Skip to main content

ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು

ಅಪರೂಪದ ಲೇಖಕ ಬಿಕೆ ಯೂನುಸ್ ಇಮ್ದಾದಿ ಮಂಗಳಪದವು
✍ ಹಝುಮ

ಯೂನುಸ್ ಇಮ್ದಾದಿ! ಈ ಹೆಸರು ಕೇಳದವರು ಇರಲಾರರು. ಬರಹ ರಂಗಕ್ಕೆ ಹೊಸ ರೂಪ ಕೊಟ್ಟ ಅಪರೂಪದ ಬರಹಗಾರ ಇವರು. ಸುನ್ನೀವಾಣಿ, ಸುನ್ನತ್ ಏಕ ಕಾಲಕ್ಕೆ ಹೊರತರುವ ಮೂಲಕ ಬರಹ ರಂಗದಲ್ಲಿ ಕ್ರಾಂತಿ ಸೃಷ್ಟಿಸಿದ ಪ್ರಬುದ್ಧ ಲೇಖಕ. ಸುನ್ನೀವಾಣಿ ಮೂಲಕ ಬೆಳಕಿಗೆ ಬಂದು ಸುನ್ನತ್ ಮೂಲಕ ಮನೆಮಾತಾದ ಯೂನುಸ್ ಇಮ್ದಾದಿ ಯವರ ಕುರಿತು ಒಂದು ಕಿರು ಬರಹವಷ್ಟೇ ಇದು.

ಅದು ಐದು ವರ್ಷಗಳ ಹಿಂದಿನ ಮಾತು. ನಾನು ಮತ್ತು ಯೂನುಸ್ ಇಮ್ದಾದಿ ಒಟ್ಟಿಗೆ ಪತ್ರಿಕೋದ್ಯಮಕ್ಕೆ  ಕಾಲಿಟ್ಟ ಸಮಯ. ಕರ್ನಾಟಕದ ಮುಸ್ಲಿಂ ಪತ್ರಿಕಾ ರಂಗ ದಲ್ಲಿ ಅತೀ ಹೆಚ್ಚು ಪ್ರಚಾರ ಮೂಲಕ ಮನೆಮಾತಾದ  ಸುನ್ನತ್ ಎಂಬ ಮಾಸಿಕಕ್ಕೆ ಯೂನುಸ್ ಇಮ್ದಾದಿಯವರನ್ನು ಸಂಪಾದಕರಾಗಿ ನೇಮಕ ಮಾಡಲಾಯಿತು. ಇವರ ನೇಮಕದ ಬಗ್ಗೆ ಹಿರಿಯ ಬರಹಗಾರರೊಬ್ಬರು ನನ್ನಲ್ಲಿ ಅಸಹನೆ ವ್ಯಕ್ತಪಡಿಸಿದ್ದರು. "ಪೆನ್ನು ಹಿಡಿದ ಕೂಡಲೇ ಸಂಪಾದಕ ಮಾಡಿದ್ದು ಸರಿಯಲ್ಲ" ಎಂಬ ವಾದವಾಗಿತ್ತು ಅವರದ್ದು. ನಂತರ ಅವರೇ ಯೂನುಸ್ ಇಮ್ದಾದಿ ಯವರ ಬರಹವನ್ನು ಬಾಯಿ ತುಂಬಾ ಹೊಗಳಿದ್ದರು.

ಕರ್ನಾಟಕ ದಲ್ಲಿ ವಿಶೇಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬರಹ ರಂಗದಲ್ಲಿ ನೂರಕ್ಕೂ ಮಿಕ್ಕ ಬರಹಗಾರರಿದ್ದಾರೆ. ಆದರೆ, ಯೂನುಸ್ ಇಮ್ದಾದಿ ಯವರಂತ ಬರಹ ಗಾರರು ಅಪರೂಪ. ಓದುಗರನ್ನು ಆಕರ್ಷಿಸುವ ಬರಹ ಶೈಲಿ, ಪ್ರತೀ ತಿಂಗಳು ಆಕರ್ಷಣೀಯ ಬರಹ ಮೂಲಕ ಪತ್ರಿಕೆ ಓದುಗರಿಗೆ ಬೋರ್ ಆಗದಂತೆ ಮುನ್ನಡೆ ಸುವ ಇಮ್ದಾದಿ ಯವರ ಸಾಮರ್ಥ್ಯ ನಿಜಕ್ಕೂ ಮೆಚ್ಚಲೇ ಬೇಕು.

 ತಿಂಗಳಿಗೊಂದು  ಲೇಖನ ಬರೆಯಲು ಕಷ್ಟ ಪಡುವ ಲೇಖರ ಮುಂದೆ ಸುನ್ನತ್ ಮತ್ತು ಸುನ್ನೀವಾಣಿ ಪತ್ರಿಕೆಯನ್ನು ಪ್ರತೀ ತಿಂಗಳು ತುಂಬಿಸಿ ಓದುಗರಿಗೆ ಬಡಿಸುವ ಅವರ ಪ್ರಯತ್ನಕ್ಕೆ ಬೇಷ್ ಎನ್ನಲೇ ಬೇಕು.

