Skip to main content

Posts

Showing posts from June, 2019

ಯಂಡೆ ಕುಞಿ ಸಿರಾಜ್ ಯುಡೆ ಜನಾಝ ಕಿಟ್ಟಿಯೋ.. ಮರ್ಝೂಖಿ- ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಾತು...

ಹೌದು, ಈ ದುಃಖತಪ್ತ ಮಾತು ಕಣ್ಣಂಬನಿ ಮಿಡಿಯುತ್ತಾ ನನಗೆ ಕರೆಮಾಡಿ ಹೇಳಿದ್ದು *" ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರಾಗಿದ್ದರು.* ನಾನು‌ ಹಾಸನದತ್ತ ಪಯಣ ಬೆಳೆಸಿದ ಆದಿಯಿಂದ ಜನಾಝ ಸಿಗುವವರೆಗೂ ನದಿಗೆ ಕಾಲೆಡವಿ ಬಿದ್ದು ಕಾಣದಿದ್ದ ಸಿರಾಜ್ ನ ಪಾವನ ಜನಾಝ ಸಿಕ್ಕಿತಾ ಇಕ್ಬಾಲ್ ಎಂದು ನನಗೆ ಪದೇ ಪದೇ ಕರೆಮಾಡಿ ಕೇಳುತ್ತಿದ್ದರು. ಆ ನಂಡೆ ಕುಂಞಿ ಎಂಬ ಪದ ಈಗಲೂ ನನ್ನ ಕಿವಿಗೆ ಮಾರ್ದನಿಸುತ್ತಿದೆ‌. ಹೇ.. ಸಿರಾಜ್ ನೀನು ಅದೆಷ್ಟು ಭಾಗ್ಯವಂತ ಕಣೋ, ನದಿ ತಡಿಯಲ್ಲಿ ಬೃಹತ್ ಸರೀಸೃಪಗಳು, ವಿಶಿಷ್ಟ ರೀತಿಯ ಮೀನುಗಳು, ಮೊಸಳೆಗಳು ಇದ್ದರೂ ಕೂಡಾ ನಿನ್ನ ಶರೀರಕ್ಕೆ ಯಾವುದೇ ಕೊರತೆಯಾಗದಿರಲು *ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಕುರ್ರತುಸ್ಸದಾತ್ ಸಯ್ಯದ್  ಕೂರಃ ತಙಲ್* ರಂತಹ ಹಲವು ವಿದ್ವಾಂಸರು, ನಿನಗಾಗಿ ಕಂಬನಿ ಮಿಡಿದ ನೂರಾರು ಜೀವಗಳು ಓದಿದ ನಾರಿಯತ್ ಸ್ವಲಾತುಗಳು, ಪ್ರಾರ್ಥನೆಯ ಫಲವೆಂಬಂತೆ ಅದೇ ರೀತಿ ನೀನು ಕಂಠಪಾಠ ಮಾಡಿದ 15 ಜುಝ್ಅ ಹಾಗು ಕಲಿತ ಇಲ್ಮ್ ನ  ಫಲವೆಂಬಂತೆ ನಿನ್ನ ಶರೀರ ಪೂರ್ಣ ಸಲಾಮತ್ ಆದ ರೀತಿಯಲ್ಲಿ ಮೇಲೆಕ್ಕೆತ್ತಲಾಯಿತ್ತಲ್ಲವೇ. ಅದರಲ್ಲೂ ಆ ನದಿಯಲ್ಲಿ ಬಿದ್ದು ಮರಣಹೊಂದಿದವರ ಮಯ್ಯಿತ್ ಈವರೆಗೆ ಪರಿಪೂರ್ಣವಾಗಿ ಸಿಕ್ಕಿರಲಿಲ್ಲವಂತೆ ಎಂದು ಅಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯವರು, ಪೋಲೀಸರು ಹೇಳಿದ್ದು ಸಿರಾಜಿನ ಶರೀರ ಪೂರ್ಣವಾಗಿ ಸಿಕ್ಕಿದಾಗ ಅವರೆಲ್ಲಾ ಮೂಖವಿಸ್ಮಿತರಾಗಿ " ಇವನೆಷ್ಟು ಭಾಗ...

