Skip to main content

Posts

Showing posts from November, 2019

ಅನುಗ್ರಹಗಳಿಗೆ ಸ್ತುತಿ

🎓🎓 ಮಾಸ್ಟರ್ ಮೈಂಡ್ 🎓🎓   ಅನುಗ್ರಹಗಳಿಗೆ ಸ್ತುತಿ ನಿನ್ನೆ(19/11/2019)ನಾನು ಮತ್ತು ನನ್ನೊಬ್ಬ ಸಹೇೂದರನೊಂದಿಗೆ ಉಳ್ಳಾಲ ದ ಒಂದು ಬಡ ರೇೂಗಿ ಮನೆಗೆ ರಿಲೀಫ್ ಹಣವೊಂದು ನೀಡಲು ಹೇೂಗಿದ್ದೆವು. ಅವರು ಕಳೆದ ಒಂಭತ್ತು ತಿಂಗಳಿನಿಂದ ಎರಡೂ ಕಿಡ್ನಿ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡುತ್ತಿರುವುದಾಗಿ ಹೇಳಿದರು.ಅದಕ್ಕಾಗಿ ಅವರ ಕೈ ಒಳಗೆ ಮೆಷಿನ್ ಕೂಡಾ ಫಿಕ್ಸ್ ಮಾಡಲಾಗಿತ್ತು. ಸ್ವಲ್ಪ ಸಮಯ ಅವರೊಂದಿಗೆ ಕಳೆದವು. ಅವರೊಂದಿಗಿನ ಒಂದರ್ಧ ಗಂಟೆಗಳ ಮಾತುಕತೆ ನಿಜಕ್ಕೂ ನಮ್ಮನ್ನು ಅಲ್ಲಾಹನು ನಮಗೆ ನೀಡಿರುವ ಅನುಗ್ರಹಗಳ ಕುರಿತು ಗಾಢ ಚಿಂತಿಸುವಂತೆ ಮಾಡಿತ್ತು. ಅವರು ಈಗ ವಾರಕ್ಕೆ ಡಯಾಲಿಸೀಸ್ ಮತ್ತು ಮೆಡಿಷಿನ್ ಗೆ ವಾರಕ್ಕೆ 2000/- ವ್ಯಯ ಮಾಡುತ್ತಿದ್ದಾರೆ. ಅವರಿಗೆ ಬದಲಿ ಕಿಡ್ನಿ  ಅಳವಡಿಸಲು ಅವಕಾಶವಿದೆ ಆದರೆ, ಕಿಡ್ನಿ ಖರೀದಿಗೆ 30 ಲಕ್ಷ  ಮತ್ತು ಅಳಡಿಸಲು 30 ಲಕ್ಷ ಒಟ್ಟು 60 + ಲಕ್ಷ ಖರ್ಚು ತಗಲುತ್ತೆ ! ಎಂದು ಅವರು ಹೇಳಿದರು. ಸುಬ್ಹಾನಲ್ಲಾಹ್..... ಇಷ್ಟು ಬೆಲೆ ಕಿಡ್ನಿಗೆ ಮಾತ್ರ ! ಎಂತಹ ಅದ್ಭುತ ಅಲ್ಲಾಹನು ನಮಗೆ ನೀಡಿದ ಅನುಗ್ರಹ.  ياابن ادم اعجبك العجب وانت اعجب مما أعجبك   ಓ ಮನುಷ್ಯ ಹಲವಾರು ಅದ್ಬುತಗಳನ್ನು ಕಂಡು ನೀನು ಆಶ್ಚರ್ಯಗೊಂಡಿರುವೆ, ಆದರೆ ಅವೆಲ್ಲಕ್ಕಿಂತಲೂ ದೊಡ್ಡ ಅದ್ಬುತ ನೀನಾಗಿರು...

