ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್. ಅಕ್ಟೋಬರ್ 27 ಇಂದು (ಗುರುವಾರ ) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ
ಎಟ್ಟಿಕುಳಂ ತಾಜುಲ್ ಉಲಮಾ ಮಖಾಂ ಉರೂಸ್. ಅಕ್ಟೋಬರ್ 27 (ಇಂದು) ಧ್ವಜಾರೋಹಣ ಮತ್ತು 29 ರಂದು ಸಮಾರೋಪ ಪ್ರಾರ್ಥನಾ ಸಮ್ಮೇಳನ ನಡೆಯಲಿದೆ. ಪಯ್ಯನ್ನೂರು | ಎಟಿಕ್ಕಳಂ. ತಾಜುಲ್ ಉಲಮಾ ಒಂಬತ್ತನೇ ಉರೂಸ್ ಸಮಾರಂಭ ಇಂದಿನಿಂದ 29 ರವರೆಗೆ ನಡೆಯಲಿದೆ. ಸಮಸ್ತ ಕೇರಳ ಜಮೀಯತುಲ್ ಉಲಮಾದ ಅಧ್ಯಕ್ಷರೂ, ಅನೇಕ ಮಹಲ್ಲುಗಳ ಖಾಝಿ ಮತ್ತು ಖ್ಯಾತ ವಿದ್ವಾಂಸರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಅಂತ್ಯ ವಿಶ್ರಮ ಸ್ಥಳವಾದ ಎಟ್ಟಿಕುಳಂನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಖ್ಯಾತ ವಿದ್ವಾಂಸರು, ಸಾದಾತುಗಳು ಮತ್ತು ನಾಯಕರು ನೇತೃತ್ವ ವಹಿಸಲಿದ್ದಾರೆ. ಝಿಯಾರತ್, ಉದ್ಘಾಟನಾ ಸಂಗಮ, ಸ್ವಲಾತ್, ಮೌಲಿದ್, ರಾತೀಬ್, ಬುರ್ದಾ ಮಜ್ಲಿಸ್, ಉದ್ಬೋಧನೆ ಪ್ರಾಸ್ಥಾನಿಕ ಸಂಗಮಗಳು ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 27 ಮಧ್ಯಾಹ್ನ 2 ಗಂಟೆಗೆ ವಳಪಟ್ಟನಂ, ಮಾಟ್ಟೂಲ್ ತಂಙಲ್, ಮಾಡಾಯಿಪಳ್ಳಿ, ತಲಕ್ಕಲ್ ಪಳ್ಳಿ, ರಾಮಂತಳಿ, ಎಝಿಪಳ್ಳಿ ಎಂಬೀ ಮಖ್ಬರಗಳಲ್ಲಿ ನಡೆಯುವ ಝಿಯಾರತಿಗೆ ಸೈಯದ್ ಜಲಾಲುದ್ದೀನ್ ತಂಗಳ್ ವಳಪಟ್ಣಂ, ಸೈಯದ್ ಜುನೈದ್ ಅಲ್ ಬುಖಾರಿ ಮಾಟ್ಟೂಲ್, ಸೈಯದ್ ಹೈದ್ರೂಸ್ ತಂಗಳ್ ಮಾಟ್ಟುಲ್, ಸೈಯದ್ ಇಸ್ಮಾಯಿಲ್ ಹಾದಿ ತಂಗಳ್ ಪಾಣೂರು, ಸೈಯದ್ ಮುಹಮ್ಮದ್ ಶಾಫಿ ಬಾ...