಳು ಇದೆ. ಅವರು ಅದನ್ನು ನಿರ್ವಹಿಸುವುದರಲ್ಲಿ ತಲ್ಲೀಣರಾಗಲಿ. ಅದಕ್ಕಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ


*ತೋಕೆ ಕಾಮಿಲ್*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.