Skip to main content

Posts

Showing posts from March, 2022

ಮುತಅಲ್ಲಿಮರಿಗೊಂದು ಸುವರ್ಣಾವಕಾಶ. ಸಿರಾಜುಲ್ ಹುದಾ ದರ್ಸ್ ಪ್ರವೇಶಾತಿ ಆರಂಭಗೊಂಡಿದೆ

ಧಾರ್ಮಿಕ, ಲೌಕಿಕ ವಿಜ್ಞಾನ ದಾಹಿಗಳಿಗೆ ಅತ್ಯುತ್ತಮ ಶಿಕ್ಷಣಕ್ಕೆ ಸುಲಭ ಸಾಧ್ಯವಾದ ಸ್ಥಳ. ತಫ್ಸೀರ್, ಹದೀಸ್, ಫಿಕ್ಹ್, ತಸವ್ವುಫ್, ಚರಿತ್ರೆ, ನಹ್ವ್ ಗಳ ಸಮಗ್ರ ಅಧ್ಯಯನ. ಕುರ್ ಆನ್ ಪಾರಾಯಣ ರೀತಿ ಹಾಗು ಪಾರಾಯಣ ಶಾಸ್ತ್ರ ( ತಜ್ವೀದ್ ) ಗಳ ತರಗತಿ. ಭಾಷಾ ಕಲಿಕೆ, ಬರಹ, ಭಾಷಣಾ ತರಬೇತಿ. ವ್ಯಕ್ತಿತ್ವ ವಿಕಸನಾ ತರಗತಿ ಹಿಫ್ಲ್ ಕಲಿಯಲು ಮತ್ತು ಹಿಫ್ಲ್ ದೌರಃ (ಪುನರಾವರ್ತನೆ) ಮಾಡಲು ಸೌಕರ್ಯ. ವಾರಕ್ಕೊಮ್ಮೆ ಭಾಷಣಾ ಪರಿಶೀಲನೆ. ಬುರ್ದಾ ಆಲಾಪನಾ ರೀತಿ ಹಾಗು ವಿವರಣಾ ತರಗತಿ. ದ.ಕ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಆರೋಗ್ಯಕರ ತಂಪಾದ ಪ್ರತಿಷ್ಠಿತ ಊರು. ಊಟ, ವಸತಿ ಸಂಪೂರ್ಣ ಉಚಿತ. ಪರಿಣತ ಉಸ್ತಾದರ ಸಾರಥ್ಯ. ಇನ್ನೇಕೆ ತಡ. ಇಹಪರ ವಿಜಯ ತಮ್ಮದಾಗಿಸಿ. ಆಸಕ್ತ ಮುತಅಲ್ಲಿಮರು ಸಂಪರ್ಕಿಸಿ.  9164502994

ಮದ್ರಸ ಪಬ್ಲಿಕ್ ತರಗತಿಯ ಅಧ್ಯಾಪಕರಿಗೆ ವಿಶೇಷ ಮಾಹಿತಿ ಕಾರ್ಯಾಗಾರ

ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವತಿಯಿಂದ ಸುನ್ನೀ ವಿದ್ಯಾಭ್ಯಾಸ ಬೋರ್ಡಿನ ಸಹಯೋಗದೊಂದಿಗೆ ಪಬ್ಲಿಕ್ ತರಗತಿಯ ಉಸ್ತಾದರುಗಳಿಗೆ ಪರೀಕ್ಷಾ ಸಂಬಂಧಿತ ವಿಶೇಷ ಮಾಹಿತಿ ಕಾರ್ಯಾಗಾರ ಉಳ್ಳಾಲದ ಆಝಾದ್ ನಗರದಲ್ಲಿ ನಡೆಯಿತು. ಮುಫತ್ತಿಶ್ ಹಮೀದ್ ಮದನಿ ಬೊಳ್ಮಾರ್ ಮಾಹಿತಿ ವಿನಿಮಯ ಮಾಡಿದರು. ರೇಂಜ್ ಅಧ್ಯಕ್ಷರಾದ ಜಲಾಲ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಂಜ್ ಪರೀಕ್ಷಾ ವಿಭಾಗ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಪರೀಕ್ಷಾ ವಿಭಾಗ ಚೇಯರ್ಮಾನ್ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ಧನ್ಯವಾದ ಮಾಡಿದರು. ಪ್ರಸ್ತುತ ಕಾರ್ಯಾಗಾರದಲ್ಲಿ ಪಬ್ಲಿಕ್ ತರಗತಿಯ ಅಧ್ಯಾಪಕರು ಉಪಸ್ಥಿತರಿದ್ದರು.

