ಉಳ್ಳಾಲ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ವತಿಯಿಂದ ತಾಜುಶ್ಶರೀಅಃ ಉಸ್ತಾದ್ ಅನುಸ್ಮರಣೆ ಮತ್ತು ಉಳ್ಳಾಲ ರೇಂಜ್ ಅಧೀನದ ಮದ್ರಸಗಳ ಎಲ್ಲಾ ಉಸ್ತಾದರುಗಳಿಗೆ ರಂಝಾನ್ ಕಿಟ್ ವಿತರಣೆ ಮಾಸ್ತಿಕಟ್ಟೆ ಆಝಾದ್ ನಗರದ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಅಳೇಕಲ ಜಾಮಿಅತು ಅಲ್ ಅಮೀನ್ ಮಸೀದಿಯ ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರಭಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶರೀಫ್ ಸಅದಿ ಉದ್ಘಾಟಿಸಿದರು.
ತಾಜುಶ್ಶರೀಅಃ ಅಲಿ ಕುಞ್ಞಿ ಉಸ್ತಾದ್ ಅನುಸ್ಮರಣಾ ಪ್ರಭಾಷಣ ರೇಂಜ್ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ನಡೆಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಶುಭ ಹಾರೈಸಿ ಮಾತನಾಡಿದರು. ರೇಂಜ್ ಸಾಂತ್ವನ ವಿಭಾಗದ ಚೇಯರ್ಮಾನ್ ಜಲಾಲ್ ಮದನಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ರಂಝಾನ್ ಕಿಟ್ ವಿತರಿಸಲಾಯಿತು. ಮಂಚಿಲ ಜುಮಾ ಮಸೀದಿಯ ಖತೀಬರಾದ ಟಿ ಕೆ ಇಸ್ಮಾಯಿಲ್ ಸಅದಿ ಸಮಾಪನಾ ದುಆ ನಡೆಸಿದರು.
ಕಾರ್ಯಕ್ರಮದಲ್ಲಿ ಆಝಾದ್ ನಗರ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿ, ಉಳ್ಳಾಲ ರೇಂಜ್ ಅಧೀನದ ಮದ್ರಸಗಳ, ಖತೀಬರು, ಮುದರ್ರಿಸರು, ಮುಅಲ್ಲಿಮರು ಭಾಗವಹಿಸಿದರು.
ಸಾಂತ್ವನ ವಿಭಾಗದ ಕನ್ವೀನರ್ ಯೂಸುಫ್ ಉಸ್ತಾದ್ ಸಜಿಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಮಹ್ಳರಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕೆ.ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಧನ್ಯವಾದಗೈದರು.













Comments
Post a Comment