ಎಸ್.ವೈ.ಎಸ್..'ಸಾಂತ್ವನ ವಿಂಗ್ ಏನು ಮಾಡುತ್ತಿದೆ
ಕೇರಳ:- ನಾವು ಮಂಜೇರಿಯ ಮೆಡಿಕಲ್ ಕಾಲೇಜಿನಲ್ಲಿ ಎಸ್.ವೈ.ಎಸ್.ಸಾಂತ್ವನ ವಿಂಗ್ ಅಧೀನದಲ್ಲಿ ಸ್ವಯಂ ಸೇವಕರಾಗಿ ಕರ್ತವ್ಯಕ್ಕಾಗಿ ಆಸ್ಪತ್ರೆಗೆ ತೆರಳಿದ್ದೆವು.
ರೋಗಿಗಳನ್ನು ಕರೆದು ಕೊಂಡು ಬರುವ ವರಾಂಡದಲ್ಲಿ ಕಾಲಿಗೆ ಬಟ್ಟೆ ಸುತ್ತಿದ್ದ ರೀತಿಯಲ್ಲಿ ಒಬ್ಬ ರೋಗಿಯನ್ನು ಅಸ್ವಸ್ಥನಾಗಿ ಮಲಗಳೂ ಆಗದೇ ಕೂರಲೂ ಆಗದೆ ನರಳುತ್ತಿರುವುದನ್ನು ಕಾಣಲು ಸಾಧ್ಯವಾಯಿತು.!
ಕಾಲಿನಿಂದ ಬರುತ್ತಿದ್ದ ದುರ್ಗಂಧದಿಂದ ಪಕ್ಕದಲ್ಲಿ ಕುಳಿತ ರೋಗಿಗಳು ಇವರ ಬಗ್ಗೆ ದೂರು ಹೇಳ ತೊಡಗಿದರು.ಇವರ ಬಗ್ಗೆ ನಾವು ಅಲ್ಲಿ ವಿಚಾರಿಸಿ ನೋಡಿದಾಗ..'ಕಾಲಿನಲ್ಲಿ ಹುಳಗಳು ತುಂಬಿ ಅಸಹ್ಯವಾದ ದುರ್ಗಂಧ ಬರುತ್ತಿದೆ.ಇವರ ಸಹಾಯಕ್ಕಾಗಿಯೋ,ಅಥವಾ ಬಂಧುಗಳು ಯಾರು ಇಲ್ಲದೇ ಇರುವುದು ನಮ್ಮ ಗಮನಕ್ಕೆ ಬಂತು. ನಮ್ಮ ತಂಡದ ನಾಯಕರಾದ *"ನೌಫಲ್ ,ಮಾಳಿಯೇಕ್ಕಲ್"* ನೇತೃತ್ವದಲ್ಲಿ ಅವರನ್ನು ಉನ್ನತ ಮಟ್ಟದ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಹುಳಗಳು(ಚಿತ್ರದಲ್ಲಿ ಕಾಣ ಬಹುದು),ಕಲ್ಮಶ ರಕ್ತದ ದುರ್ಗಂದದಿಂದ ಅಲ್ಲಿಯ ವೈದ್ಯರು ,ನರ್ಸ್ ಗಳು ಇವರ ಸುಶ್ರೂಸತೆ ಮಾಡಲು ಹಿಂದೇಟು ಹಾಕಿದರು.
ಈ ಸಂಧರ್ಭದಲ್ಲಾಗಿತ್ತು ನಮ್ಮ ಕೇರಳ *ಎಸ್ ವೈ ಎಸ್ ಸಾಂತ್ವನ ವಿಂಗ್'* ನ ನಾಯಕರಾದ *ನೌಫಲ್ ಮಾಳಿಯೇಕ್ಕಲ್*ಅವರು ತನ್ನ ಕೈಗಳಿಗೆ ಗ್ಲೌಸ್ ಧರಿಸಿ ಆ ರೋಗಿಯ ಕಾಲಿನಿಂದ ಹುಳಗಳನ್ನು ತೆಗೆದು ಅಲ್ಲಿ ಮದ್ದನ್ನಿಡುವ ಕಾರ್ಯ ಮಾಡುವ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆಯ ಮತ್ತೊಂದು ಮುಖವಾದರು.
ಮತ್ತೆ ಅವರನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ತನ್ನ ಜೀವನವನ್ನೆ ಬಡವರಿಗಾಗಿ ಮೀಸಲಿರಿಸಿದ ನೌಫಲ್ ,ಮಾಳಿಯೇಕ್ಕಲ್ ಅವರಿಗೆ ಇದೆಲ್ಲ ಸಣ್ಣ ಅನುಭವ ಅಷ್ಟೇ......
*ಸಮಯವಿಲ್ಲದ ಲೋಕದಲ್ಲಿ ಬಡ ಜೀವಿಗಳಿಗೆ ಆಸರೆ ಯಾಗುತ್ತಿರುವ SYS ಸಾಂತ್ವನ ವಿಂಗ್ ನ ಪ್ರಮುಖ ಕಾರ್ಯಕರ್ತನಾಗಿ ನೌಫಲ್ ಅವರ ಇಂತಹಾ ಕಾರ್ಯ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ಇದೊಂದು ಮಾದರಿಯಾಗಲಿ,ಎ.ಪಿ.ಉಸ್ತಾದರ ನೇತೃತ್ವದಲ್ಲಿ SYS ಏನು ಮಾಡುತ್ತಿದೆ ,ಎನ್ನುವವರಿಗೆ ಇದೊಂದು ಪಾಠವಾಗಲಿ*.
ಮೂಲ:-ಮಲಯಾಳಂ
ಕನ್ನಡಕ್ಕೆ:-ಪಿ.ಕೆ.ಎಂ.ಉರುವಾಲು ಪದವು
Comments
Post a Comment