Skip to main content

ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ



ಎಸ್ಕೆಎಸ್ಸೆಸ್ಸೆಫ್ ನಾಯಕ ಲತೀಫ್ ನೆಲ್ಲಿಚ್ಚೋಡ್ ಬರೆಯುತ್ತಾರೆ..

ಮೋದಿ ಹಾಗೂ ಕಾಂತಪುರಂ ವೇದಿಕೆ ಹಂಚುವಾಗ

ಜೋರ್ಡಾನ್ ರಾಜ ಎರಡನೆಯ ಕಿಂಗ್ ಅಬ್ದುಲ್ಲಾರ ಭಾರತ ಸಂದರ್ಶನದ ಭಾಗವಾಗಿ ಆಥಿತ್ಯ ಸಮಾರಂಭದಲ್ಲಿ ಸರಕಾರದ ಆಹ್ವಾನಿತರಾಗಿಯಾಗಿದೆ ಕಾಂತಪುರಂ ಉಸ್ತಾದ್ ದೆಹಲಿಗೆ ತಲುಪಿದ್ದು.

ಭಯಾನಕವಾದ ಸನ್ನಿವೇಶವೊಂದು ಅಲ್ಲಿ ಸಂಭವಿಸಿದೆ ಎಂಬ ರೀತಿಯಲ್ಲಾಗಿತ್ತು ಈ ಒಂದು ಸಮ್ಮಿಲವನ್ನು ಹಲವಾರು ಜನರು ಸಾಮಾಜಿಕ ತಾಣಗಳಲ್ಲಿ ಇಲ್ಲ ಸಲ್ಲದ ಅಪವಾದದೊಂದಿಗೆ ಪ್ರಚಾರಪಡಿಸುತ್ತಿದ್ದರು.
ಅಲ್ಲದಿದ್ದರೂ ಯಾವುದೇ ಒಂದು ವಿಷಯವನ್ನು ಸ್ಪಷ್ಟವಾಗಿ ಕಲಿಯದೆ, ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಬರೆಯುವ ಅಥವಾ ಹೇಳುವ ಒಂದು ಪ್ರಹಸನವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚಾಗಿ ಕಂಡುಬರುವಂತದ್ದು‌..

ಇಲ್ಲಿನ ವಿಷಯಕ್ಕೆ ಬರುವ ಮೊದಲಾಗಿ ಚರಿತ್ರೆಯ ಕಡೆ ಒಮ್ಮೆ ಹಿಂತಿರುಗಿ ಹೋಗಿ ಅವಲೋಕನ ನಡೆಸೋಣ.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಂಧರ್ಭ  ಜಂರದಲ್ಲಿ ಕಲ್ಲೆಸೆಯುವ ವೇಳೆಯಲ್ಲಿ ಪ್ರವಾದಿಯ ಬಳಿ ಒಬ್ಬರು ಬಂದು ಕೇಳುತ್ತಾರೆ.
ಓ ಹಬೀಬರೇ, ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು? ಅದಕ್ಕೆ ಹಬೀಬರು ಯಾವುದೇ ಉತ್ತರ ನೀಡಲಿಲ್ಲ.
ಆ ವ್ಯಕ್ತಿಯು ಅದೇ ಪ್ರಶ್ನೆಯನ್ನು ನಾಲ್ಕು ಬಾರಿ ಆವರ್ತಿಸಿ ಕೇಳಿದರೂ  ಮೌನವಾಗಿತ್ತು ಹಬೀಬರ ಉತ್ತರ.
ಹಜ್ಜ್ ಕರ್ಮವು ಪೂರ್ತಿಗೊಳಿಸಿ ಒಂಟೆಯ ಮೇಲೇರಿ ಮರಳುವ ಸಂಧರ್ಭದಲ್ಲಿ ಹಬೀಬರು ಸ್ವಹಾಬಿವರ್ಯರಲ್ಲಿ ಅನ್ವೇಷಿಸುತ್ತಾರೆ. " ಎಲ್ಲಿ, ನನ್ನಲ್ಲಿ ಪ್ರಶ್ನಿಸಿದ ವ್ಯಕ್ತಿ ಎಲ್ಲಿ?
ಅತ್ಯಂತ ಶ್ರೇಷ್ಠವಾದ ಜಿಹಾದ್ ಯಾವುದು ಎಂಬುವುದು ತಾನೇ ತಮ್ಮ ಸಂಶಯ. *ಕ್ರೂರನಾದ ಆಡಳಿತಗಾರನ ಮುಂದೆ ಧೈರ್ಯದಿಂದ ಸತ್ಯವನ್ನು ತೆರೆದು ಹೇಳುವುದಾಗಿದೆ ಅತ್ಯಂತ ಶ್ರೇಷ್ಟವಾದ ಧರ್ಮ ಸಮರ.* ಎಂದಾಗಿತ್ತು ಹಬೀಬರ ಉತ್ತರ.

