Skip to main content

ಈದ್ ಮುಬಾರಕ್ ಎಂದು ಹೇಳಬಾರದೇ..

ಈದ್ ಮುಬಾರಕ್ ಎಂದು ಹೇಳಬಾರದೇ..
ತೋಕೆ ಉಸ್ತಾದರ ಸುನ್ನೀ ವಾಣಿಯಿಂದ*
ಲೇಖನ: ತೋಕೆ ಉಸ್ತಾದ್
▪▪▪▪
ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದರ ಬಗ್ಗೆ ಪೂರ್ವಿಕ ಇಮಾಮರುಗಳ ಉಲ್ಲೇಖ ನೋಡಿ.

ಇಮಾಮ್ *ಝಕರಿಯ್ಯಲ್ ಅನ್ಸಾರಿ* ರಹ್ಮತುಲ್ಲಾಹಿ ಅಲೈಹಿ ರವರ *"ಅಸ್ನಲ್ ಮುತ್ವಾಲಿಬ್"* ಎಂಬ ಗ್ರಂಥ ದಲ್ಲಿ ಹೇಳುವುದನ್ನು ನೋಡಿ..

وأجاب عنه شيخ الإسلام حافظ عصره ابن حجر بعد اطلاعه على ذلك بأنها مشروعة ، واحتج له بأن البيهقيعقد لذلك بابا فقال : باب ما روي في قول الناس بعضهم لبعض في يوم العيد تقبل الله منا ومنك ، وساق ما ذكره من أخبار وآثار ضعيفة لكن مجموعها يحتج به في مثل ذلك ، ثم قال : [ ص: 402 ] ويحتج لعموم التهنئة لما يحدث من نعمة ، أو يندفع من نقمة بمشروعية سجود الشكر والتعزية ، وبما في الصحيحين { عن كعب بن مالكفي قصة توبته لما تخلف عن غزوة تبوك أنه لما بشر بقبول توبته ومضى إلى النبي صلى الله عليه وسلم قام إليه طلحة بن عبيد الله فهنأه }

*"ಈ ಬಗ್ಗೆ ಕೇಳಲಾದ ಪ್ರಶ್ನೆ ಯೊಂದಕ್ಕೆ ಹಾಫಿಳ್ ಇಬ್ನು ಹಜರಿಲ್ ಅಸ್ಖಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೀಗೆ ಉತ್ತರಿಸಿದ್ದಾರೆ.* *ಪೆರ್ನಾಳಿನಂದು ಮಂಗಳಾಶಂಸೆ ಹೇಳುವುದು ಸುನ್ನತಾಗಿದೆ.*
 ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು ತನ್ನ ಗ್ರಂಥ ದಲ್ಲಿ ಇದರ ಬಗ್ಗೆ ಪ್ರತ್ಯೇಕ ಅಧ್ಯಾಯವೊಂದನ್ನು ನೀಡಿದ್ದನ್ನು ಅವರಿದಕ್ಕೆ ಪುರಾವೆ ಯಾಗಿಸಿದ್ದಾರೆ. ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು ಹೀಗೆ ಅಧ್ಯಾಯವನ್ನು ನೀಡಿದ್ದಾರೆ. *'ಪೆರ್ನಾಳಿನಂದು ಒಬ್ಬ ಮುಸ್ಲಿಂ ಮತ್ತೊಬ್ಬ ಮುಸ್ಲಿಮನನ್ನು ಕಾಣುವಾಗ "ತಖಬ್ಬಲಲ್ಲಾಹು ಮಿನ್ನಾ ವಮಿಂಕ"' ಎಂದು ಹೇಳುವುದರ ಬಗ್ಗೆ ತಿಳಿಸುವ ಅಧ್ಯಾಯ.* ಈ ಅಧ್ಯಾಯ ದಲ್ಲಿ ಇಮಾಮ್ ಬೈಹಖಿ ರಳಿಯಲ್ಲಾಹು ಅನ್ಹು ರವರು ಹಲವು ದುರ್ಬಲವಾದ ಹದೀಸ್ ಮತ್ತು ಸ್ವಹಾಬಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. *ಆದರೆ ಒಟ್ಟಾರೆ ಯಾಗಿ ಅವುಗಳನ್ನು ಮಂಗಳಾಶಂಸೆ ಹೇಳುವುದಕ್ಕೆ ಪುರಾವೆ ಯಾಗಿಸಬಹುದು. ನಂತರ ಇಮಾಮ್ ಬೈಹಖೀ ರಳಿಯಲ್ಲಾಹು ಅನ್ಹು ರವರು*
 *ಮೊತ್ತ ದಲ್ಲಿ ಮಂಗಳಾಶಂಸೆ ಹೇಳುವುದಕ್ಕೆ ಯಾವುದಾದರೂ ಅನುಗ್ರಹ ದೊರೆತರೆ ಅಥವಾ ವಿಪತ್ತೊಂದು ತೊಲಗಿದರೆ ಶುಕ್ರ್ ನ ಸುಜೂದ್ ಮಾಡುವುದು ಸುನ್ನತ್ತಾಗಿತುತ್ತದೆ ಎಂಬುದನ್ನು ಪುರಾವೆ ಯಾಗಿಸಿದ್ದಾರೆ.ಅದೇ ರೀತಿ ಕಅ್ ಬುಬ್ನು ಮಾಲಿಕ್ ರಳಿಯಲ್ಲಾಹು ಅನ್ಹು ರವರ ತೌಬಾವನ್ನು ಸ್ವೀಕರಿಸಿದಾಗ ಅವರಿಗೆ ತ್ವಲ್ ಹತ್ ಬಿನ್ ಉಬೈದಿಲ್ಲಾಹೀ ರಳಿಯಲ್ಲಾಹು ಅನ್ಹು ರವರು ಮಂಗಳಾಶಂಸೆ ಹೇಳಿದ ಘಟನೆ ಯನ್ನೂ ಪುರಾವೆ ಯಾಗಿಸಿದ್ದಾರೆ."* (ಅಸ್ನಲ್ ಮತ್ವಾಲಿಬ್ ಭಾಗ-1, ಪುಟ-283)
ಅದೇ ರೀತಿ "ಇಖ್ ನಾಅ್" 174/1,
ಜಮಲ್ 246/6
ಮುಂತಾದ ಹಲವು ಗ್ರಂಥ ಗಳಲ್ಲಿ ಕಾಣಬಹುದು. ಇದರಿಂದ ಪೆರ್ನಾಲ್ ದಿವಸ ಮಂಗಳಾಶಂಸೆ ಅರ್ಪಿಸುವುದು ಸುನ್ನತ್ತಾಗಿದೆಯೆಂದು ಸ್ಪಷ್ಟ ವಾಗುತ್ತದೆ.

