Skip to main content

ಬಿಜೆಪಿ ಮಾತ್ರವಲ್ಲ ಯಾವುದೇ ರಾಜಕೀಯ ಪಕ್ಷದವರೂ ತಮ್ಮ ರಾಜಕೀಯ ಲಾಭಕ್ಕಾಗಿ ನಡೆಸುವ ಸಮಾವೇಶದಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸುವುದು ಸರಿಯಾದ ಕ್ರಮವಲ್ಲ.

ಬಿಜೆಪಿ ನಡೆಸಿದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಸ್ಲಿಂ ಪಂಡಿತರು ಭಾಗವಹಿಸಿದ್ದು ತೀವ್ರ ಚರ್ಚೆಗೆ ಒಳಗಾಗಿದೆ.ಬಿಜೆಪಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಉಸ್ತಾದರು ಭಾಗವಹಿಸಿದ್ದಾ ಎಂದು ಕೆಲವರು ಹುಬ್ಬೇರಿಸುತ್ತಿರುವುದೂ ಕಂಡು ಬಂತು.

ನನ್ನ ಮಟ್ಟಿಗೆ ಹೇಳುವುದಾದರೆ
ಬಿಜೆಪಿ ಮಾತ್ರವಲ್ಲ ಯಾವುದೇ ರಾಜಕೀಯ ಪಕ್ಷದವರೂ ತಮ್ಮ ರಾಜಕೀಯ ಲಾಭಕ್ಕಾಗಿ ನಡೆಸುವ ಸಮಾವೇಶದಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸುವುದು ಸರಿಯಾದ ಕ್ರಮವಲ್ಲ.
ಧರ್ಮಗುರುಗಳು ಸಾರ್ವಜನಿಕವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಮುಸ್ಲಿಂ ಸಮಾಜದಲ್ಲಿ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡವರಿರಬಹುದು. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದು ಸರ್ವರ ಒಳಿತಿಗಾಗಿ ದುಡಿಯುವುದು ಧರ್ಮಗುರುಗಳ ಧರ್ಮ. ಅಲ್ಲಿ ಪಾಕ್ಷಿಕ ಗುರುತುಗಳು ಧರ್ಮನಿರ್ವಹಣೆಗೆ ತಡೆಗೋಡೆಯಾಗಬಾರದು. ನಿರ್ದಿಷ್ಟ ಪಕ್ಷವೊಂದು ರಾಜಕೀಯ ಲಾಭಕ್ಕಾಗಿ ನಡೆಸುವ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹಾಗೂ ಸಾಮೂಹಿಕವಾಗಿ ಭಾಗವಹಿಸಿ ನಿರ್ದಿಷ್ಟ ಪಕ್ಷದವೊಂದರ ಸಾಮಿಪ್ಯ ಪ್ರದರ್ಶಿಸುವುದು ಧರ್ಮಗುರುಗಳ ಘನತೆಗೂ ಒಡನಾಟಕ್ಕೂ ಶೋಭೆಯಲ್ಲ.

ನಾನಿಲ್ಲಿ ಹೇಳುತ್ತಿರುವುದು ಬಿಜೆಪಿ ನಡೆಸಿದ ಕಾರ್ಯಕ್ರಮ ಎಂಬ ದೃಷ್ಟಿಯಲ್ಲಿ ಅಲ್ಲ.ಯಾವುದೇ ನಿರ್ದಿಷ್ಟ ಪಕ್ಷ ನಡೆಸಿದರೂ ತಥೈವ. ಆದ್ದರಿಂದ ಕಾಂಗ್ರೆಸ್ ನಡೆಸಿದರೂ ಜೆಡಿಎಸ್ ನಡೆಸಿದರೂ ಅದರಲ್ಲಿ ಭಾಗವಹಿಸಿ ಪಾಕ್ಷಿಕ ಸಂಕುಚಿತತೆಯನ್ನು ಪ್ರದರ್ಶಿಸುವುದು ಧರ್ಮಗುರುಗಳಿಗೆ ತರವಲ್ಲ.

