Skip to main content

Posts

Showing posts from 2019

ಹೊಸ ಪೌರತ್ವ ಕಾನೂನನ್ನು ವಿರೋಧಿಸಿ ಸಿಡಿದೆದ್ದ ಮಲೇಷ್ಯಾ ಪ್ರಧಾನಿ

ಮಲೇಷ್ಯಾ : ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮದ್ ಅವರು ಭಾರತದ ಹೊಸ ಪೌರತ್ವ ಕಾನೂನನ್ನು ಟೀಕಿಸಿದ್ದಾರೆ, ಇದು ಮುಸ್ಲಿಮರ ವಿರುದ್ಧ ತಾರತಮ್ಯವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಭಾರತದಾದ್ಯಂತ ಮಾರಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ ಎಂದರು. ಕೌಲಾಲಂಪುರ್ ಶೃಂಗಸಭೆಯಲ್ಲಿ. ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) “ಅವಶ್ಯಕತೆ” ಯನ್ನು ಪ್ರಶ್ನಿಸಿದರು,ಮತ್ತು ಭಾರತೀಯರು “70 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ”. ಈ ಕಾನೂನಿನಿಂದ ಜನರು ಸಾಯುತ್ತಿದ್ದಾರೆ. 70 ವರ್ಷಗಳಿಂದ ಅವರು ಯಾವುದೇ ಸಮಸ್ಯೆಯಿಲ್ಲದೆ ನಾಗರಿಕರಾಗಿ ಒಟ್ಟಾಗಿ ವಾಸಿಸುತ್ತಿರುವಾಗ ಇದನ್ನು ಮಾಡುವ ಅವಶ್ಯಕತೆ ಏಕೆ?” ಎಂದು ಕೇಳಿದರು. ಮೂರು ನೆರೆಹೊರೆಯ ದೇಶಗಳಿಂದ “ಕಿರುಕುಳಕ್ಕೊಳಗಾದ” ಅಲ್ಪಸಂಖ್ಯಾತರಿಗೆ ಪೌರತ್ವ ಪಡೆಯುವುದನ್ನು ಸಿಎಎ ಯ ಕಾನೂನು ಹೇಳುತ್ತದೆ ಆದರೆ ಮುಸ್ಲಿಮರಿಗೆ ಯಾಕಿಲ್ಲ? ಎಂದು ಪ್ರಶ್ನಿಸಿದರು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮತ್ತು ಭಾರತದ 1.3 ಬಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 14 ಪ್ರತಿಶತದಷ್ಟು ಇರುವ 200 ಮಿಲಿಯನ್ ಮುಸ್ಲಿಮರನ್ನು ದೂರಮಾಡಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ ಎಂಬ ಆತಂಕವನ್ನು ಕಾನೂನು ಹುಟ್ಟುಹಾಕಿದೆ. “ಈಗ ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುವ ಭಾರತವು ಕೆಲವು ಮುಸ್ಲಿಮರನ್ನು ಅವರ ಪೌರತ್ವವನ್ನು ಕಸಿದುಕೊಳ್ಳಲು ಕ್ರಮ ಕೈಗೊಳ್ಳುತ್ತಿರುವುದನ್ನು ನೋಡಿ ನನಗೆ ವಿ...

ಭ್ರಷ್ಟರನ್ನು ಹೊರತುಪಡಿಸಿ ಉಳ್ಳಾಲದ ಮಹಾ ಜನತೆಯು ಆಡಳಿತಾಧಿಕಾರಿಯನ್ನು ಸ್ವಾಗತಿಸುತ್ತದೆ – ಅಧ್ಯಕ್ಷರು