ನಮ್ಮ ನಡುವೆ ಹಲವು ಪತ್ರಿಕೆ ಗಳಿವೆ‌. ಅವುಗಳಲ್ಲಿ ಹಲವು ಲೇಖಕರು ದುಡಿಯುತ್ತಿದ್ದಾರೆ‌‌. ಆದರೆ , ಸುನ್ನತ್ ಪತ್ರಿಕೆ ಯಲ್ಲಿ ತೊಂಬತ್ತು ಶೇಖಡ ಲೇಖನಗಳು ,ಅದೂ ಜನಾಕರ್ಷಣೀಯ ಬರಹಗಳನ್ನೊಳಗೊಂಡ ಬರಹ ಗೊಂಚಲೇ ಓದುಗರಿಗೆ ಉಣಿಸುತ್ತಿರುವವರು ಇಮ್ದಾದಿ ಉಸ್ತಾದರು.

ಮುಸ್ಲಿಂ ಪತ್ರಿಕೋದ್ಯಮದಲ್ಲಿ ಸುನ್ನತ್ ಮುಂಚೂಣಿ ಯಲ್ಲಿದೆ. ಅದಕ್ಕೆ ಕಾರಣ ಇಮ್ದಾದಿ ಉಸ್ತಾದ್ ರವರ ಲೇಖನ. ಯಾವ ತಿಂಗಳ ಸುನ್ನತ್ ಮಾಸಿಕವೂ ಓದುಗರಿಗೆ ಬೋರ್ ಆದದ್ದಿಲ್ಲ. ಪ್ರತೀ ದಿನ ಅರ್ಧರಾತ್ರಿ ತನಕ ಕುಳಿತು ಓದುಗರಿಗೆ ಯಾವ ಲೇಖನ ಸೂಕ್ತ ಎಂದು ಚಿಂತಿಸಿ  ಸುನ್ನತ್ ಮಾಸಿಕವನ್ನು ತಯಾರು ಮಾಡಿ ಪ್ರತೀ ತಿಂಗಳು ಓದುಗರಿಗೆ ನೀಡುತ್ತಾರೆ‌.ಅವರ ಪ್ರಯತ್ನದ ಫಲ ವಾಗಿ ಸುನ್ನತ್ ಮಾಸಿಕವು ಓದುಗರ ಮನ ಗೆದ್ದಿದೆ.

ಸುನ್ನತ್, ಸುನ್ನೀವಾಣಿ ಜನಮಾನಸದಲ್ಲಿ ಭದ್ರವಾಗಿ ಬೇರೂರಲು ಇಮ್ದಾದಿ ಯವರ ಬರಹವೂ ಕಾರಣ ಎಂಬುದಕ್ಕೆ ಎರಡು ಮಾತಿಲ್ಲ. ಅತ್ಯಂತ ಸರಳ ಗುಣ, ಸೌಮ್ಯ ನಡತೆಯನ್ನು ಮೈಗೂಡಿಸಿ ಕೊಂಡಿರುವ ಇಮ್ದಾದಿ ಉಸ್ತಾದ್ ರವರು ತಾನೊಬ್ಬ ಜನಪ್ರಿಯ ಬರಹಗಾರ ಎಂಬ ಅಹಂ ಗೊಳಗಾದವರಲ್ಲ. ಯಾರು ಬಂದರೂ ಪ್ರೀತಿಯಿಂದ ಮಾತಿಗಿಳಿಯುವ ಅವರು ಯಾರ ಮುಂದೆಯೂ ತಾನೊಬ್ಬ ಬರಹಗಾರನೆಂದು ತೋರ್ಪಡಿಸಿದ್ದಿಲ್ಲ.

ಸನ್ಮಾನ,ಪ್ರಶಸ್ತಿ ಗಳ ಹಿಂದೆ ಓಡಾಡುವ ,ಹೆಸರು ,ಕೀರ್ತಿ ಗಾಗಿ ಪರದಾಡುವ ಯುವ ಬರಹಗಾರರ ನಡುವೆ, ಹೇಗಾದರೂ ಸರಿ ಲೇಖನ ಬರೆದರೆ ಸಾಕೆಂದು ಭಾವಿಸುವ ಲೇಖಕರ ಮಧ್ಯೆ ಅಪರೂಪದ ಬರಹಗಾರರಾಗಿ ಮೂಡಿ ಬರುತ್ತಾರೆ ಇಮ್ದಾದಿ ಉಸ್ತಾದ್ ರವರು.

ಅಲ್ಲಾಹನು, ಇಮ್ದಾದಿ ಯವರಿಗೆ ದೀರ್ಘಾಯುಷ್ಯ ನೀಡಲಿ. ಬರಹದಲ್ಲಿ ಸಮೃದ್ಧಿ ಮತ್ತು ಐಶ್ವರ್ಯ ನೀಡಲಿ.

ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕಾದದ್ದು ನಮ್ಮೆಲ್ಲರ ಬಾಧ್ಯತೆ ಯಾದ ಕಾರಣ ಯೂನುಸ್ ಇಮ್ದಾದಿ ಯವರಿಗೆ ಬರಹ ಮೂಲಕ ಗೌರವ ನೀಡುತ್ತಿದ್ದೇನೆ.

🌹🌹🌹🌹🌹🌹🌹🌹🌹🌹

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.