ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು ✍ ಹಝುಮ ಯೂನುಸ್ ಇಮ್ದಾದಿ! ಈ ಹೆಸರು ಕೇಳದವರು ಇರಲಾರರು. ಬರಹ ರಂಗಕ್ಕೆ ಹೊಸ ರೂಪ ಕೊಟ್ಟ ಅಪರೂಪದ ಬರಹಗಾರ ಇವರು. ಸುನ್ನೀವಾಣಿ, ಸುನ್ನತ್ ಏಕ ಕಾಲಕ್ಕೆ ಹೊರತರುವ ಮೂಲಕ ಬರಹ ರಂಗದಲ್ಲಿ ಕ್ರಾಂತಿ ಸೃಷ್ಟಿಸಿದ ಪ್ರಬುದ್ಧ ಲೇಖಕ. ಸುನ್ನೀವಾಣಿ ಮೂಲಕ ಬೆಳಕಿಗೆ ಬಂದು ಸುನ್ನತ್ ಮೂಲಕ ಮನೆಮಾತಾದ ಯೂನುಸ್ ಇಮ್ದಾದಿ ಯವರ ಕುರಿತು ಒಂದು ಕಿರು ಬರಹವಷ್ಟೇ ಇದು. ಅದು ಐದು ವರ್ಷಗಳ ಹಿಂದಿನ ಮಾತು. ನಾನು ಮತ್ತು ಯೂನುಸ್ ಇಮ್ದಾದಿ ಒಟ್ಟಿಗೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಮಯ. ಕರ್ನಾಟಕದ ಮುಸ್ಲಿಂ ಪತ್ರಿಕಾ ರಂಗ ದಲ್ಲಿ ಅತೀ ಹೆಚ್ಚು ಪ್ರಚಾರ ಮೂಲಕ ಮನೆಮಾತಾದ ಸುನ್ನತ್ ಎಂಬ ಮಾಸಿಕಕ್ಕೆ ಯೂನುಸ್ ಇಮ್ದಾದಿಯವರನ್ನು ಸಂಪಾದಕರಾಗಿ ನೇಮಕ ಮಾಡಲಾಯಿತು. ಇವರ ನೇಮಕದ ಬಗ್ಗೆ ಹಿರಿಯ ಬರಹಗಾರರೊಬ್ಬರು ನನ್ನಲ್ಲಿ ಅಸಹನೆ ವ್ಯಕ್ತಪಡಿಸಿದ್ದರು. "ಪೆನ್ನು ಹಿಡಿದ ಕೂಡಲೇ ಸಂಪಾದಕ ಮಾಡಿದ್ದು ಸರಿಯಲ್ಲ" ಎಂಬ ವಾದವಾಗಿತ್ತು ಅವರದ್ದು. ನಂತರ ಅವರೇ ಯೂನುಸ್ ಇಮ್ದಾದಿ ಯವರ ಬರಹವನ್ನು ಬಾಯಿ ತುಂಬಾ ಹೊಗಳಿದ್ದರು. ಕರ್ನಾಟಕ ದಲ್ಲಿ ವಿಶೇಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬರಹ ರಂಗದಲ್ಲಿ ನೂರಕ್ಕೂ ಮಿಕ್ಕ ಬರಹಗಾರರಿದ್ದಾರೆ. ಆದರೆ, ಯೂನುಸ್ ಇಮ್ದಾದಿ ಯವರಂತ ಬರಹ ಗಾರರು ಅಪರೂಪ. ಓದುಗರನ್ನು ಆಕರ್ಷಿಸುವ ಬರಹ ಶೈಲಿ, ಪ್ರತೀ ತಿಂಗಳು ಆಕರ್ಷಣೀಯ ಬರಹ ಮೂಲಕ ಪತ್ರಿಕೆ ಓದುಗರಿಗೆ ಬೋರ್ ...