ಆಭರಣ ದ ಝಕಾತ್

ಆಭರಣ ದ ಝಕಾತ್ ತೋಕೆ ಉಸ್ತಾದರ ಸುನ್ನೀ ವಾಣಿಯಿಂದ ಅಲ್ಪ ಭಾಗವಿದು ಲೇಖಕ: ತೋಕೆ ಉಸ್ತಾದ್ ಚಿನ್ನ ಮತ್ತು ಬೆಳ್ಳಿ ಗಳಿಂದ ಉಂಟು ಮಾಡಿದ ಆಭರಣ ಗಳಲ್ಲಿ ಝಕಾತ್ ಇದೆಯೇ ಎಂಬುವುದರಲ್ಲಿ ಪೂರ್ವಿಕರೆಡೆಯಲ್ಲಿ ಭಿನ್ನಮತವಿದೆ. ಸ್ವಹಾಬಿಗಳ ಪೈಕಿ ಅಬ್ದುಲ್ಲಾ ಹಿಬ್ನು ಉಮರ್ ರಳಿಯಲ್ಲಾಹು ಅನ್ಹುಮ್, ಜಾಬಿರ್ ಬಿನ್ ಅಬ್ದುಲಾ ರಳಿಯಲ್ಲಾಹು ಅನ್ಹುಮ್, ಆಯಿಶಾ ರಳಿಯಲ್ಲಾಹು ಅನ್ಹಾ ತಾಬಿಉಗಳ ಪೈಕಿ ಹಸನುಲ್ ಬಸ್ವರೀ ರಳಿಯಲ್ಲಾಹು ಅನ್ಹು, ಇಬ್ ನುಲ್ ಮುಸಯ್ಯಬ್ ರಳಿಯಲ್ಲಾಹು ಅನ್ಹು, ಶಅಬೀ ರಳಿಯಲ್ಲಾಹು ಅನ್ಹು, ಇಮಾಮರುಗಳ ಪೈಕಿ ಇಮಾಮ್ ಮಾಲಿಕ್ ರಳಿಯಲ್ಲಾಹು ಅನ್ಹು, ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು, ಇಮಾಮ್ ಅಹ್ಮದ್ ಬಿನ್ ಹಂಬಲ್ ರಳಿಯಲ್ಲಾಹು ಅನ್ಹು, ಇಮಾಮ್ ಇಸ್ಹಾಖ್ ಇಬ್ನು ರಾಹವೈಹಿ ರಳಿಯಲ್ಲಾಹು ಅನ್ಹು, ಮುಂತಾದವರು ಆಭರಣಗಳಲ್ಲಿ ಝಕಾತ್ ಇಲ್ಲ ಎಂಬ ನಿಲುವನ್ನು ತಾಳಿದ್ದಾರೆ. ಅದೇ ವೇಳೆ ಉಮರ್ ರಳಿಯಲ್ಲಾಹು ಅನ್ಹು, ಅಮ್ರ್ ಬಿನ್ ಅಸ್ವ್ ರಳಿಯಲ್ಲಾಹು ಅನ್ಹು, ಇಬ್ನು ಮಸ್ ಊದ್ ರಳಿಯಲ್ಲಾಹು ಅನ್ಹು, ಇಬ್ನು ಅಬ್ಬಾಸ್ ರಳಿಯಲ್ಲಾಹು ಅನ್ಹು ಹಾಗೂ ಇಮಾಮರುಗಳ ಪೈಕಿ ಇಮಾಮ್ ಝುಹ್ರಿ ರಳಿಯಲ್ಲಾಹು ಅನ್ಹು, ಇಮಾಮ್ ಸೌರೀ ರಳಿಯಲ್ಲಾಹು ಅನ್ಹು ಮುಂತಾದವರು ಝಕಾತ್ ಕಡ್ಡಾಯ ಎಂದು ತಿಳಿಸಿದ್ದಾರೆ. ಆಭರಣ ಗಳಲ್ಲಿ ಝಕಾತ್ ಕಡ್ಡಾಯ ವಿಲ್ಲ ವೆಂದು ಹೇಳಿದ ವರ ಪುರಾವೆ ಗಳು ಈ ಕೆಳಗಿನವುಗಳಾಗಿವೆ. ಇಬ್ನು ಉಮರ್ ರಳಿಯಲ್ಲಾಹು ಅನ್ಹು ರವರಿಂದ ವರದಿ; ಪ್...

