Skip to main content

ಈದುಲ್ ಫಿತ್ರ್ ನ ಕೆಲವು ಸಂಶಯ ನಿವಾರಣೆಗಳು

ಈದುಲ್ ಫಿತ್ರ್ ನ ಕೆಲವು ಸಂಶಯ ನಿವಾರಣೆಗಳು

✍🏻 *ಮುಹಮ್ಮದ್ ಆರೀಫ್ ಸಖಾಫಿ ಪುಂಜಾಲಕಟ್ಟೆ*
muhammadarifma403276@gmail.com

*1.* ಈದ್ ಸ್ನಾನದ ನಿಯ್ಯತ್ ಹೇಗೆ....?
=ಈದುಲ್ ಫಿತ್ರ್ ನ ಸುನ್ನತ್ತಾದ ಸ್ನಾನವನ್ನು ನಾನು ನಿರ್ವಹಿಸುವೆನು(ಸಂಕಲ್ಪಿಸುವುದು)

*2.* ಪೆರ್ನಾಳಿನ ಅತ್ಯಂತ ಉತ್ತಮ ಉಡುಪು ಮತ್ತು ಅದರ ಬಣ್ಣ ಯಾವುದು....?
=ಬೆಲೆಬಾಳುವ ಹೊಸ ಬಿಳಿ ವಸ್ತ್ರ.

*3.* ಪೆರ್ನಾಳ್ ನಂದು ಸುಗಂಧ ದ್ರವ್ಯ ಯಾವಾಗ ಉಪಯೋಗಿಸಬೇಕು....?
=ಪೆರ್ನಾಳಿನ ಅರ್ಧರಾತ್ರಿಯಿಂದಿಡಿದು ಸೂರ್ಯಸ್ತಮಾನದ ತನಕ

*4.* ಸುಗಂಧ ದ್ರವ್ಯ ಸುವಾಸಿನಿಸುವಾಗ ಸ್ವಲಾತ್ ಹೇಳಲು ಸುನ್ನತ್ತಿದೆಯೇ....?
=ಸುನ್ನತ್ತಿಲ್ಲ ಆದರೆ ಇಸ್ತಿಗ್ಘಾರ್ ಹೇಳಲು ಸುನ್ನತ್ತಿದೆ.

*5.* ಪೆರ್ನಾಳ್ ನಮಾಝಿನ ಮೊದಲು ತಿನ್ನುವುದು ಸುನ್ನತ್ತಿದೆಯಾ.....?
=ಈದುಲ್ ಫಿತ್ರ್ ನಂದು ಈದ್ ನಮಾಝಿನ ಮುಂಚೆ ತಿನ್ನುವುದು ಸುನ್ನತ್.
ಖರ್ಜೂರ ಉತ್ತಮ. ಅದರ ಲೆಕ್ಕ ಬೆಸಸಂಖ್ಯೆಯಾಗಿರಲು ಸುನ್ನತ್. ಆದರೆ ಈದುಲ್ ಆಝ್ಹಾದಲ್ಲಿ ನಮಾಝ್ ನಂತರ ತಿನ್ನುವುದು ಸುನ್ನತ್.

*6.* ಈದ್ ಆಶೆಂಸೆಯನ್ನು ಅರ್ಪಿಸಬಹುದೇ....?ಮತ್ತು ಅದರ ವಿಧಿಯೇನು...?
=ಅರ್ಪಿಸಬಹುದುˌಸುನ್ನತ್.

*7.* ಆಶೆಂಸೆಯನ್ನರ್ಪಿಸಲು ಆರಂಭವಾಗುವ ಮತ್ತು ಕೊನೆಗೊಳ್ಳುವ ಸಮಯ ಯಾವಾಗ...?
=ಶವ್ವಾಲ್ ಬಾನಚಂದ್ರ ಕಾಣುವುದರೊಂದಿಗೆ ಆರಂಭಗೊಂಡು ಅಂದಿನ ಮಗ್ರಿಬ್ ತನಕ.

*8.* ಆಶೆಂಸೆ ಅರ್ಪಿಸಬೇಕಾದ ವಚನ ಯಾವುದು....?
= *تقبل االله منا ومنكم*
(ತಖಬ್ಬಲಲ್ಲಾಹು ಮಿನ್ನಾ ವಮಿಂಕುಂ)

*9.* ಆಶೆಂಸೆ ಅರ್ಪಿಸಿದವರಿಗೆ ತಿರುಗಿ ಆಶೆಂಸೆ ಅರ್ಪಿಸುವುದು ಸುನ್ನತ್ತಿದೆಯೇ....?ಮತ್ತು ಅದರ ಪೂರ್ಣ ರೂಪ.....?
=ಸುನ್ನತ್ *تقبل الله منكم احياكم الله لامثاله كل عام وانتم بخير*