ಐತಿಹಾಸಿಕ ಉಳ್ಳಾಲ ಉರೂಸ್ ಸಮಾಪ್ತಿ

ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುವಾಸಿಯಾಗಿರುವ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ 429 ನೇ ವಾರ್ಷಿಕ ಹಾಗು 21 ನೇ ಪಂಚವಾರ್ಷಿಕ ಉಳ್ಳಾಲ ಉರೂಸ್ ಸಮಾರೋಪ ಸಮಾರಂಭ ಸಯ್ಯಿದ್ ಮದನಿ ವೇದಿಕೆಯಲ್ಲಿ ನಡೆಯಿತು. ಉಳ್ಳಾಲದ ಗೌರವಾನ್ವಿತ ಖಾಝಿಯಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ಫೆ.10ರಿಂದ ಮಾರ್ಚ್ 06 ರವರೆಗೆ 26 ದಿನ ರಾತ್ರಿಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಮುದಾಯಿಕವಾದ ಕಾರ್ಯಕ್ರಮ ಗಳೊಂದಿಗೆ ಉಳ್ಳಾಲ ಉರೂಸ್ ವಿಜ್ರಂಭಣೆ, ಸಡಗರದಿಂದ ಸಮಾಪಿಸಿತು.  ಸಮಾರೋಪ ಸಮಾರಂಭದಲ್ಲಿ ದುಆ ನೆರವೇರಿಸಿ ಮಾತನಾಡಿದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ತಂಗಲ್ ಉಳ್ಳಾಲ ಸಹಿತ ಕೇರಳ ಕರ್ನಾಟಕದಾದ್ಯಂತ ಪಸರಿಸಿರುವ ಕಳ್ಳ ತ್ವರೀಕತುಗಾರರ ವಿರುದ್ಧ ಗುಡುಗಿದರು.   ಪ್ರತೀ ರಾತ್ರಿಗಳಲ್ಲಿ ನಿರಂತರ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಿತು. ಮಾರ್ಚ್ 03 ರಂದು ಉಳ್ಳಾಲ ಉರೂಸಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಉಸ್ತಾದರ  ಗ್ರ್ಯಾಂಡ್ ಎಂಟ್ರಿ ಸುನ್ನೀ ಜನ ಮನಸ್ಸುಗಳನ್ನು ಪುಳಕಿತಗೊಳಿಸಿತು. ಜನ ಸಾಗರದಿಂದ ಅಂದು ಉಳ್ಳಾಲ ಸ್ತಬ್ಧವಾಯಿತು. ಅಂದಿನ ದಿನ ಐತಿಹಾಸಿಕವಾಗಿ ದಾಖಲೆಯ ಪುಟ ಸೇರಿತು. ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ರವರ ಭೇಟಿ ಉಳ್ಳಾಲ ಉರೂಸಿ...

ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 03 ( ಗುರುವಾರ) ಉಳ್ಳಾಲ ಉರೂಸಿನಲ್ಲಿ.

🔸        ಉಳ್ಳಾಲ ಉರೂಸ್             🔸 ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 03 ( ಗುರುವಾರ) ಉಳ್ಳಾಲ ಉರೂಸಿನಲ್ಲಿ. ಉಳ್ಳಾಲದ ಗೌರವಾನ್ವಿತ ಖಾಝಿಯಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತೃತ್ವದಲ್ಲಿ  ಉಳ್ಳಾಲ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದು, ಮಾರ್ಚ್ 03, ಗುರುವಾರದಂದು ಜಾಗತಿಕ ಮುಸಲ್ಮಾನರ ಸುಲ್ತಾನ್, ಅನಾಥರ ಸಂರಕ್ಷಕ, ಸುನ್ನೀ ಸಾಮ್ರಾಜ್ಯದ ಅನಿಷೇಧ್ಯ ನೇತಾರ, ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ, ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 03 ( ಗುರುವಾರ) ಉಳ್ಳಾಲ ಉರೂಸಿನಲ್ಲಿ ಭಾಗವಹಿಸಿ ಮುಖ್ಯ ಪ್ರಭಾಷಣ ನಡೆಸಲಿರುವರು.  ಅಂದು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಮೂಲಕ ಉಳ್ಳಾಲ ಉರೂಸಿಗೆ ಹೊಸ ಚೈತನ್ಯ ಸಿಗಲಿದೆ. ಉಳ್ಳಾಲ ಅಂದು ಅಕ್ಷರಶಃ ಜನ ಸಾಗರದಿಂದ ಸ್ತಬ್ಧವಾಗಲಿದೆ.   ಉರೂಸಿನ ಎಲ್ಲಾ ಸ್ವಯಂಸೇವಕರು ಕರ್ತವ್ಯ ನಿಭಾಯಿಸಿ, ಸಹಕರಿಸಲು ಉರೂಸ್ ಸಮಿತಿ ಕೋರಿದೆ. ಊರ ಪರವೂರಿನ ಎಲ್ಲರೂ ಮಗ್ರಿಬಿಗೆ ಮುಂಚಿತವಾಗಿಯೇ ಉಳ್ಳಾಲ ತಲುಪಲು ಪ್ರಯತ್ನಿಸಿ.