ಈದ್ ಮುಬಾರಕ್ ಎಂದು ಹೇಳಬಾರದೇ..

ಈದ್ ಮುಬಾರಕ್ ಎಂದು ಹೇಳಬಾರದೇ.. ತೋಕೆ ಉಸ್ತಾದರ ಸುನ್ನೀ ವಾಣಿಯಿಂದ* ಲೇಖನ: ತೋಕೆ ಉಸ್ತಾದ್ ▪▪▪▪ ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದರ ಬಗ್ಗೆ ಪೂರ್ವಿಕ ಇಮಾಮರುಗಳ ಉಲ್ಲೇಖ ನೋಡಿ. ಇಮಾಮ್ *ಝಕರಿಯ್ಯಲ್ ಅನ್ಸಾರಿ* ರಹ್ಮತುಲ್ಲಾಹಿ ಅಲೈಹಿ ರವರ *"ಅಸ್ನಲ್ ಮುತ್ವಾಲಿಬ್"* ಎಂಬ ಗ್ರಂಥ ದಲ್ಲಿ ಹೇಳುವುದನ್ನು ನೋಡಿ.. وأجاب عنه شيخ الإسلام حافظ عصره ابن حجر بعد اطلاعه على ذلك بأنها مشروعة ، واحتج له بأن البيهقيعقد لذلك بابا فقال : باب ما روي في قول الناس بعضهم لبعض في يوم العيد تقبل الله منا ومنك ، وساق ما ذكره من أخبار وآثار ضعيفة لكن مجموعها يحتج به في مثل ذلك ، ثم قال : [ ص: 402 ] ويحتج لعموم التهنئة لما يحدث من نعمة ، أو يندفع من نقمة بمشروعية سجود الشكر والتعزية ، وبما في الصحيحين { عن كعب بن مالكفي قصة توبته لما تخلف عن غزوة تبوك أنه لما بشر بقبول توبته ومضى إلى النبي صلى الله عليه وسلم قام إليه طلحة بن عبيد الله فهنأه } *"ಈ ಬಗ್ಗೆ ಕೇಳಲಾದ ಪ್ರಶ್ನೆ ಯೊಂದಕ್ಕೆ ಹಾಫಿಳ್ ಇಬ್ನು ಹಜರಿಲ್ ಅಸ್ಖಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೀಗೆ ಉತ್ತರಿಸಿದ್ದಾರೆ.* *ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದು ಸುನ್ನತಾಗಿದೆ.*  ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು ತನ್ನ ಗ್...