ಅದೇ ವೇಳೆ ಕೇಂದ್ರ ಸರಕಾರ ಮುಸ್ಲಿಮರಿಗಾಗಿ ಮೀಸಲಿಟ್ಟ ಸವಲತ್ತುಗಳನ್ನು ಧರ್ಮಗುರುಗಳ ಗಮನಕ್ಕೆ ತಂದು ಅವರ ಮೂಲಕ ಮೊಹಲ್ಲಾ ನಿವಾಸಿಗಳಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ್ಮ ಹಮ್ಮಿಕೊಂಡಿದ್ದರೆ ಹಾಗೂ ಅದೇ ಉದ್ದೇಶದಲ್ಲಿ ಧರ್ಮಗುರುಗಳು ಭಾಗವಹಿಸಿದ್ದರೆ ಅದನ್ನು ತಪ್ಪೆಂದು ಹೇಳಲಿಕ್ಕಾಗದು. ಏಕೆಂದರೆ ಸರಕಾರ ನಮ್ಮ ಸಮಾಜಕ್ಕೆ ನೀಡುವ ಹಲವಾರು ಸವಲತ್ತುಗಳ ಬಗ್ಗೆ ಮುಸ್ಲಿಮರು ಅಜ್ಞರಾಗಿದ್ದಾರೆ. ಅದನ್ನು ಮುಸ್ಲಿಂ ಜನಸಾಮಾನ್ಯರಿಗೆ ಗರಿಷ್ಟ ಪ್ರಮಾಣದಲ್ಲಿ ತಲುಪಿಸುವ ಜವಾಬ್ದಾರಿ ಧರ್ಮಗುರುಗಳ ಸಹಿತ ಎಲ್ಲರ ಮೇಲೂ ಇದೆ. ಆದರೆ ಅಲ್ಲಿ ನಡೆದ ಭಾಷಣದ ವೀಡಿಯೊವನ್ನು ನೋಡಿದಾಗ ಅಂತಹಾ ಯಾವುದೇ ಮಾಹಿತಿ ಕಾಣಲಿಲ್ಲ ಎಂಬುದು ಬೇರೆ ಮಾತು.

ಇನ್ನು ಹೇಗಾದರೂ ಅಲ್ಲಿ ಭಾಗವಹಿಸಿಯಾಯಿತು ಎಂದಿಟ್ಟುಕೊಳ್ಳೋಣ, ಅಲ್ಲಿ ರಾಜಕೀಯ ಮಾತಾಡುವುದಕ್ಕೆ ಬದಲಾಗಿ ಮುಸ್ಲಿಂ ಮತ್ತು ಹಿಂದುಗಳ ಮಧ್ಯೆ ಇರುವ ಮತೀಯ ಕಂದಕವನ್ನು ಮುಚ್ಚಲು ಹಾಗೂ ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡ ಕೆಲವು ಸಮಾಜ ಘಾತುಕರ ಪುಂಡಾಟಿಕೆಯನ್ನು ಬಿಜೆಪಿಗರ ಗಮನಕ್ಕೆ ತಂದು ಅವರನ್ನು ನೆಟ್ಟಗೆ ನಿಲ್ಲಿಸುವಂತೆ ಹೇಳಿಕೆ ಕೊಟ್ಟಿದ್ದರೆ ಅದಕ್ಕೊಂದು ಅರ್ಥವಿತ್ತು. ಮುತಾಲಿಕ್,ಶೇಣವ , ಪ್ರಭಾಕರ ಭಟ್ ಮುಂತಾದ ಉರಿನಾಲಗೆಗಾರರನ್ನು ಪಕ್ಷವು ಹದ್ದುಬಸ್ತಿನಲ್ಲಿಡುವಂತೆ ಬಿಜೆಪಿ ನಾಯಕರಲ್ಲಿ ಕೋರಬೇಕಾಗಿತ್ತು. ಪ್ರತೀಯೊಬ್ಬ ಹಿಂದು ತನ್ನೊಂದಿಗೆ ತಲವಾರೊಂದನ್ನು ಇಟ್ಟುಕೊಳ್ಳಬೇಕೆಂದು ಯಾವುದೇ ಅಂಜಿಕೆ, ಸಂಕೋಚವಿಲ್ಲದೆ ಬಹಿರಂಗವಾಗಿ ಭಾಷಣಮಾಡುವ ,ಜುನೈದನಂತಹಾ ಅಮಾಯಕ ಹಾಗೂ ಮುಗ್ಧ ರನ್ನೂ ಹತ್ಯೆ ಮಾಡುವ, ಗೋರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧ ಸಂಘಿಗಳನ್ನು ಸರಿದಾರಿಗೆ ತರಲು ಆಹ್ವಾನ ನೀಡಬೇಕಾಗಿತ್ತು. ಅಶ್ರಫ್ ನನ್ನು ಹತ್ಯೆ ಮಾಡಿದಾಗ ಅದನ್ನು ತಾನೊಬ್ಬ ಜನಪ್ರತಿನಿಧಿ ಎಂಬ ದೃಷ್ಟಿಯಲ್ಲಿ ಖಂಡಿಸದೆ,ಪ್ರತಿಭಟಿಸದೆ ಶರತ್ ನನ್ನು ಹತ್ಯೆ ಮಾಡಿದಾಗ ನಡುರಸ್ತೆಯಲ್ಲಿ ಕಾನೂನು ಉಲ್ಲಂಘಿಸಿ ಪ್ರತಿಭಟನೆಗಿಳಿದ ನಳಿನ್ ಕುಮಾರರಂತಹಾ  ಜನಪ್ರತಿನಿಧಿಗಳ ದ್ವಿಮುಖ ನೀತಿಯನ್ನು ಖಂಡಿಸಬೇಕಾಗಿತ್ತು.ಹಾಗಾಗಿದ್ದಲ್ಲಿ ಇವರು ಭಾಗವಹಿಸಿದ್ದು ಸಾರ್ಥಕವೆನಿಸುತ್ತಿತ್ತು. ಇದ್ಯಾವುದನ್ನೂ ಮಾಡದೆ ಕೇವಲ ರಾಜಕೀಯ ಮಾತಾಡಲೂ,ರಾಜಕಾರಣಿಗಳ ಗೊಡ್ಡು ಭಾಷಣವನ್ನು ಆಲಿಸಲೂ ಹೋಗುವುದು ಧರ್ಮಗುರುಗಳ ದೊಡ್ಡ ಘಣತೆಗೆ ಒಮ್ಮೆಯೂ ತಕ್ಕುದಲ್ಲ. ಧರ್ಮಗುರುಗಳು ತಮ್ಮ ಘಣತೆಯನ್ನು ರಾಜಕೀಯ ಪುಡಾರಿಗಳ ಮುಂದೆ ಪಣಕ್ಕಿಡುವ ಮಟ್ಟಕ್ಕೆ ಒಮ್ಮೆಯೂ ಇಳಿಯಬಾರದು.