*10.* ಆಶೆಂಸೆ ವಿನಿಮಯ ಮಾಡುವಾಗ ಹಸ್ತಲಾಘವ ಮತ್ತು ಆಲಿಂಗನ ಮಾಡುವುದು ಸುನ್ನತ್ತಿದೆಯೇ....?
=ಸುನ್ನತ್ತಿದೆ.ಸ್ತ್ರಿಯರು ಪರಸ್ಪವಾಗಿಯೂˌ ಪುರುಷರು ಪರಸ್ಪರವಾಗಿಯೂ ಕಾಣಲು ನಿಷಿದ್ಧವಿಲ್ಲದ ಮಹ್ರ್ ಮ್.
(ವಿವಾಹ
ನಿಷಿಧ್ಧವಾದವರು)ಅಥವಾ ಗಂಡ ಹೆಂಡತಿಯರು ಪರಸ್ಪರ ಹಸ್ತಲಾಘವ ಮಾಡುವುದು ಸುನ್ನತ್.ಅನ್ಯ ಸ್ತ್ರಿ ಪುರುಷರು ಪರಸ್ಪರ ಮತ್ತು ಗಡ್ಡ ಬೆಳೆಯದ ಪ್ರಾಯಪೂರ್ತಿಯಾಗದ  ಸ್ಪುರದ್ರೂಪಿಯಾದ ಬಾಲಕರೊಂದಿಗೆ ಹಸ್ತಲಾಘವ ಮಾಡುವುದು ಹರಾಂ.ಯಾತ್ರೆ ಮುಗಿದು ಬರುವ ಹಾಗೂ ದಿರ್ಘಕಾಲದ ನಂತರ ಬಂದವರನ್ನು ಆಲಿಂಗನ ನಡೆಸುವುದು ಸುನ್ನತ್ ಅಲ್ಲದವರೊಂದಿಗೆ ನಡೆಸುವುದು ಕರಾಹತ್ತಾಗಿದೆ.

*11.* ಸ್ತ್ರೀಯರಿಗೆ ಪೆರ್ನಾಳ್ ನಮಾಝ್ ಜಮಾಅತ್ತಾಗಿ ನಿರ್ವಹಿಸಲು ಸುನ್ನತ್ತಿದೆಯೇ...?
=ಸುನ್ನತ್ತಿದೆ.ಅವರ ಮನೆಯಲ್ಲಿಯೇ ಜಮಾಅತ್ತಾಗಿ ನಿರ್ವಹಿಸಲು ಸುನ್ನತ್.

*12.* ಈದ್  ನಮಾಝ್ ಎಲ್ಲಿ ನಿರ್ವಹಿಸುವುದು ಉತ್ತಮ....?
=ಎಲ್ಲರನ್ನೂ ಒಳಗೊಳ್ಳುವ ಸಾಕಾಗುವಷ್ಟು ವಿಶಾಲವಾಗಿದ್ದರೆ ಮಸೀದಿಯಲ್ಲೇ ಉತ್ತಮ.

*من احي ليلة الفطر وليلة* *الاضحي لم تمت قلبه يوم* *تموت القلوب*
ಈ ಹದೀಸಿನಲ್ಲಿ "ಹೃದಯಗಳು ಸತ್ತು ಹೋಗುವುದು"ಎಂಬುದರ  ತಾತ್ಪರ್ಯವೇನು....?
=ಬೌತಿಕ ಸುಖಾಢಾಂಭರಗಳಲ್ಲಿ ಮುಳುಗಿ ಪರಲೋಕದ ಕುರಿತು ಚಿಂತನೆಗಳು ಇಲ್ಲವಾಗುವುದುˌಈಮಾನ್ ನಷ್ಟ ಹೊಂದುವುದುˌಅಂತ್ಯದಿನದ ಭೀಕರತೆಯಿಂದಾಗಿ ಯಾರು ಯಾರನ್ನು ಪತ್ತೆ ಹಚ್ಚಲು ಅಸಾಧ್ಯವಾಗುವುದು.ಎಂಬ 3ವ್ಯಾಖ್ಯಾನಗಳನ್ನು ಇಮಾಮರು ಇಲ್ಲಿ ಉಲ್ಲೇಖಿಸಿದ್ದಾರೆ.
ಎರಡು ಪೆರ್ನಾಳ್ ರಾತ್ರಿಗಳಲ್ಲಿ ಆರಾಧನೆಗಳಿಂದ ಧನ್ಯಗೊಳಿಸಿದರೆ ಇಂತಹಾ ಅಪಾಯಗಳಿಂದ ಅಲ್ಲಾಹು ಸಂರಕ್ಷಿಸುವನು ಎಂಬುವುದೇ ಈ ಹದೀಸಿನ ಅರ್ಥ.

✍🏻 *ಮುಹಮ್ಮದ್ ಆರೀಫ್ ಸಖಾಫಿ ಪುಂಜಾಲಕಟ್ಟೆ*
muhammadarifma403276@gmail.com

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.