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ ♻♻♻ ✅ ಇಸ್ಲಾಂ - ಮಕ್ಕಾದಲ್ಲಿ ಜನಿಸಿದ ಮುಹಮ್ಮದ್ (ಸ) ರ ಮೂಲಕ ಪ್ರಬೋಧನೆ ❌ವಹ್ಹಾಬಿಸಂ - ನಜ್ದ್ ನಲ್ಲಿ ಜನಿಸಿದ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ಸ್ಥಾಪಿಸಿದ್ದು. 👉 ನಜ್ದ್ ನಿಂದ ಪಿಶಾಚಿಯ ಕೊಂಬು ಪ್ರತ್ಯೇಕವಾಗುತ್ತದೆ. - ಹದೀಸ್.❗ ✅ ಇಸ್ಲಾಂ - ಶಾಂತಿ ಸಮಾಧಾನದೊಂದಿಗೆ ಪ್ರಚಾರವಾದದ್ದು. ❌ವಹ್ಹಾಬಿಸಂ - ಅಕ್ರಮ, ಅನೀತಿ, ಕೊಲೆ, ಕೊಳ್ಳೆ ಯ ಮೂಲಕ ಪ್ರಚಾರವಾದದ್ದು. 👉 ಕೃಪೆ - ಮೊಯ್ದು ಮೌಲವಿಯ ಬರಹ ಸಮಾಹಾರ 🔹ಇಸ್ಲಾಂ ಭಾರತದಲ್ಲಿ / ಕೇರಳದಲ್ಲಿ ✅ ಇಸ್ಲಾಂ- ಸ್ವಹಾಬಿವರ್ಯ ಮಾಲೀಕರು ದೀನಾರ್ (ರ) ಪ್ರಚುರಪಡಿಸಿದರು ❌ವಹ್ಹಾಬಿಸಂ - ಮಿಸ್ರ್ ನಿಂದ ಬಂದ ಜಮಾಲುದ್ದೀನ್ ಅಫ್ಘಾನೀ ಕೊಂಡುಬಂದರು  ✅ ಇಸ್ಲಾಂ ,- ಅಲ್ಲಾಹನು ಸ್ಥಳ - ಕಾಲಕ್ಕೆ ಅತೀತ. ❌ವಹ್ಹಾಬಿಸಂ - ಅಲ್ಲಾಹನಿಗೆ ಕೈಯಿದೆ, ಎರಡೂ ಕೈಗಳು ಬಲಭಾಗದಲ್ಲೇ. ಕುಳಿತುಕೊಳ್ಳುತ್ತಾನೆ, ನಿಲ್ಲುತ್ತಾನೆ,  ಉಳಿಯುತ್ತಾನೆ, ಹತ್ತುತ್ತಾನೆ.....!! ✅ ಇಸ್ಲಾಂ ಸಹಾಯಗಳು ಅಲ್ಲಾಹನಿಂದಲೇ.. ❌ವಹ್ಹಾಬಿಸಂ - ಅಲ್ಲಾಹನ ಸಹಾಯಕ್ಕೆ ವ್ಯಾಪ್ತಿ ಇಟ್ಟರು. ಭೌತಿಕ / ಭೌತಿಕ.❗ ✅ ಇಸ್ಲಾಂ - ಸ್ವಹಾಬಿಗಳು ನಕ್ಷತ್ರ ಸಮಾನರು. ಅವರನ್ನು ಅನುಸರಿಸಿದರೆ ನೀವು ಸತ್ಯಪಥದಲ್ಲೇ ಇರುವಿರಿ - ಹದೀಸ್. ❌ವಹ್ಹಾಬಿಸಂ - ಸ್ವಹಾಬಿಗಳ ಪೃವೃತ್ತಿ ಧರ್ಮದಲ್ಲಿ ಪುರಾವೆಯಲ್ಲ. 👉 ಸ್ತ್ರೀ ಜುಮುಅ ಜಮಾಅತ್, ತರಾವೀಹ್ ನ ರಕ್ಅತ್...

ಈ ಸೂರತಿನ ಸಂಖ್ಯಾ ಅದ್ಭುತವನ್ನೊಮ್ಮೆ ನೋಡಿ..