ಈ ಕಾಲಘಟ್ಟದ ಮುಜದ್ದಿದ್, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾರ್ಚ್ 03 ಕ್ಕೆ ಐತಿಹಾಸಿಕ ಉಳ್ಳಾಲ ಉರೂಸ್ ಸಮಾರಂಭದಲ್ಲಿ

ಈ ಕಾಲಘಟ್ಟದ ಮುಜದ್ದಿದ್, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾರ್ಚ್ 03 ಕ್ಕೆ ಐತಿಹಾಸಿಕ ಉಳ್ಳಾಲ ಉರೂಸ್ ಸಮಾರಂಭದಲ್ಲಿ ಶತ್ರುಗಳು, ಮಿತ್ರ ವೃಂದವು ಉಚ್ಚರಿಸುವ ಒಂದೇ ಒಂದು   ನಾಮವಾಗಿದೆ..  ಅದು, ಕಾಂತಪುರಂ (ಉಸ್ತಾದ್) ಅಬಲೆಯರು, ನಿರ್ಗತಿಕರು ಉಚ್ಚರಿಸುವ ಒಂದೇ ಒಂದು  ಹೆಸರಾಗಿದೆ ಅದು   ಕಾಂತಪುರಂ. ನಿರಾಶ್ರಿತರು, ಅನಾಥರು ಉಚ್ಛರಿಸಿಸುವ ಒಂದೇ ಒಂದು  ಹೆಸರರಾಗಿದೆ, ಅದು  ಕಾಂತಪುರಂ. ನೇತಾರರು, ರಾಜಕೀಯ ನಾಯಕರು ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು   ಕಾಂತಪುರಂ. ಸ್ವದೇಶಿಯರೂ, ವಿದೇಶಿಯರೂ, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು  ಕಾಂತಪುರಂ. ಪಂಡಿತರು, ಜನ ಸಾಮಾನ್ಯರು, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು  ಕಾಂತಪುರಂ. ಅನಾಥ ಮಕ್ಕಳ ದತ್ತು ಪಡೆಯಲು  ಕಾಂತಪುರಂ. ಮಸೀದಿ, ಮದ್ರಸ ಇಲ್ಲದ ಸ್ಥಳಗಳಲ್ಲಿ ಮಸೀದಿ, ಮದ್ರಸ ನಿರ್ಮಿಸಲು  ಕಾಂತಪುರಂ.  ನೀರು ಇಲ್ಲದ ಗ್ರಾಮಕ್ಕೆ ನೀರಿನ ಬರ ನೀಗಿಸಲು  ಕಾಂತಪುರಂ. ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು  ಕಾಂತಪುರಂ. ಸುನ್ನೀ ಮಕ್ಕಳಿಗೆ ಧಾರ್ಮಿಕ, ಲೌಕಿಕ ವಿಧ್ಯಾಭ್ಯಾಸ ನೀಡಲು   ಕಾಂತಪುರಂ.  ಬಡವರಿಗೆ ಸೌಜನ್ಯ ಆಸ್ಪತ್ರೆ ನಿರ್ಮಿಸಲು  ಕಾಂತಪುರಂ. ವಿದೇಶದಲ್ಲಿ ದುಡಿಯುವ ಅನಿವಾಸ...