         ಪ್ರೆಸ್ ನೋಟ್ ಇತಿಹಾಸ ಪ್ರಸಿದ್ಧ ಉಳ್ಳಾಲ ಖುತುಬುಝ್ಝಮಾನ್ ಅಸ್ಸೆಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ. ಮತ್ತು ಕೇಂದ್ರ ಜುಮಾ ಮಸೀದಿ (402) ಇದರ ಆಡಳಿತ ಸಮಿತಿಗೆ 2016-17 ನೇ ಸಾಲಿನಲ್ಲಿ  ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ  ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ  ಅಬ್ದುಲ್ ರಶೀದ್ ಮತ್ತು ಸಹವರ್ತಿಗಳು ಕಳೆದ ಮೂರುವರೆ ವರ್ಷದಿಂದ ಕಾನೂನು ಉಲ್ಲಂಘನೆ,  ಅವ್ಯವಹಾರ,  ಭ್ರಷ್ಟಾಚಾರ,  ದಬ್ಬಾಳಿಕೆ,  ಸರ್ವಾಧಿಕಾರ ಮತ್ತು  ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿದೆ. ಇವೆಲ್ಲವನ್ನು ಮನಗಂಡು  ಸರಕಾರದ ಸ್ವಾಯತ್ತ ಸಂಸ್ಥೆಯಾದ  ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು,ಉಳ್ಳಾಲ ದರ್ಗಾ ಆಡಳಿತ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶವನ್ನು (KSBW/MSC/08/DKD/2016/-17) ದಿನಾಂಕ 21-11-2019 ಗುರುವಾರ ದಂದು ಹೊರಡಿಸಿದೆ. ಇದನ್ನು ಉಳ್ಳಾಲದ ಮಹಾ  ಜನತೆಯು ಸ್ವಾಗತಿಸುತ್ತದೆ. ಆದರೆ  ಅಧಿಕಾರ ದಾಹಿಗಳಾದ ಉಚ್ಚಾಟಿತ ಅಬ್ದುಲ್ ರಶೀದ್ ನೇತೃತ್ವದ ಅನಧಿಕೃತ ಆಡಳಿತ ಸಮಿತಿ ಮತ್ತು ಅವರ ಕೆಲವು ಬೆಂಬಲಿಗರು, ಗಲಭೆಗಳಿಗೆ ಪ್ರಚೋದನೆ ನೀಡಿ ಜನರಿಗೆ ವಕ್ಫ್ ಕಾಯ್ದೆ ಮತ್ತು ಆದೇಶದ ಬಗ್ಗೆ ತಪ್ಪು...

ಉಳ್ಳಾಲ ದರ್ಗಾ ಆಡಳಿತಾಧಿಕಾರಿ ನೇಮಕ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ – ಇಬ್ರಾಹೀಂ ಗೂನಡ್ಕ

ಮಂಗಳೂರು : ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಸರಕಾರ ಕುತಂತ್ರ ನಡೆಸುತ್ತಿದೆ ಎಂಬ ವಿಚಾರವು ಸತ್ಯಕ್ಕೆ ದೂರವಾದದ್ದು ಎಂದು ಇಬ್ರಾಹೀಂ ಗೂನಡ್ಕ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಉಳ್ಳಾಲ ಸಯ್ಯದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನನ್ನನ್ನು ನೇಮಕ ಮಾಡಿದೆ. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಉಳ್ಳಾಲ ದರ್ಗಾ ಸಮಿತಿಯವರು ಮನವಿ ಸಲ್ಲಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯವು ಪ್ರಕರಣದ ಬಗ್ಗೆ ತನಿಖೆ ನಡೆಸಿ ಆಡಳಿತ ಅಧಿಕಾರಿ ನೇಮಕಾತಿ ಬಗ್ಗೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ವಿಷಾದನೀಯ ಎಂದರು. ಪ್ರಸ್ತುತ ಉಳ್ಳಾಲ ಸಯ್ಯದ್ ಮದನಿ ದರ್ಗಾ ರಾಜ್ಯ ವಕ್ಫ್ ಮಂಡಳಿಯ ಆಧೀನದಲ್ಲಿದ್ದು, ಈ ಸಂಸ್ಥೆಯ ದೈನಂದಿನ ಆಡಳಿತಕ್ಕೆ ಸಂಬಂಧಿಸಿದ ವಿಷಯ, ನೂತನ ಆಡಳಿತ ಮಂಡಳಿಯ ರಚನೆಯ ಸಿದ್ಧತೆ, ಮತ್ತು ಪ್ರತೀ 5 ವರ್ಷಕ್ಕೆ ಒಮ್ಮೆ ನಡೆಯುವ ಉರೂಸ್’ಗೆ ಪೂರ್ವ ತಯಾರಿ ಮಾಡುವಂತೆ ನನ್ನನ್ನು ಸರ್ಕಾರ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ ಎಂದು ತಿಳಿಸಿದರು. ವಕ್ಫ್ ಮಂಡಳಿಗೆ ಒಳಪಟ್ಟ ಮಸೀದಿ ಅಥಾವ ದರ್ಗಾಗಳಲ್ಲಿ ಗೊಂದಲಗಳು ನಿರ್ಮ...