ಈ ಸೂರತಿನ ಸಂಖ್ಯಾ ಅದ್ಭುತವನ್ನೊಮ್ಮೆ ನೋಡಿ.. *سورة القدر* إنا               (1)   ١ أنزلناه         (2)   ٢ في             (3)   ٣ ليلة            (4)   ٤ القدر           (5)   ٥ وما             (6)   ٦ أدراك          (7)   ٧ ما               (8)   ٨ ليلة            (9)    ٩ القدر         (10)   ١٠ ليلة          (11)   ١١ القدر        (12)   ١٢ خير         (13)   ١٣ من          (14)   ١٤ الف         (15) ...

ಈದುಲ್ ಫಿತ್ರ್ ನ ಕೆಲವು ಸಂಶಯ ನಿವಾರಣೆಗಳು

ಈದುಲ್ ಫಿತ್ರ್ ನ ಕೆಲವು ಸಂಶಯ ನಿವಾರಣೆಗಳು ✍🏻 *ಮುಹಮ್ಮದ್ ಆರೀಫ್ ಸಖಾಫಿ ಪುಂಜಾಲಕಟ್ಟೆ* muhammadarifma403276@gmail.com *1.* ಈದ್ ಸ್ನಾನದ ನಿಯ್ಯತ್ ಹೇಗೆ....? =ಈದುಲ್ ಫಿತ್ರ್ ನ ಸುನ್ನತ್ತಾದ ಸ್ನಾನವನ್ನು ನಾನು ನಿರ್ವಹಿಸುವೆನು(ಸಂಕಲ್ಪಿಸುವುದು) *2.* ಪೆರ್ನಾಳಿನ ಅತ್ಯಂತ ಉತ್ತಮ ಉಡುಪು ಮತ್ತು ಅದರ ಬಣ್ಣ ಯಾವುದು....? =ಬೆಲೆಬಾಳುವ ಹೊಸ ಬಿಳಿ ವಸ್ತ್ರ. *3.* ಪೆರ್ನಾಳ್ ನಂದು ಸುಗಂಧ ದ್ರವ್ಯ ಯಾವಾಗ ಉಪಯೋಗಿಸಬೇಕು....? =ಪೆರ್ನಾಳಿನ ಅರ್ಧರಾತ್ರಿಯಿಂದಿಡಿದು ಸೂರ್ಯಸ್ತಮಾನದ ತನಕ *4.* ಸುಗಂಧ ದ್ರವ್ಯ ಸುವಾಸಿನಿಸುವಾಗ ಸ್ವಲಾತ್ ಹೇಳಲು ಸುನ್ನತ್ತಿದೆಯೇ....? =ಸುನ್ನತ್ತಿಲ್ಲ ಆದರೆ ಇಸ್ತಿಗ್ಘಾರ್ ಹೇಳಲು ಸುನ್ನತ್ತಿದೆ. *5.* ಪೆರ್ನಾಳ್ ನಮಾಝಿನ ಮೊದಲು ತಿನ್ನುವುದು ಸುನ್ನತ್ತಿದೆಯಾ.....? =ಈದುಲ್ ಫಿತ್ರ್ ನಂದು ಈದ್ ನಮಾಝಿನ ಮುಂಚೆ ತಿನ್ನುವುದು ಸುನ್ನತ್. ಖರ್ಜೂರ ಉತ್ತಮ. ಅದರ ಲೆಕ್ಕ ಬೆಸಸಂಖ್ಯೆಯಾಗಿರಲು ಸುನ್ನತ್. ಆದರೆ ಈದುಲ್ ಆಝ್ಹಾದಲ್ಲಿ ನಮಾಝ್ ನಂತರ ತಿನ್ನುವುದು ಸುನ್ನತ್. *6.* ಈದ್ ಆಶೆಂಸೆಯನ್ನು ಅರ್ಪಿಸಬಹುದೇ....?ಮತ್ತು ಅದರ ವಿಧಿಯೇನು...? =ಅರ್ಪಿಸಬಹುದುˌಸುನ್ನತ್. *7.* ಆಶೆಂಸೆಯನ್ನರ್ಪಿಸಲು ಆರಂಭವಾಗುವ ಮತ್ತು ಕೊನೆಗೊಳ್ಳುವ ಸಮಯ ಯಾವಾಗ...? =ಶವ್ವಾಲ್ ಬಾನಚಂದ್ರ ಕಾಣುವುದರೊಂದಿಗೆ ಆರಂಭಗೊಂಡು ಅಂದಿನ ಮಗ್ರಿಬ್ ತನಕ. *8.* ಆಶೆಂಸೆ ಅರ್ಪಿಸಬೇಕಾದ ವಚ...