ಅದರೊಂದಿಗೆ ಒಂದು ಮಾತನ್ನು ಇಲ್ಲಿ ಸೇರಿಸುತ್ತಿದ್ದೇನೆ, ಮುಸ್ಲಿಮರು ಯಾವುದಾದರೊಂದು ನಿರ್ದಿಷ್ಟ ಪಕ್ಷದ ದಾಸರಲ್ಲ. ಪಕ್ಷ ರಾಜಕೀಯದ ಯಾವುದೇ ಅಗತ್ಯ ಮುಸ್ಲಿಮರಿಗಿಲ್ಲ. ಅಂತಹಾ ಕೀಳು ಮಟ್ಟದ ರಾಜಕೀಯದ ಕಾಲ ಇನ್ನು ಮುಂದೆ ದೊರಕಲಾರದು.

ಬಿಜೆಪಿ ನಾಯಕರೊಂದಿಗೆ ನಮಗೆ ಹೇಳಲಿಕ್ಕಿರುವುದು ಇಷ್ಟೆ, ಬಿಜೆಪಿ ಸರಕಾರ ಕೆಲವೊಂದು ಉತ್ತಮ ಸವಲತ್ತುಗಳನ್ನು ಮುಸ್ಲಿಮರಿಗೆ  ನೀಡಿದೆ, ನಾವು ಅದನ್ನು ಇಲ್ಲ ಎನ್ನುವುದಿಲ್ಲ. ಅದಕ್ಕೆ ನಾವು ಕೃತಜ್ಞತೆಯನ್ನೂ ಸಲ್ಲಿಸುತ್ತೇವೆ. ಆದರೆ ನಮಗೆ ಆ ಸವಲತ್ತು ಈ ಸವಲತ್ತು ಗಳಿಗಿಂತ ಹೆಚ್ಚು ಮುಖ್ಯವಾದುದು ನಮ್ಮ ಅಸ್ತಿತ್ವ. ಮುಸ್ಲಿಮರ ಅಸ್ತಿತ್ವವನ್ನೇ ನಿರ್ಣಾಮ ಮಾಡಿ ಹಿಂದೂ ರಾಷ್ಟ್ರದ ಸಂಕಲ್ಪ ಹೊಂದಿದ ಕೆಲವು ಮತಾಂಧರು ನಿಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಅಂತಹಾ ಕೆಟ್ಟ ನಿರ್ಧಾರಗಳಿಗೆ ಪೂರಕವಾಗಿದ್ದರೆ ಮೊದಲು ಅದನ್ನು ಸರಿಪಡಿಸಿ. ತಾವು ನಮಗೆ ಶಾದೀ ಭಾಗ್ಯ, ಕಂಕಣ ಭಾಗ್ಯ, ಸೈಕಲ್ ಭಾಗ್ಯ ನೀಡುವುದಕ್ಕಿಂತ ಮೊದಲು ನಮಗೆ ಜೀವನ ಭಾಗ್ಯವನ್ನು ದಯಪಾಲಿಸಿ. ತಾವು ಯಾವುದೇ ಭಾಗ್ಯವನ್ನು ನೀಡದಿದ್ದರೂ ನಾವು ಕಷ್ಟಪಟ್ಟು ದುಡಿದು ನಮ್ಮಷ್ಟಕ್ಕೆ ಜೀವಿಸುವೆವು. ತಾವು ಅದಕ್ಕಾದರೂ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ. ಆ ಉಪಕಾರವನ್ನು ನಾವು ಯಾವತ್ತೂ ಮರೆಯಲಾರೆವು.


ತೋಕೆ ಸಖಾಫಿ

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.