ಡಿಸೆಂಬರ್ -7 ಶನಿವಾರ ಅಸ್ತ ಆದಿತ್ಯವಾರ ರಾತ್ರಿ ರಬೀಉಲ್ ಆಖಿರ್ 11 ಜೀಲಾನಿ ದಿನ

ನಾಳೆ  ಡಿಸೆಂಬರ್ -7 ಶನಿವಾರ ಅಸ್ತ ಆದಿತ್ಯವಾರ ರಾತ್ರಿ ರಬೀಉಲ್ ಆಖಿರ್ 11 ಜೀಲಾನಿ ದಿನವಾಗಿರುತ್ತದೆ ಎಂದು ಉಳ್ಳಾಲದ ಸರ್ವ ಮೊಹಲ್ಲಾಗಳ ಗೌರವಾನ್ವಿತ ಖಾಝಿಯೂ, ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ಆದ  ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ಘೋಷಿಸಿದ್ದಾರೆ. --------------------------------

ಅನುಗ್ರಹಗಳಿಗೆ ಸ್ತುತಿ

🎓🎓 ಮಾಸ್ಟರ್ ಮೈಂಡ್ 🎓🎓   ಅನುಗ್ರಹಗಳಿಗೆ ಸ್ತುತಿ ನಿನ್ನೆ(19/11/2019)ನಾನು ಮತ್ತು ನನ್ನೊಬ್ಬ ಸಹೇೂದರನೊಂದಿಗೆ ಉಳ್ಳಾಲ ದ ಒಂದು ಬಡ ರೇೂಗಿ ಮನೆಗೆ ರಿಲೀಫ್ ಹಣವೊಂದು ನೀಡಲು ಹೇೂಗಿದ್ದೆವು. ಅವರು ಕಳೆದ ಒಂಭತ್ತು ತಿಂಗಳಿನಿಂದ ಎರಡೂ ಕಿಡ್ನಿ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡುತ್ತಿರುವುದಾಗಿ ಹೇಳಿದರು.ಅದಕ್ಕಾಗಿ ಅವರ ಕೈ ಒಳಗೆ ಮೆಷಿನ್ ಕೂಡಾ ಫಿಕ್ಸ್ ಮಾಡಲಾಗಿತ್ತು. ಸ್ವಲ್ಪ ಸಮಯ ಅವರೊಂದಿಗೆ ಕಳೆದವು. ಅವರೊಂದಿಗಿನ ಒಂದರ್ಧ ಗಂಟೆಗಳ ಮಾತುಕತೆ ನಿಜಕ್ಕೂ ನಮ್ಮನ್ನು ಅಲ್ಲಾಹನು ನಮಗೆ ನೀಡಿರುವ ಅನುಗ್ರಹಗಳ ಕುರಿತು ಗಾಢ ಚಿಂತಿಸುವಂತೆ ಮಾಡಿತ್ತು. ಅವರು ಈಗ ವಾರಕ್ಕೆ ಡಯಾಲಿಸೀಸ್ ಮತ್ತು ಮೆಡಿಷಿನ್ ಗೆ ವಾರಕ್ಕೆ 2000/- ವ್ಯಯ ಮಾಡುತ್ತಿದ್ದಾರೆ. ಅವರಿಗೆ ಬದಲಿ ಕಿಡ್ನಿ  ಅಳವಡಿಸಲು ಅವಕಾಶವಿದೆ ಆದರೆ, ಕಿಡ್ನಿ ಖರೀದಿಗೆ 30 ಲಕ್ಷ  ಮತ್ತು ಅಳಡಿಸಲು 30 ಲಕ್ಷ ಒಟ್ಟು 60 + ಲಕ್ಷ ಖರ್ಚು ತಗಲುತ್ತೆ ! ಎಂದು ಅವರು ಹೇಳಿದರು. ಸುಬ್ಹಾನಲ್ಲಾಹ್..... ಇಷ್ಟು ಬೆಲೆ ಕಿಡ್ನಿಗೆ ಮಾತ್ರ ! ಎಂತಹ ಅದ್ಭುತ ಅಲ್ಲಾಹನು ನಮಗೆ ನೀಡಿದ ಅನುಗ್ರಹ.  ياابن ادم اعجبك العجب وانت اعجب مما أعجبك   ಓ ಮನುಷ್ಯ ಹಲವಾರು ಅದ್ಬುತಗಳನ್ನು ಕಂಡು ನೀನು ಆಶ್ಚರ್ಯಗೊಂಡಿರುವೆ, ಆದರೆ ಅವೆಲ್ಲಕ್ಕಿಂತಲೂ ದೊಡ್ಡ ಅದ್ಬುತ ನೀನಾಗಿರು...