ಈದ್ ಸಂದೇಶ

ಸಮಸ್ತ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು. ಈ ಈದ್ ನಮ್ಮಲ್ಲಿ ಸಂತೋಷ, ಹೊಸತನ,ಸಾಮರಸ್ಯ,ನೆಮ್ಮದಿ, ಶಾಂತಿ ಮತ್ತು ಪ್ರೀತಿಯ ಸಂದೇಶವಾಗಿಸಿ ಅನ್ಯೋನ್ಯತೆಯ ಆತ್ಮೀಯ ಬಂಧವನ್ನು ವೃದ್ಧಿಸಲಿ ಎಂದು ಪ್ರಾರ್ಥಿಸುತ್ತೇನೆ. By - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

ಈದ್ ಸಂದೇಶ

ರಂಝಾನ್ ನೀಡಿದ ಪಾವಿತ್ರತೆ ಉಳಿಸಿಕೊಂಡು ಹಬ್ಬ ಆಚರಿಸಲು ಖುರ್ರತುಸ್ಸಾದಾತ್ ಕೂರತ್ ತಂಙಳ್ ಕರೆ ರಂಝಾನ್ ತಿಂಗಳ ವೃತಾಚರಣೆ ಮುಗಿದು ವಿಶ್ವಾಸಿ ಸಮುದಾಯವು ಪವಿತ್ರ ಈದುಲ್ ಫಿತ್ರ್ ಹಬ್ಬ ಕ್ಕೆ ತೆರಳುತಿದ್ದು ರಂಝಾನ್ ತಿಂಗಳಲ್ಲಿ ನಡೆಸಿದ ಆತ್ಮಶುದ್ದಿ  ಮತ್ತು ಪವಿತ್ರತೆ ಸಂದೇಶಗಳನ್ನು ಸಮಾಜದಲ್ಲಿ ಹರಡುವಂತಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ  ಖಾಝಿ ಖುರ್ರತ್ತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಮದನಿ ಅಲ್ ಬುಖಾರಿ ಕೂರತ್ ಕರೆ ನೀಡಿದ್ದಾರೆ. ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗ ಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಈದ್ ಆಚರಣೆ ಆತ್ಮ ಶುಧ್ಧಿ ಮತ್ತು  ಸಾಮರಸ್ಯದ ಸಂದೇಶ ನೀಡುವಂತಾಗಲಿ  ಖಾಝಿ ಬೇಕಲ್ ಉಸ್ತಾದ್. ಒಂದು ತಿಂಗಳ ಕಠಿಣ ವ್ರತ ಮುಗಿದು ಮುಸ್ಲಿಂ ಸಮುದಾಯ ಪವಿತ್ರ ಈದುಲ್ ಫಿತರ್ ಆಚರಣೆಗೆ ತೆರಳುತ್ತಿದ್ದು , ಅದು ಒಂದು ತಿಂಗಳ ಕಾಲ ಗಳಿಸಿದ ಆತ್ಮ ಶುಧ್ದಿ ಮತ್ತು ಪರಸ್ಪರ ಸೌಹಾರ್ದ ದ ಸಂದೇಶಗಳನ್ನು ಸಮಾಜದಲ್ಲಿ ಸಾರುವಂತಾಗಬೇಕೆಂದು ದಕ್ಷಿಣ ಕರ್ನಾಟಕದ ಸಂಯುಕ್ತ ಮೊಹಲ್ಲಾಗಳ ಖಾಝಿ ಯಾಗಿರುವ  ಮೌಲಾನಾ ಪಿ.ಎಂ.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್  ಕರೆ ನೀಡಿದ್ದಾರೆ ರಂಝಾನ್ ತಿಂಗಳು ಮನುಷ್ಯನ ಆಂತರಿಕ ಮತ್ತು ಬಾಹ್ಯ ಪರಿಶುಧ್ದಿಯನ್ನು ಸಾಧಿಸಲು ಸೃಷ್ಟಿ ಕರ್ತನಾದ ಅಲ್ಲ...

