Skip to main content

Posts

Showing posts from September, 2022

ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ.

ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ನಿಮಿತ್ತ ಮರ್ಕಝ್ ಸರ್ಕಲ್ ಉಳ್ಳಾಲ ವತಿಯಿಂದ ಸಮಾವೇಶ ಹಾಗೂ ಉಳ್ಳಾಲ ಸರ್ಕಲ್ ಯೋಜನಾ ಸಮಿತಿ ಅಸ್ತಿತ್ವಕ್ಕೆ. ಮಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು  ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಬೆಂಗಳೂರು,ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು. ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ,ನಾಯಕರಾದ ಸಿ.ಮುಹಮ್ಮದ್ ಫೈಝಿ,ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್, ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರ...

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಉಪ ಸಮಿತಿಯಾದ ಫೈನಾನ್ಸಿಯಲ್ ಸಮಿತಿಯ ಪ್ರಥಮ ಸಭೆ. ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪೈನಾನ್ಶಿಯಲ್ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಕೋಶಾಧಿಕಾರಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಫೈನಾನ್ಶಿಯಲ್ ಸಮಿತಿ ಚೇರ್ಮಾನ್ ಮೂಸ ಹಾಜಿ ಸಾಂಬರತೋಟ, ಫೈನಾನ್ಶಿಯಲ್ ಸಮಿತಿ ಕನ್ವೀನರ್ ಹನೀಫ್ ಸಅದಿ ಅಸೈ, ವೈಸ್ ಚೇರ್ಮಾನ್ ಅಬ್ಬುಚ್ಚ ಮದ್ಯನಡ್ಕ, ಹಸನ್ ಹಾಜಿ ಸಾಂಬಾರತೋಟ, ಸ್ವಾಗತ ಸಮಿತಿ ಕನ್ವೀನರಾದ ಹೈದರ್ ಹಿಮಮಿ ಮಲಾರ್, ಫೈನಾನ್ಶಿಯಲ್ ಸಮಿತಿ ವೈಸ್ ಕನ್ವೀನರುಗಳಾದ ಸುಲೈಮಾನ್ ಹಾಜಿ ಸಾಮಣಿಗೆ, ಶಮೀರ್ ದೇರಳಕಟ್ಟೆ ಹಾಗೂ ಫುಡ್ ವಿಭಾಗದ ಅಮೀರ್ ಹಬೀಬುರ್ರಹ್ಮಾನ್ ಸಂಪಿಲ,  ಉಪಸ್ಥಿತರಿದ್ದರು.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ.

ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ 9 ನೇ ಉರೂಸ್ ಸಮಾರಂಭದ ಪೂರ್ವಭಾವಿಯಾಗಿ ನಡೆದ ತಾಜುಲ್ ಉಲಮಾ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ವಿಶೇಷ ಪ್ರಥಮ ಸಭೆ. ದೇರಳಕಟ್ಟೆಯ ಸುಲೈಮಾನ್ ಹಾಜಿ ಸಾಮಣಿಗೆ ಇವರ ಪ್ಯಾಲೇಸಿನಲ್ಲಿ ನಡೆದ ಸಭೆಯಲ್ಲಿ ಉರೂಸಿನ ಪ್ರಚಾರದ ಕುರಿತಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಪ್ರಸ್ತುತ ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಖಾಲಿದ್ ಹಾಜಿ ಭಟ್ಕಳ, ಪ್ರಚಾರ ಸಮಿತಿ ಕನ್ವೀನರಾದ ಎಂ ಎಂ ಕೆ ಮುಡಿಪು, ಸ್ವಾಗತ ಸಮಿತಿ ಕನ್ವೀನರಾದ ಹೈದರಾಲಿ ಹಿಮಮಿ ಮಲಾರ್, ಪ್ರಚಾರ ಸಮಿತಿ ವೈಸ್ ಕನ್ವೀನರುಗಳಾದ ನವಾಝ್ ಸಖಾಫಿ ಉಳ್ಳಾಲ, ಅಬ್ದುಲ್ ಹಮೀದ್ ಹಳೆಕೋಟೆ, ಹುಸೈನ್ ಮುಸ್ಲಿಯಾರ್ ಉದ್ಯಾವರ, ಯೂಸುಫ್ ರಝ್ವಿ ದೇರಳಕಟ್ಟೆ ಭಾಗವಹಿಸಿದರು. ಅಬ್ದುಲ್ ಅಝೀಝ್ ಎಚ್ ಕಲ್ಲು ಹಾಗೂ ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ಉಪಸ್ಥಿತರಿದ್ದರು.

ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್‌ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ

ತಾಜುಲ್ ಉಲಮಾ ಉಳ್ಳಾಲ ತಂಗಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ 9 ನೇ ಉರೂಸ್‌ ಮುಬಾರಕ್ ಇದರ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇಧರ ರಚನಾ ಸಭೆ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ಜರುಗಿತು. ಸಭೆಯನ್ನು ಉಜಿರೆ ಇಸ್ಮಾಯಿಲ್ ತಂಗಲ್ ಉದ್ಘಾಟಿಸಿದರು. ಅಶ್ ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ ವಿಷಯ ಮಂಡಿಸಿದರು. ಪಲ್ಲಂಗೋಡ್ ಅಬ್ದುಲ್ ಖಾದರ್ ಸಖಾಫಿ, ಉಮರ್ ಸಖಾಫಿ ತಲಕ್ಕಿ, ಮಲ್ಲೂರು ಅಶ್ರಫ್ ಸಅದಿ, ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ತಾಜುಲ್ ಉಲಮ ಉಳ್ಳಾಲ ತಂಙ್ಞಳ್ ರವರ 9ನೇ ಉರೂಸ್ ಸಮಾರಂಭದ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ರಚನಾ ಪ್ರಕ್ರಿಯೆ ನಡೆಯಿತು. ಚೇರ್ ಮೆನ್ ಆಗಿ ಸೈಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಮದನಿ ಉಜಿರೆ, ವೈಸ್ ಚೇರ್ಮೆನ್ ಗಳಾಗಿ ಉಮರ್ ಸಖಾಫಿ ತಲಕ್ಕಿ ಡಾ: ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ತಲಪಾಡಿ, MPM ಅಶ್ರಫ್ ಸಅದಿ ಮಲ್ಲೂರು, ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನ, BM  ಯೂಸುಫ್ ಕುಂದಾಪುರ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಏಷ್ಯನ್ ಬಾವ ಹಾಜಿ, PM ಅಬ್ದುಲ್ ಜಲೀಲ್ ಮೋಂಟುಗೋಳಿ, ಹನೀಫ್ ಹಾಜಿ ಉಳ್ಳಾಲ, ಅಬೂಬಕ್ಕರ್ ಹಾಜಿ ಕೂರತ್...