ಉಳ್ಳಾಲದ ಗೌರವಾನ್ವಿತ ಖಾಝಿಯಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತ್ರತ್ವದಲ್ಲಿ ಫೆ.10ರಿಂದ ಮಾರ್ಚ್ 06 ರವರೆಗೆ 26 ದಿನ ರಾತ್ರಿಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಮುದಾಯಿಕವಾದ ಕಾರ್ಯಕ್ರಮ ಗಳೊಂದಿಗೆ ಉಳ್ಳಾಲ ಉರೂಸ್ ವಿಜ್ರಂಭಣೆ, ಸಡಗರದಿಂದ ಸಮಾಪಿಸಿತು.
ಸಮಾರೋಪ ಸಮಾರಂಭದಲ್ಲಿ ದುಆ ನೆರವೇರಿಸಿ ಮಾತನಾಡಿದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ತಂಗಲ್ ಉಳ್ಳಾಲ ಸಹಿತ ಕೇರಳ ಕರ್ನಾಟಕದಾದ್ಯಂತ ಪಸರಿಸಿರುವ ಕಳ್ಳ ತ್ವರೀಕತುಗಾರರ ವಿರುದ್ಧ ಗುಡುಗಿದರು.
ಪ್ರತೀ ರಾತ್ರಿಗಳಲ್ಲಿ ನಿರಂತರ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಿತು.
ಮಾರ್ಚ್ 03 ರಂದು ಉಳ್ಳಾಲ ಉರೂಸಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಉಸ್ತಾದರ ಗ್ರ್ಯಾಂಡ್ ಎಂಟ್ರಿ ಸುನ್ನೀ ಜನ ಮನಸ್ಸುಗಳನ್ನು ಪುಳಕಿತಗೊಳಿಸಿತು. ಜನ ಸಾಗರದಿಂದ ಅಂದು ಉಳ್ಳಾಲ ಸ್ತಬ್ಧವಾಯಿತು. ಅಂದಿನ ದಿನ ಐತಿಹಾಸಿಕವಾಗಿ ದಾಖಲೆಯ ಪುಟ ಸೇರಿತು.
ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ಕಡಲುಂಡಿ ತಂಗಲ್ ರವರ ಭೇಟಿ ಉಳ್ಳಾಲ ಉರೂಸಿಗೆ ಹೆಚ್ಚಿನ ಮೆರುಗು ನೀಡಿತು.ಅವರು ಉಳ್ಳಾಲ ಉರೂಸಿನಲ್ಲಿ ದುಆ ನೆರವೇರಿಸಿ ಮಾತನಾಡಿದರು.
ಪೇರೋಡ್ ಉಸ್ತಾದ್, ಡಾ. ಅಬ್ದುಲ್ ಹಕೀಂ ಅಝ್ಹರಿ, ಡಾ. ಫಾರೂಖ್ ನಯೀಮಿ ಕೊಲ್ಲಂ, ಹಕೀಂ ಸಖಾಫಿ ಪುಲ್ಲಾರ,ಡಾ. ಹುಸೈನ್ ಸಖಾಫಿ ಚುಳ್ಳಿಕೋಡು, ಸಿರಾಜುದ್ದೀನ್ ಖಾಸಿಮಿ ಸಹಿತ ಹಲವಾರು ಸುಪ್ರಸಿದ್ಧ ಖ್ಯಾತ ಪ್ರಭಾಷಣಗಾರರಿಂದ ಮತ ಪ್ರವಚನ ಕಾರ್ಯಕ್ರಮ ನಡೆಯಿತು.
ತಾಜುಲ್ ಉಲಮಾ ಖ.ಸಿ ರವರ ಸುಪುತ್ರರಾದ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಗಲ್ ಸಹಿತ ಹಲವಾರು ಉಲಮಾ ಉಮರಾ, ಸಾದಾತುಗಳು ಉಪಸ್ಥಿತರಿದ್ದರು.
ಮಾರ್ಚ್ 05 ಸಮಾರೋಪ ಸಮಾರಂಭ ಕಾರ್ಯಕ್ರಮದ ನಂತರ ಸಂದಲ್ ಮೆರವಣಿಗೆ ನಡೆಯಿತು. ಅಂದು ರಾತ್ರಿ ಅನ್ನದಾನ ನೀಡುವ ಪ್ರಕ್ರಿಯೆ ಯಶಸ್ವಿಯಾಗಿ ಪ್ರಾರಂಭಗೊಂಡು ಮಾರ್ಚ್ 06 ಸಂಜೆಯೊಂದಿಗೆ ಕೊನೆಗೊಳಿಸಲಾಯಿತು.
ಉರೂಸ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸ್ವಯಂ ಸೇವಕರು, ಆಡಳಿತ ಸಮಿತಿಯ ಸದಸ್ಯರುಗಳು, ಉರೂಸ್ ಸಮಿತಿ ಸದಸ್ಯರುಗಳು ಸಹಿತ ಎಲ್ಲರಿಗೂ ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಧನ್ಯವಾದ ತಿಳಿಸಿದರು.
Comments
Post a Comment