*ಮಂಗಳಾಶಂಸೆ ಹೇಳಬೇಕಾದ ಪದ*

'ತಖಬ್ಬಲಲ್ಲಾಹು ಮಿನ್ನಾ ವಮಿಂಕ' ಎಂಬ ಝಕರಿಯ್ಯಲ್ ಅನ್ಸಾರಿ ರಹ್ಮತುಲ್ಲಾಹಿ ಅಲೈಹಿ ರವರ ಮಾತನ್ನು ವ್ಯಾಖ್ಯಾನಿಸುತ್ತಾ ಇಮಾಮ್ *ಸುಲೈಮಾನುಲ್ ಜಮಲ್* ಹೇಳುತ್ತಾರೆ :

قوله : تقبل الله منا ومنك ) أي نحو ذلك مما جرت به العادة في التهنئة

*" 'ತಖಬ್ಬಲಲ್ಲಾಹು ಮಿನ್ನಾ ವಮಿಂಕ' ಮತ್ತು ವಾಡಿಕೆಯಲ್ಲಿರುವ ಇನ್ನಿತರ ಪದಗಳಿಂದ ಸುನ್ನತ್ ದೊರಕುತ್ತದೆ."* (ಜಮಲ್)

ಅದೇ ರೀತಿ 'ಶರ್ವಾನೀ' 56/3, ಹಾಶೀಯತುನ್ನಿಹಾಯ ಮುಂತಾದ ಗ್ರಂಥ ಗಳಲ್ಲಿ ಕಾಣಬಹುದು.

ಈ ಉಲ್ಲೇಖಗಳಿಂದ ಊರಿನಲ್ಲಿ ವಾಡಿಕೆ ಇರುವ ಪದಗಳಿಂದ ಮಂಗಳಾಶಂಸೆಯ ಸುನ್ನತ್ ದೊರಕಬಹುದೆಂದು ಸ್ಪಷ್ಟವಾಗುತ್ತದೆ. ಇಂದು ಎಲ್ಲಾ ಮುಸ್ಲಿಂ ರಾಷ್ಟಗಳಲ್ಲಿ ವಾಡಿಕೆ ಯಲ್ಲಿರುವ ಪದವಾಗಿದೆ ಈದ್ ಮುಬಾರಕ್ ಎಂಬುವುದು. ಆದ್ದರಿಂದ ಈ ಪದಗಳಿಂದಲೂ ಸುನ್ನತ್ ದೊರಕಬಹುದೆಂದು ತಿಳಿದು ಬರುತ್ತದೆ.
ಇನ್ನು ಮಾಲೀಕಿ, ಹನಫೀ ಮದ್ಸ್ ಹಬಿನ ಗ್ರಂಥ ಗಳಲ್ಲಿ ಈದ್ ಮುಬಾರಕ್ ಎಂಬ ಪದದಿಂದ ಮಂಗಳಾಶಂಸೆ ಹೇಳುವುದು ಸುನ್ನತಾಗಿದೆಯೆಂದು ಸ್ಪಷ್ಟವಾಗಿ ಹೇಳಿದ್ದನ್ನೇ ಕಾಣಬಹುದು...

*ಕೊನೆಯ ಮಾತು*

ಶಾಫಿಈ ಮದ್ಸ್ ಹಬಿನ ಗ್ರಂಥಗಳಿಂದ ಮಂಗಳಾಶಂಸೆ ಹೇಳಿದ ಸುನ್ನತ್ ಲಭ್ಯ ವಾಗುತ್ತದೆಯೆಂದು ತಿಳಿಸಲಾಗಿದೆ. *ಆದರೆ ಕೇವಲ ಈದುನ್ ಮುಬಾರಕ್ ಎಂದು ಹೇಳುವುದಕ್ಕಿಂತ ಈದುನ್ ಮುಬಾರಕುನ್ ಅಲೈಕ ಎಂದೋ ಅಥವಾ ಈದುಕ ಮುಬಾರಕುನ್, ಈದುಕುಂ ಮುಬಾರಕುನ್ ಎಂದು ಹೇಳುವುದು ಉತ್ತಮವಾಗಿದೆ.*
▪▪▪▪
🔭 *ನಿಸಾರ್ ಸಖಾಫಿ ಉಳ್ಳಾಲ*

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.