ಈ ಒಂದು ಕಾರ್ಯವೇ ಮೋದಿ ಜೊತೆ ವೇದಿಕೆ ಹಂಚಿದಾಗ ಕಾಂತಪುರಂ ಉಸ್ತಾದ್ ನಿರ್ವಹಿಸಿದ್ದು!? ಅಥವಾ ಇಲ್ಲಿನ ಮುಸ್ಲಿಮರನ್ನು ವಂಚಿಸುವ ಕಾರ್ಯವಾಗಿತ್ತೇ ಅಲ್ಲಿ ನಡೆದದ್ದು?

ಚರಿತ್ರೆಪರವಾದ ಕಾರ್ಯವಾಗಿತ್ತು ಅಲ್ಲಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ವಹಿಸಿದ್ದು ಎಂದು ಅನ್ವೇಷಿಸುವಾಗ ಅರ್ಥವ್ಯತ್ಯಾಸವಿಲ್ಲದೆ ಯಾರಿಗೂ ಕೂಡಾ ಮನವರಿಕೆಯಾಗಬಹುದು.

*ಸಿರಿಯಾ ವಿಷಯದಲ್ಲಿ ವಿಶ್ವಸಂಸ್ಥೆಯ ಮೌನ, ಹಸುವಿನ ಹೆಸರಿನಲ್ಲಿ ಉತ್ತರ ಭಾರತದಲ್ಲಿ ತಾಂಡವವಾಡುತ್ತಿರುವ ಹಲ್ಲೆ-ಕೊಲೆಗಳು,  ಒಂದು ಹೊತ್ತಿನ ಊಟಕ್ಕಾಗಿ ಒಂದಷ್ಟು ಧಾನ್ಯಗಳು ಕದ್ದಿದ್ದಕ್ಕಾಗಿ ಕೊಲ್ಲಲ್ಪಟ್ಟ ಅಟ್ಟಪಾಡಿಯ ಮಧು, ಬಾಬರೀ ಮಸೀದಿಯ ಜಾಗ ವಿಂಗಡಿಸುವ ತರ್ಕಗಳು, ನ್ಯಾಯಾಲಯದ ಹೊರಗಿನ ಚರ್ಚೆಗಳು, ಯುವ ತಲೆಮಾರಿಗೆ ಉನ್ನತ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೇಂದ್ರ ಸರಕಾರವು ನೀಡಬೇಕಾದ ಅನಿವಾರ್ಯ ಸವಲತ್ತುಗಳ ಪದ್ದತಿ, ಇನ್ನಿತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ  ವಿಷಯಗಳ ಕುರಿತಾಗಿಯೂ, ಶರೀಅತ್ ಸಂರಕ್ಷಣೆಯ ಪರವಾಗಿಯೂ ಅಧಿಕಾರಿಗಳ ಅರಮನೆಯಲ್ಲಿ ಹೋಗಿ ಧೈರ್ಯದಿಂದ ಹೇಳಿ ಬರುವವರಾಗಿದ್ದಾರೆ ಎಪಿ ಅಬೂಬಕ್ಕರ್ ಮುಸ್ಲಿಯಾರ್.*

ಕಾಂತಪುರಂ ಉಸ್ತಾದ್ ನೇತೃತ್ವ ನೀಡುವ ಸಂಘಟನೆಯ ಜೊತೆ ಸಂಘಟನಾತ್ಮಕ ಭಿನ್ನಾಭಿಪ್ರಾಯವನ್ನು ಪ್ರಕಟಿಸುತ್ತಲೇ ನನ್ನ ಮನದಾಳದಿಂದ ನಾನು ಹೇಳಲು ಬಯಸುವುದೇನೆಂದರೆ,
ಸತ್ಯದ ಹಾಗೂ ಒಳಿತಿನ ಪ್ರಕಾಶವನ್ನು ಬಿತ್ತರಿಸುವವರು ನಮ್ಮ ವಿರುದ್ದ ಪಕ್ಷದಲ್ಲಿದ್ದರೂ ಕೂಡಾ ಅದನ್ನು ಅಂಗೀಕರಿಸಸುವುದರ ಜೊತೆಗೆ ಪ್ರಶಂಸಿಸಲು ನನಗಿಷ್ಟ.

ಮೂಲ: ಮಲಯಾಳಂ.
ಕನ್ನಡಕ್ಕೆ: ಇಮ್ತಿ ಬೈರಿಕಟ್ಟೆ.

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.