ತಾಜುಲ್ ಉಲಮಾ ಖ.ಸಿ ಆಂಡ್ ನೇರ್ಚೆ ನಡೆಸಲು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಕರೆ.
ತಾಜುಲ್ ಉಲಮಾ ಖ.ಸಿ ಆಂಡ್ ನೇರ್ಚೆ ನಡೆಸಲು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಕರೆ. ಕರ್ನಾಟಕ, ಕೇರಳದ ಹಲವಾರು ಮೊಹಲ್ಲಾಗಳ ಖಾಝಿಯೂ, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಆಗಿದ್ದ ನಮ್ಮೆಲ್ಲರ ಆಧ್ಯಾತ್ಮಿಕ ನಾಯಕ, ಕಣ್ಮರೆಯಾದರೂ ಮನ್ಮರೆಯಾಗದ ವಿದ್ವಾಂಸರ ಪ್ರಶೋಭಿತ ಕಿರೀಟ ತಾಜುಲ್ ಉಲಮಾ ಖ.ಸಿ ರವರ ಏಳನೇ ಉರೂಸ್ ಮುಬಾರಕ್ ಕಾರ್ಯಕ್ರಮ ಪ್ರತೀ ವರ್ಷದಂತೆ ಬಹಳ ವಿಜ್ರಂಭಣೆಯಿಂದ ನಡೆಸಲು ಕೋವಿಡ್ 19 ನಿಮಿತ್ತ ಅಸಾಧ್ಯವಾದುದರಿಂದ ತಾಜುಲ್ ಉಲಮಾ ಖ.ಸಿ ನಾಯಕತ್ವ ನೀಡಿದ ಮೊಹಲ್ಲಾಗಳು, ಸಂಘ ಸಂಸ್ಥೆಗಳು, ಹಿತೈಷಿಗಳು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ನವೆಂಬರ್ 17 ರ ಮಗ್ರಿಬ್ ನಮಾಝಿನ ನಂತರ ಬಹಳ ಅಚ್ಚುಕಟ್ಟಾಗಿ ತಾಜುಲ್ ಉಲಮಾ ಖ.ಸಿ ರವರ ಆಂಡ್ ನೇರ್ಚೆ ನಡೆಸುವಂತೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ತಿಳಿಸಿದ್ದಾರೆ.