ನಾಳೆ ಹುಬ್ಬುರ್ರಸೂಲ್ ಕಾನ್ಫರೆನ್ಸ್:ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ನಾಳೆ ಹುಬ್ಬುರ್ರಸೂಲ್ ಕಾನ್ಫರೆನ್ಸ್:ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ನೆಹರೂ ಮೈದಾನದಲ್ಲಿ ನಾಳೆ ನವೆಂಬರ್ 7 ರಂದು ಗುರುವಾರ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಮೀಲಾದ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 1ಘಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಕೆ ಖಾದರ್ ಹಾಜಿ ಧ್ವಜಾರೋಹಣ ನಡೆಸುವರು. 2 ಗಂಟೆಗೆ ಎಸ್ ವೈ ಎಸ್, ಎಸ್ಸೆಸ್ಸೆಫ್, ಮುಅಲ್ಲಿಮ್ ಸಂಘಟನೆಗಳ ವತಿಯಿಂದ ನಗರದಲ್ಲಿ ಮೀಲಾದ್ ರಾಲಿ ನಡೆಯಲಿದ್ದು ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಚಾಲನೆ ನೀಡುವರು. ಸಂಜೆ 4 ಗಂಟೆಗೆ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೇರವೇರಿಸಲಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಉದ್ಘಾಟಿಸಲಿದ್ದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾ...

