Skip to main content

Posts

Showing posts from April, 2021

ಮದನಿ ನಗರದ ಅಲ್ ಮದರಸತುಲ್ ಸಯ್ಯಿದ್ ಮದನಿ ಇದರ ವತಿಯಿಂದ "SBS ಗ್ರಾಂಡ್ ಫಿನಾಲೇ ಅಲ್ ಇಂಜಾಝ್ 21"

 ಮದನಿ ನಗರದ ಅಲ್ ಮದರಸತುಲ್ ಸಯ್ಯಿದ್ ಮದನಿ ಇದರ ವತಿಯಿಂದ  "SBS ಗ್ರಾಂಡ್ ಫಿನಾಲೇ ಅಲ್ ಇಂಜಾಝ್ 21" ಎಂಬ ಮದರಸ ವಿಧ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಸ್ಮಾಯಿಲ್ SA ವಹಿಸಿದರು. ಬಹು. ಅಸ್ಸಯ್ಯಿದ್ ಯು ಎಸ್ ಶಿಹಾಬುದ್ದೀನ್ ತಂಗಲ್ ಮದಕ ದುಅ ಮತ್ತು ಮುಖ್ಯಭಾಷಣಗೈದರು. ವಿವಿದ ಸ್ಪರ್ಧೆಗಳನ್ನೊಳಗೊಂಡ ಈ ಪ್ರತಿಭಾ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು.   ವಿದ್ಯಾರ್ಥಿಗಳ ನಡೆ ನುಡಿ, ಕಲಿಕೆ, ಪ್ರತಿಭೆಯನ್ನು ಗುರುತಿಸಿ ಉತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎರಡು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮದನಿ ನಗರದ ಮುನ್ನೂರು  ಪಂಚಾಯತಿನ 5ನೇ ವಾರ್ಡಿನ ನೂತನ ವಾಗಿ ಚುನಾಯಿತ ಸದಸ್ಯರಾದ ಅಬ್ದುಲ್ ಅಝೀಝ್ ಹಾಗೂ ಮಹಮ್ಮದ್ ಆರಿಫ್ ಇರುವರಿಗೆ ಮದರಸ ಸಮಿತಿ  ಹಾಗೂ SYS, SSF ಮದನಿ ನಗರ ವತಿಯಿಂದ ಸನ್ಮಾನಿಸಲಾಯಿತು.  ಪ್ರಸ್ತುತ ಕಾರ್ಯಕ್ರಮದಲ್ಲಿ  SYS ಮದನಿ ನಗರ ಬ್ರಾಂಚ್, SSF ಮದನಿ ನಗರ ಶಾಖೆಯ ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು.   ಮದರಸದ ಮುಖ್ಯಶಿಕ್ಷಕರಾದ ಅಯ್ಯೂಬ್ ಮಹ್ಲರಿ ಸ್ವಾಗತಿಸಿದರು.  SSF ಮದನಿ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಹಂಝತುಲ್ ಖರ್ರಾರ್ ವಂದಿಸಿದರು. ...

ರಂಝಾನ್ ತಿಂಗಳ ಚಂದ್ರದರ್ಶನ

 ರಂಝಾನ್ ತಿಂಗಳ ಚಂದ್ರದರ್ಶನ . ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ಘೋಷಣೆ ಇಂದು ( ಸೋಮವಾರ ಅಸ್ತ ಮಂಗಳವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 13 - 04 - 2021 ಮಂಗಳವಾರ ( ನಾಳೆ ) ರಮಳಾನ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The Honourable Khazi of ullala Qurrathussadath Seyyed Fazal Koyamma Thangal  has announced that 13-04-2021 is first of Ramadan

ತಾಜುಶ್ಶರೀಅಃ ಉಸ್ತಾದ್ ಅನುಸ್ಮರಣೆ ಮತ್ತು ರಂಝಾನ್ ಕಿಟ್ ವಿತರಣೆ.

ಉಳ್ಳಾಲ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ವತಿಯಿಂದ ತಾಜುಶ್ಶರೀಅಃ ಉಸ್ತಾದ್ ಅನುಸ್ಮರಣೆ ಮತ್ತು ಉಳ್ಳಾಲ ರೇಂಜ್ ಅಧೀನದ ಮದ್ರಸಗಳ ಎಲ್ಲಾ ಉಸ್ತಾದರುಗಳಿಗೆ ರಂಝಾನ್ ಕಿಟ್ ವಿತರಣೆ ಮಾಸ್ತಿಕಟ್ಟೆ ಆಝಾದ್ ನಗರದ ಮದ್ರಸ ಸಭಾಂಗಣದಲ್ಲಿ ನಡೆಯಿತು. ಅಳೇಕಲ ಜಾಮಿಅತು ಅಲ್ ಅಮೀನ್ ಮಸೀದಿಯ ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಂದರಭಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶರೀಫ್ ಸಅದಿ ಉದ್ಘಾಟಿಸಿದರು. ತಾಜುಶ್ಶರೀಅಃ ಅಲಿ ಕುಞ್ಞಿ ಉಸ್ತಾದ್ ಅನುಸ್ಮರಣಾ ಪ್ರಭಾಷಣ ರೇಂಜ್ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ನಡೆಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಶುಭ ಹಾರೈಸಿ ಮಾತನಾಡಿದರು. ರೇಂಜ್ ಸಾಂತ್ವನ ವಿಭಾಗದ ಚೇಯರ್ಮಾನ್ ಜಲಾಲ್ ಮದನಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ರಂಝಾನ್ ಕಿಟ್ ವಿತರಿಸಲಾಯಿತು. ಮಂಚಿಲ ಜುಮಾ ಮಸೀದಿಯ ಖತೀಬರಾದ ಟಿ ಕೆ ಇಸ್ಮಾಯಿಲ್ ಸಅದಿ ಸಮಾಪನಾ ದುಆ ನಡೆಸಿದರು. ಕಾರ್ಯಕ್ರಮದಲ್ಲಿ ಆಝಾದ್ ನಗರ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿ, ಉಳ್ಳಾಲ ರೇಂಜ್ ಅಧೀನದ ಮದ್ರಸಗಳ, ಖತೀಬರು, ಮುದರ್ರಿಸರು, ಮುಅಲ್ಲಿಮರು ಭಾಗವಹಿಸಿದರು. ಸಾಂತ್ವನ ವಿಭಾಗದ ಕನ್ವೀನರ್ ಯೂಸುಫ್ ಉಸ್ತಾದ್ ಸಜಿಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರೇಂಜ್ ಪ್ರಧಾನ ಕಾರ...