Skip to main content

ಇಂದಿನಿಂದ ನಾವು ತಯಾರಾಗೋಣ ವಿಶ್ವದ ಮುಸ್ಲಿಮರು ದುಲ್ಹಜ್ ತಿಂಗಳನ್ನ ಬಹಳ ಸಂಭ್ರಮದಿಂದ ಸ್ವಾಗತಿಸುತ್ತಾರೆ.

*ದುಲ್ಹಜ್ಜ್* 1ರಿಂದ 9ರ ವರೆಗೆ ಬಹಳ ಮಹತ್ವವಿರುವ ದಿವಸಗಳಾಗಿವೆ.
ಅದರ ಒಂದೊಂದು ದಿವಸದ ವೈಶಿಷ್ಟ್ಯತೆಗಳನ್ನು ಕೆಳಗೆ ವಿವರಿಸಲಾಗಿದೆ.

▶ *ದುಲ್ಹಜ್ಜ್* 1: ಆದಮ್ ನಬಿ(ಅ) ರವರ ತೌಬವನ್ನು ಅಲ್ಲಾಹು ಸ್ವೀಕರಿಸಿದ ದಿನವಾಗಿದೆ. ಈ ದಿನ ಉಪವಾಸ ಅನುಷ್ಠಿಸಿದರೆ ಅವನ ಪಾಪಗಳನ್ನು ಅಲ್ಲಾಹು  ಮನ್ನಿಸಿ ಕೊಡುವನು.

▶ *ದುಲ್ಹಜ್ಜ್* 02: ಮತ್ಸ್ಯದ ಹೊಟ್ಟೆಯಲ್ಲಿದ್ದ ಯೂನುಸ್ ನಬಿ (ಸ)ರವರ ಪ್ರಾರ್ಥನೆಗೆ ಅಲ್ಲಾಹು ಉತ್ತರ ಕೊಟ್ಟಿರುವುದು ಈ ದಿವಸವಾಗಿದೆ. ಆದ್ದರಿಂದ ಈ ದಿವಸ ಪ್ರಾರ್ಥಿಸಿದರೆ ಅಲ್ಲಾಹು ಉತ್ತರ ಕೊಡುವನು.

▶ *ದುಲ್ಹಜ್ಜ್* 03: ಝಕರಿಯ ನಬಿ (ಅ) ರವರ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡಿರುವುದು ಈ ದಿನವಾಗಿದೆ. ಈ ದಿನ ಪ್ರಾರ್ಥಿಸಿದರೆ ಅಲ್ಲಾಹು ಉತ್ತರ ಕೊಡುವನು.

▶ *ದುಲ್ಹಜ್ಜ್* 04: ಈಸಾ ನಬಿ(ಅ) ರವರಿಗೆ ಅಲ್ಲಾಹು ಜೀವ ಕೊಟ್ಟನು.
ಈ ದಿವಸ ಒಬ್ಬ ಉಪವಾಸ ಅನುಷ್ಠಿಸಿದರೆ ಅವನನ್ನು ಅಲ್ಲಾಹು ದಾರಿದ್ರ್ಯದಿಂದ ಸಂರಕ್ಷಿಸಿ ಖಿಯಾಮತ್ ದಿವಸದಲ್ಲಿ ಅವನು ಗುಣವಂತರೊಂದಿಗೆ ಇರುವನು.

▶ *ದುಲ್ಹಜ್ಜ್* 05: ಮೂಸ ನಬಿ (ಅ) ರವರು ಜನಿಸಿರುವ ದಿವಸವಾಗಿದೆ.
ಈ ದಿವಸ ಯಾರಾದರೂ ಉಪವಾಸ ಅನುಷ್ಠಿಸಿದರೆ ಕಾಪಟ್ಯದಿಂದಲೂ, ಖಬರ್ ಶಿಕ್ಷೆಯಿಂದಲೂ ಅಲ್ಲಾಹು ಅವನನ್ನು ರಕ್ಷಿಸುವನು.

▶ *ದುಲ್ಹಜ್ಜ್* 06: ನಬಿ ﷺ ರವರಿಗೆ ಒಳಿತಿನ ಬಾಗಿಲುಗಳನ್ನು ತೆರೆದು ಕೊಟ್ಟ ದಿವಸವಾಗಿದೆ. ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಅಲ್ಲಾಹು ಅವನತ್ತ ಕಾರುಣ್ಯದ ನೋಟ ನೋಡುವನು. ಅಲ್ಲದೆ ಅವನಿಗೆ ಶಿಕ್ಷೆಯಿಂದ ರಿಯಾಯತಿ ಕೊಡುವನು.

▶ *ದುಲ್ಹಜ್ಜ್* 07: ಈ ದಿವಸ ನರಕದ ಬಾಗಿಲುಗಳು ಮುಚ್ಚುವ ದಿವಸವಾಗಿದೆ. ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಪ್ರಯಾಸದ 33 ದ್ವಾರಗಳು ಮುಚ್ಚಲ್ಪಡುವುದು.

▶ *ದುಲ್ಹಜ್ಜ್* 08: ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಅವರಿಗೆ ಅಲ್ಲಾಹು ಲೆಕ್ಕವಿಲ್ಲದಷ್ಟು ಪ್ರತಿಫಲವನ್ನು ನೀಡುವನು.

▶ *ದುಲ್ಹಜ್ಜ್* 09: ಅರಫಾ ದಿನ.
ಈ ದಿವಸ ಯಾರಾದರು ಉಪವಾಸ ಅನುಷ್ಠಿಸಿದರೆ ಕಳೆದದ್ದು ಹಾಗು ಬರಲಿರುವ ಒಂದು ವರ್ಷದ ದೋಷಗಳನ್ನು ಅಲ್ಲಾಹು ಮನ್ನಿಸಿ ಕೊಡುವನು.
(ನಬಿ ವಚನ)

ಈ ಪುಣ್ಯ ಮಾಸವನ್ನು ಗೌರವದಿ೦ದ ಬರಮಾಡಿಕೊಳ್ಳಲು, ಉಪವಾಸ ಅನುಷ್ಠಿಸಲು, ಸತ್ಕರ್ಮಗಳನ್ನು ನಿರ್ವಹಿಸಲೂ,  ಅದು ಕಾರಣವಾಗಿ ನಮ್ಮ ಪಾಪಗಳು ಮನ್ನಿಸಲ್ಪಡಲು ಜಗದ್ರಕ್ಷಕನಾದ ಅಲ್ಲಾಹು ತೌಫೀಖ್ ನೀಡಲಿ, ಆಮೀನ್.

ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರ್ ಮಂಗಳೂರು

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.