ನಾಳೆ ಹುಬ್ಬುರ್ರಸೂಲ್ ಕಾನ್ಫರೆನ್ಸ್:ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ನಾಳೆ ಹುಬ್ಬುರ್ರಸೂಲ್ ಕಾನ್ಫರೆನ್ಸ್:ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ನೆಹರೂ ಮೈದಾನದಲ್ಲಿ ನಾಳೆ ನವೆಂಬರ್ 7 ರಂದು ಗುರುವಾರ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಮೀಲಾದ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 1ಘಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಕೆ ಖಾದರ್ ಹಾಜಿ ಧ್ವಜಾರೋಹಣ ನಡೆಸುವರು. 2 ಗಂಟೆಗೆ ಎಸ್ ವೈ ಎಸ್, ಎಸ್ಸೆಸ್ಸೆಫ್, ಮುಅಲ್ಲಿಮ್ ಸಂಘಟನೆಗಳ ವತಿಯಿಂದ ನಗರದಲ್ಲಿ ಮೀಲಾದ್ ರಾಲಿ ನಡೆಯಲಿದ್ದು ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಚಾಲನೆ ನೀಡುವರು. ಸಂಜೆ 4 ಗಂಟೆಗೆ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೇರವೇರಿಸಲಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಉದ್ಘಾಟಿಸಲಿದ್ದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾ...

RAIMBOW PATLA UNIT

RAIMBOW PATLA UNIT 🌈🌈🌈🌈🌈🌈🌈🌈 ಎಸ್ಸೆಸ್ಸೆಫ್ ಪಟ್ಲ ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ 9ರಿಂದ 15 ವರ್ಷ ಪ್ರಾಯದೊಳಗಿನ ರೈನ್ ಬೋ ಸಮಿತಿಗೆ ಪಟ್ಲದಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಇಂದು ನವೆಂಬರ್ 3ರಂದು ಆಯ್ಕೆ ಮಾಡಲಾಯಿತು. ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಮುನೀರ್ ಲತೀಫಿ ಉಸ್ತಾದರು ನೇತೃತ್ವ ನೀಡಿ ಸಭೆಯನ್ನು ಉದ್ಘಾಟಿಸಿದರು. ಪಟ್ಲ ಮಸೀದಿ ಖತೀಬರಾದ ಎಂ.ಸಿ ಮುಹಮ್ಮದ್ ಫೈಝಿ ಉಸ್ತಾದ್ ಹಾಗೂ ನವಾಝ್ ಸಖಾಫಿ ಅಲ್ ಅಮ್ಜದಿ ಉಸ್ತಾದರು ರೈನ್ ಬೋ ಸಮಿತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತೊಕ್ಕೊಟ್ಟು ಸೆಕ್ಟರ್ ರೈನ್ ಬೋ ಕನ್ವೀನರ್ ಸಾಲಿಮ್, ಎಸ್ಸೆಸ್ಸೆಫ್ ಪಟ್ಲ ಶಾಖಾ ಉಪಾಧ್ಯಕ್ಷರಾದ ಶರೀಫ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಪಟ್ಲ ರೈನ್ ಬೋ ಕನ್ವೀನರ್ ಇಮ್ರಾನ್ ಹಾಗೂ ರೈನ್ ಬೋ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. *ನೂತನ ಪದಾಧಿಕಾರಿಗಳು:* _________________________ ಅಧ್ಯಕ್ಷ: *ಆದಿಲ್* ಉಪಾಧ್ಯಕ್ಷರು: *1. ಅರ್ಫಾಝ್* *2. ದಾವೂದ್* ಪ್ರಧಾನ ಕಾರ್ಯದರ್ಶಿ: *ಜಾವಿದ್* ಜೊತೆ ಕಾರ್ಯದರ್ಶಿಗಳು: *1. ಸಾಬಿಕ್* *2. ರೈಫಾನ್* ಕೋಶಾಧಿಕಾರಿ: *ಇಸ್ಹಾಕ್* ಕಾರ್ಯಕಾರಿ ಸಮಿತಿ ಸದಸ್ಯರು: *ಫಾಝಿಲ್, ನಿಹಾಲ್, ಮುದಸ್ಸಿರ್, ಹಾಫಿಳ್, ಮುನವ್ವಿರ್, ಶಬೀಬ್, ರಿಹಾನ್, ಸಾಹಿಲ್, ಸ್ವಾದಿಖ್, ಅರ್ಷಾದ್* ...