RAIMBOW PATLA UNIT

RAIMBOW PATLA UNIT 🌈🌈🌈🌈🌈🌈🌈🌈 ಎಸ್ಸೆಸ್ಸೆಫ್ ಪಟ್ಲ ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ 9ರಿಂದ 15 ವರ್ಷ ಪ್ರಾಯದೊಳಗಿನ ರೈನ್ ಬೋ ಸಮಿತಿಗೆ ಪಟ್ಲದಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಇಂದು ನವೆಂಬರ್ 3ರಂದು ಆಯ್ಕೆ ಮಾಡಲಾಯಿತು. ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಮುನೀರ್ ಲತೀಫಿ ಉಸ್ತಾದರು ನೇತೃತ್ವ ನೀಡಿ ಸಭೆಯನ್ನು ಉದ್ಘಾಟಿಸಿದರು. ಪಟ್ಲ ಮಸೀದಿ ಖತೀಬರಾದ ಎಂ.ಸಿ ಮುಹಮ್ಮದ್ ಫೈಝಿ ಉಸ್ತಾದ್ ಹಾಗೂ ನವಾಝ್ ಸಖಾಫಿ ಅಲ್ ಅಮ್ಜದಿ ಉಸ್ತಾದರು ರೈನ್ ಬೋ ಸಮಿತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತೊಕ್ಕೊಟ್ಟು ಸೆಕ್ಟರ್ ರೈನ್ ಬೋ ಕನ್ವೀನರ್ ಸಾಲಿಮ್, ಎಸ್ಸೆಸ್ಸೆಫ್ ಪಟ್ಲ ಶಾಖಾ ಉಪಾಧ್ಯಕ್ಷರಾದ ಶರೀಫ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಪಟ್ಲ ರೈನ್ ಬೋ ಕನ್ವೀನರ್ ಇಮ್ರಾನ್ ಹಾಗೂ ರೈನ್ ಬೋ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. *ನೂತನ ಪದಾಧಿಕಾರಿಗಳು:* _________________________ ಅಧ್ಯಕ್ಷ: *ಆದಿಲ್* ಉಪಾಧ್ಯಕ್ಷರು: *1. ಅರ್ಫಾಝ್* *2. ದಾವೂದ್* ಪ್ರಧಾನ ಕಾರ್ಯದರ್ಶಿ: *ಜಾವಿದ್* ಜೊತೆ ಕಾರ್ಯದರ್ಶಿಗಳು: *1. ಸಾಬಿಕ್* *2. ರೈಫಾನ್* ಕೋಶಾಧಿಕಾರಿ: *ಇಸ್ಹಾಕ್* ಕಾರ್ಯಕಾರಿ ಸಮಿತಿ ಸದಸ್ಯರು: *ಫಾಝಿಲ್, ನಿಹಾಲ್, ಮುದಸ್ಸಿರ್, ಹಾಫಿಳ್, ಮುನವ್ವಿರ್, ಶಬೀಬ್, ರಿಹಾನ್, ಸಾಹಿಲ್, ಸ್ವಾದಿಖ್, ಅರ್ಷಾದ್* ...

ನವೆಂಬರ್ 10 ಆದಿತ್ಯವಾರ ರಬೀವುಲ್ ಅವ್ವಲ್ 12,

ನವೆಂಬರ್ 10 ಆದಿತ್ಯವಾರ ರಬೀವುಲ್ ಅವ್ವಲ್ 12, ಲೋಕಾನುಗ್ರಹಿ ( ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ).. 🔰  👉👉 *ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್* ಇಂದು 29-10-2019 ಮಂಗಳವಾರ ಸಫರ್ ತಿಂಗಳು 30 ಪೂರ್ತಿಯಾಗಿ ನಾಳೆ 30-10-2019 ಬುಧವಾರ ರಬೀವುಲ್ ಅವ್ವಲ್ ತಿಂಗಳ ಒಂದು ಆಗಲಿದ್ದು, 10-11-2019 ಆದಿತ್ಯವಾರ ರಬೀವುಲ್ ಅವ್ವಲ್ 12 ( ಲೋಕಾನುಗ್ರಹಿ  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ )ಆಗಿರುತ್ತದೆ ಎಂದು *ಗೌರವಾನ್ವಿತ ಉಳ್ಳಾಲ ಖಾಝಿ* ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of Ullala Qurrathussadath Seyyid Fazal Koyamma Thangal Al Bukhari has announced that 30-10-2019 is first of Rabeevul avval and Prophet s.a Birthday will be held on Sunday (10-11-2019)

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪೆರಿಯಪಾದೆ ಬ್ರಾಂಚ್ ಮಹಾಸಭೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪೆರಿಯಪಾದೆ ಬ್ರಾಂಚ್ ಮಹಾಸಭೆ ಇಂದು ಪೆರಿಯಪಾದೆಯಲ್ಲಿ ನಡೆಯಿತು.  ಎಸ್.ವೈ.ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಶ್ರಫ್ ಮದನಿ ಬಂಟ್ವಾಳ ಉದ್ಘಾಟಿಸಿ ವಿಷಯ ಮಂಡಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಎಸ್.ಆರ್.ಟಿ.ಸಿ ವೀಕ್ಷಕರಾಗಿ ಆಗಮಿಸಿ ಚುನಾವಣಾ ತರಗತಿ ನಡೆಸಿದರು. ನಂತರ ಹೊಸ ಸಮಿತಿಗೆ ರೂಪುಗೊಡಲಾಯಿತು. ಅಧ್ಯಕ್ಷರಾಗಿ ಆದಂ ಗಣಪಲಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಆದಂ ಗೇಣಿ, ಕೋಶಾಧಿಕಾರಿಯಾಗಿ ಇಬ್ರಾಹಿಮ್ ಗಣಪಳಿಕೆ ಹಾಗೂ ಹನ್ನೊಂದು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಹಾರಿಸ್ ಪೆರಿಯಪಾದೆ ಸ್ವಾಗತಿಸಿ, ಝಮೀರ್ ಪೆರಿಯಪಾದೆ ವಂದಿಸಿದರು.