>> ಬುಧವಾರ ಈದುಲ್ ಫಿತ್ರ್ >}> ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ

>> ಬುಧವಾರ ಈದುಲ್ ಫಿತ್ರ್ >}> ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಸೋಮವಾರ ಅಸ್ತ ಮಂಗಳವಾರ) ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ 05-06-2019 ಬುಧವಾರ ಈದುಲ್ ಫಿತ್ರ್ ( ಪೆರ್ನಾಲ್ ಹಬ್ಬ ) ಆಗಿರುತ್ತದೆ ಎಂದು *ಗೌರವಾನ್ವಿತ ಉಳ್ಳಾಲ ಖಾಝಿ* ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of Ullala Qurrathussadath Seyyid Fazal Koyamma Thangal Al Bukhari has announced that 05-06-2019 is first of Shawwal and Eid ul Fithr will be celebrated on Wednesday (05-06-2019)

ಉಳ್ಳಾಲ ತ್ವೈಬಾ ಸ್ಕೂಲ್ ಆಫ್ ಕುರ್ ಆನ್ ವಾರ್ಷಿಕ ಮತ್ತು ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ

ಉಳ್ಳಾಲ : ತ್ವೈಬಾ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರೆಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತ್ವೈಬಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಎರಡು ವರ್ಷ ಕಲಿತ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಣೆ ಮತ್ತು ತ್ವೈಬಾ ಸ್ಕೂಲ್ ಆಫ್ ಕುರ್ ಆನ್ ವೀಕೆಂಡ್ ಕ್ಲಾಸ್ ಇದರ ಎರಡನೇ ವಾರ್ಷಿಕ ಕಾರ್ಯಕ್ರಮ ತಾಜುಲ್ ಉಲಮಾ ಆಡಿಟೇೂರಿಯಂ ಮೇಲಂಗಡಿಯಲ್ಲಿ ಸೈಯ್ಯಿದ್ ಜಲಾಲ್ ತಂಙಳ್ ಅಳೇಕಲ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.                ತ್ವೈಬಾ ಸಂಸ್ಥೆಯ ನಿರ್ದೇಶಕರಾದ ಎಂ.ಸಿ ಮುಹಮ್ಮದ್ ಫೈಝಿ ಪಟ್ಲ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು.ತ್ವೈಬಾ ಮಹಿಳಾ ಶರೀಅತ್ ಕಾಲೇಜಿನ ಫ್ರೋಫೆಸರ್ ಇಸ್ಮಾಯಿಲ್ ನಈಮಿ ಮಂಗಳಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯಲ್ಲಿ ಶಿಕ್ಷಣ ಪೂರ್ತೀಕರಿಸಿದ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ನೀಡಲಾಯಿತು ಮತ್ತು ಉನ್ನತ ಅಂಕ ಪಡೆದ ವಿದ್ಯಾರ್ಥಿನಿ ಸಯ್ಯಿದತ್ ಜಶೀರಾ ಇಲ್ಹಾಮ್ ಬೀವಿ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.                   ತ್ವೈಬಾ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫ ಮಾಸ್ಟರ್ ಉಳ್ಳಾಲ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.