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ "ಹಳೆಬೇರು ಹೊಸಚಿಗುರು" ಕಾರ್ಯಕ್ರಮ

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ "ಹಳೆಬೇರು ಹೊಸಚಿಗುರು" ಕಾರ್ಯಕ್ರಮ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವತಿಯಿಂದ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಛೇರಿಯಲ್ಲಿ *"ಹಳೆ ಬೇರು ಹೊಸ ಚಿಗುರು"* ಎಂಬ ಕಾರ್ಯಕ್ರಮ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉದ್ಘಾಟಿಸಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು. ಎಸ್.ವೈ.ಎಸ್ ನೇತಾರರಾದ ಅಬ್ದುಲ್ಲಾ ಕೊಳಕೆ, ಉಸ್ಮಾನ್ ಮಲಿಕ್ ನಂದಾವರ ತಮ್ಮ ಬಾಲ್ಯದಲ್ಲಿನ ಸಂಘಟನೆಯ ಅನುಭವವನ್ನು ವಿವರಿಸಿದರು. ಇಸ್ಹಾಕ್ ಝುಹುರಿ ಸೂರಿಂಜೆ "ಹಳೆಬೇರು ಹೊಸಚಿಗುರು" ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಸಹಿತ ಡಿವಿಷನ್ ಮತ್ತು  ಸೆಕ್ಟರಿನ ಎಕ್ಸಿಕ್ಯೂಟಿವ್ ಸದಸ್ಯರು ಭಾಗವಹಿಸಿದರು. 🔗ಹಾರಿಸ್ ಪೆರಿಯಪಾದೆ🔗 _(ಪ್ರಧಾನ ಕಾರ್ಯದರ್ಶಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್)_

ಪ್ರವಾಹ ಸಂತ್ರಸ್ತರಿಗಾಗಿ ಬರೋಬ್ಬರಿ ಮೂರು ಲಕ್ಷದಷ್ಟು ವಸ್ತುಗಳ ಶೇಖರಣೆ

ಕರ್ನಾಟಕದ ಪ್ರವಾಹ ಪೀಡಿತ ಮಕ್ಕಳಿಗಾಗಿ ಎಸ್ಸೆಸ್ಸೆಫ್ ಪಟ್ಲ ಶಾಖೆಯ ವತಿಯಿಂದ ಶಾಲಾ ಪುಸ್ತಕಗಳು, ಬ್ಯಾಗ್ ಗಳು, ವಸ್ತ್ರಗಳು ಹಾಗು ಇನ್ನಿತರ ಅಗತ್ಯ ವಸ್ತುಗಳ ಸಂಗ್ರಹಣೆ. ಮನ ಮಿಡಿದ ಪಟ್ಲ, ಕಲ್ಲಾಪು ನಿವಾಸಿಗಳಿಂದ ಹರಿದು ಬಂದ ಸಹಾಯದ ಹಸ್ತ. ಪ್ರವಾಹ ಸಂತ್ರಸ್ತರಿಗಾಗಿ ಬರೋಬ್ಬರಿ ಮೂರು ಲಕ್ಷದಷ್ಟು ವಸ್ತುಗಳ ಶೇಖರಣೆ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಇದರ ನಿರ್ದೇಶದಂತೆ ಆಗಸ್ಟ್ 25 ರಂದು ರಾಜ್ಯಾದ್ಯಂತ ಪ್ರವಾಹ ಪೀಡಿತ ಮಕ್ಕಳಿಗಾಗಿ ಪುಸ್ತಕ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿರ್ದೇಶನುಸಾರ SSF ಪಟ್ಲ ಶಾಖೆಯ ವತಿಯಿಂದ ನಡೆದ ಪುಸ್ತಕ ಶೇಖರಣಾ ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಲಕ್ಷದಷ್ಟು ಮೌಲ್ಯದ ಶಾಲಾ ನೋಟ್ಸ್, ಬ್ಯಾಗ್, ಡ್ರೆಸ್ ಹಾಗು ಅಗತ್ಯ ವಸ್ತುಗಳ ಸಂಗ್ರಹಣೆ ನಡೆಸಲಾಯಿತು. ಉಳ್ಳಾಲದ ಪಟ್ಲ ಹಾಗು ಕಲ್ಲಾಪು ಪರಿಸರ ನಿವಾಸಿಗಳು ಸ್ಪಂದಿಸಿ ಸಹಾಯ ಹಸ್ತ ಚಾಚಿದರು. ಪಟ್ಲ ಶಾಖಾಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದರು. ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಲ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಸ್ತಫ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಬಶೀರ್ ಲತೀಫಿ, ಎಸ್ ವೈ ಎಸ್ ...

ಮುಹರ್ರಮ್ ತಿಂಗಳ ಚಂದ್ರದರ್ಶನ

ಮುಹರ್ರಮ್  ತಿಂಗಳ  ಚಂದ್ರದರ್ಶನ ಸೆಪ್ಟೆಂಬರ್ 9 ಮತ್ತು 10 ರಂದು ತಾಸೂಆ, ಆಶೂರಾ ಸುನ್ನತ್ ಉಪವಾಸ ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಗಲ್ ಘೋಷಣೆ ಇಂದು (ಶನಿವಾರ ಅಸ್ತ ಆದಿತ್ಯವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1 ನಾಳೆ ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು, ಸೆಪ್ಟೆಂಬರ್ 9 ಮತ್ತು 10 ರಂದು ತಾಸೂಆ, ಆಶೂರಾ  ಸುನ್ನತ್ ಉಪವಾಸ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಘೋಷಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 01-09-2019 is first of Muharram and Thaasua, Aashurawill be held on September 9 &10. In sha Allah

SSF ದ.ಕ. ಬ್ಲಡ್ ಸೈಬೋ 100ನೇ ರಕ್ತದಾನ ಶಿಬಿರ ಕಾರ್ಯಕ್ರಮ

ಮಂಗಳೂರು(ಮುಗುಳ್ನಗೆ) : ನಗರದ ಪ್ರತಿಷ್ಠಿತ ಐದು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಬ್ಲಡ್ ಸೈಬೋ ಬೃಹತ್ 100ನೇ ರಕ್ತದಾನ ಶಿಬಿರವನ್ನು ನಗರದ ಪುರಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಸ್ಸೆಸ್ಸೆಫ್ ನಡೆಸುವ ಈ ಮಾನವೀಯ ಸೇವೆ ಶ್ಲಾಘನೀಯ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಅಗ್ನಿಶಾಮಕ ದಳ ಅಧಿಕಾರಿ ಮುಹಮ್ಮದ್ ನವಾಝ್ ಝುಲ್ಫಿಕಾರ್ ಮಾತನಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್‌ಕೆಎಂ ಶಾಫಿ ಸಅದಿ ಮಾನವತಾ ಸಂದೇಶ ನೀಡಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಸ್ವಾತಂತ್ರ್ಯ ಸಂದೇಶ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ವಹಿಸಿದ್ದರು. 141 ಬಾರಿ ರಕ್ತದಾನ ಮಾಡಿದ ಡಾ.ಸುದೇಶ್ ಶಾಸ್ತ್ರಿ, 105 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಹಾಗೂ 53 ಬಾರಿ ರಕ್ತದಾನ ಮಾಡಿದ ...