*ಖ್ಯಾತ ಪತ್ರಕರ್ತೆ,ಸಾಹಿತಿ,ಮಾನವ ಹಕ್ಕುಗಳ ಹೋರಾಟಗಾರ್ತಿ ಗೌರಿ ಲಂಕೇಶರ ಹತ್ಯೆಯು ಅತ್ಯಂತ ನೀಚವೂ ಹೇಯಕೃತ್ಯವೂ ಆಗಿದ್ದು ಇದು ಭಾರತದ ಶೋಷಿತ ಹಾಗೂ ದಮನಿತರಾದ ದಲಿತರು,ಅಲ್ಪಸಂಖ್ಯಾತರು ಹಾಗೂ ಪ್ರಗತಿಪರರು ತಮ್ಮ ಹಕ್ಕು ಹಾಗೂ ನ್ಯಾಯಕ್ಕಾಗಿ ನಡೆಸುವ ಹೋರಾಟದ ವಿರುದ್ಧ ದೇಶದ್ರೋಹಿಗಳೂ ನರರಾಕ್ಷಸರೂ ಆದ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ದಾಳಿಯಾಗಿದೆ.*
*ಪ್ರಸಕ್ತ ಇಡೀ ಭಾರತದಲ್ಲಿ ಈ ಗೋಡ್ಸೆ ಸಂತತಿಗಳ ಅಟ್ಟಹಾಸ ಮುಂದುವರಿಯುತ್ತಾ ಇದ್ದು ಕೊಲೆ,ಹಿಂಸೆ ಸುಲಿಗೆ,ಅತ್ಯಾಚಾರಗಳ ಮೂಲಕ ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೂ ಈ ದುಷ್ಟ ಶಕ್ತಿಗಳನ್ನು ಮಟ್ಟಹಾಕಿ ಹದ್ದು ಬಸ್ತಿನಲ್ಲಿಡದೆ ಸರಕಾರಗಳು ಜಾಣಮೌನವನ್ನು ತಾಳಿ ಅವರಿಗೆ ಹಿಂಬಾಗಿಲ ನೆರವನ್ನು ನೀಡುತ್ತಿದೆ ಎನ್ನಲು ನಾಚಿಕೆಯಾಗುತ್ತಿದೆ.*
*ಬ್ರಿಟಿಷರ ವಿರುದ್ಧ ರಾಷ್ಟ್ರ ಸ್ವಾತಂತ್ರ್ಯದ ಸಮರ ನಡೆದಿದ್ದರೆ ಇಂದು ಈ ನರರಾಕ್ಷಸ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಆಂತರಿಕ ಸ್ವಾತಂತ್ರ್ಯ ಸಮರದ ಕಹಳೆಯೂದಬೇಕಾದ ಸಮಯ ಅತಿಕ್ರಮಿಸಿದೆ.ಗೋಹತ್ಯೆ,ಲವ್ ಜಿಹಾದ್ ಇತ್ಯಾದಿ ಕಪೋಕಲ್ಪಿತ ಹಾಗೂ ಸುಳ್ಳು ನೆಪಗಳನ್ನು ಹೆಣೆದು ಇಡೀ ಭಾರತದಲ್ಲಿ ಗಲಭೆ, ನರಮೇಧ,ದೊಂಬಿಗಳನ್ನುಂಟುಮಾಡಿ ಅಮಾಯಕರನ್ನು ನಿಷ್ಠೂರವಾಗಿ ಕೊಂದು ಹಾಕುವ ಈ ದೇಶದ್ರೋಹಿಗಳನ್ನು ಮಟ್ಟಹಾಕುವುದು ಭಾರತದ ಅತೀ ದೊಡ್ಡ ಸವಾಲಾಗಿದೆ.*
*ಮುಶ್ತಾಖ್ ಪ್ರೇಮವಿವಾಹವಾಗಿ ಪ್ರತಾಪ್ ಆದರೆ, ರಾಹಿಮಾ ಪ್ರೇಮವಿವಾಹವಾಗಿ ಹಿಂದೂವಾದರೆ ಅದು ದೇಶಪ್ರೇಮ. ಅಖಿಲ ಸ್ವ ಇಚ್ಚೆಯಿಂದ ಹಾದಿಯಾ ಆದರೆ ಅದು ಲವ್ ಜಿಹಾದ್, ದೇಶದ್ರೋಹ!!. ಹಿಂದೂವಾದ ಪ್ರತೀಯೊಬ್ಬನೂ ಮುಸ್ಲಿಮನ ತಲೆಕಡಿಯಲು ಕೈಯಲ್ಲಿ ತಲವಾರು ಹಿಡಿಯಬೇಕು,ಮುಸ್ಲಿಂ ಸ್ತ್ರೀಯರ ಗರ್ಭಕ್ಕೆ ಹಿಂದೂವಿನ ವೀರ್ಯವನ್ನು ಕಳುಹಿಸಿ ಒಬ್ಬ ಹಿಂದೂವಿಗೆ ಜನ್ಮ ನೀಡಬೇಕು ಇಸ್ಲಾಮನ್ನು ಜಗತ್ತಿನಿಂದ ನಿರ್ಣಾಮ ಮಾಡಬೇಕು ಎಂದು ಬಹಿರಂಗ ಭಾಷಣ ಮಾಡುತ್ತಿರುವ ಮುತಾಲಿಕ್, ಅನಂತಾದಿಗಳು ದೇಶಪ್ರೇಮಿಗಳಾಗಿ ಅಮಾಯಕರನ್ನು ಕೊಲ್ಲಿಸಿ ಯಾವುದೇ ಕೇಸ್,ಜೈಲುಭಾಗ್ಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದರೆ ದಮನಿತ ಹಾಗೂ ಶೋಷಿತ ಜನವರ್ಗಕ್ಕೆ ಬೇಕಾಗಿ ಧ್ವನಿಯೆತ್ತಿದ ಮಅದನಿ ದೇಶದ್ರೋಹಿ,ಭಯೋತ್ಪಾದಕನಾಗಿ ತಾನು ಮಾಡಿದ ತಪ್ಪೇನೆಂದರಿಯದೆ ಈಗಲೂ ಸೆರೆಮನೆವಾಸ ಅನುಭವಿಸುತ್ತಿರುವುದು ಇಲ್ಲಿಯ ನ್ಯಾಯ ವ್ಯವಸ್ಥೆಗೆ ಬಂದೊದಗಿದ ದುರಂತವೆನ್ನದೆ ನಿರ್ವಾಹವಿಲ್ಲ*
*ಇದೀಗ ಶೋಷಿತ ಜನವರ್ಗದ ಧ್ವನಿಯಾಗಿ ಫ್ಯಾಸಿಸ್ಟ್ ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದ್ದ ಗೌರಿಲಂಕೇಶರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡುವ ಮೂಲಕ "ರಾಷ್ಟ್ರಪಿತನ ಹಂತಕರಾದ ಗೋಡ್ಸೆಯ ಸಂತತಿಗಳಾದ ನಮ್ಮ ಚಿಗುರು,ಬೇರು ಅಳಿದಿಲ್ಲ,ನಾವಿನ್ನೂ ಜೀವಂತವಾಗಿಯೇ ಇದ್ದೇವೆ,ದೇಶದಲ್ಲಿ ಶಾಂತಿ,ಸಮಾಧಾನ,ಐಕ್ಯತೆ ಉಂಟಾಗಲು ನಾವೆಂದೂ ಬಿಡಲಾರೆವು,ನಾವೆಂದೂ ರಾಷ್ಟ್ರ ವಿರೋಧಿ ಚಟುವಟಿಕೆಗಳ ಮೂಲಕ ಇಲ್ಲಿ ಭಯೋತ್ಪಾದನೆಯನ್ನು ಮಾಡುತ್ತಾ ಇರುವೆವು ಎಂಬ ಕೇಸರಿ ಸಂದೇಶವನ್ನು ಈ ನರರಾಕ್ಷಸ ಫ್ಯಾಸಿಸ್ಟ್ ಗಳು ಇಡೀ ದೇಶಕ್ಕೆ ರವಾನಿಸಿದ್ದಾರೆ.*
*ವಿಚಾರಧಾರೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಈ ಗೋಡ್ಸೆಸಂತತಿಗಳು ಅಡ್ಡದಾರಿಯ ಮೂಲಕ ಸೇಡು ತೀರಿಸುತ್ತಿರುವುದು ತಮ್ಮ ಬಲಹೀನತೆಯನ್ನು ಬಿಂಬಿಸುತ್ತದೆ ಎಂಬುದನ್ನು ಅರ್ಥಮಾಡಲೂ ಸಾದ್ಯವಾಗದ ಮೂರ್ಖರಾಗಿದ್ದಾರೆ.*
*ಈ ಸಂದರ್ಭದಲ್ಲಿ ಗೌರಿ ಲಂಕೇಶರ ಹತ್ಯೆಯನ್ನು ಅತ್ಯಂತ ಕಠಿಣವಾಗಿ ಖಂಡಿಸುವುದರೊಂದಿಗೆ ಈ ನರಹಂತಕರನ್ನು ಅತೀ ಶೀಘ್ರವಾಗಿ ಬಂಧಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.ಕರಾವಳಿಯ ಕೆಲವು ಮತಾಂಧ ದುಷ್ಟ ಶಕ್ತಿಗಳನ್ನು ಜೈಲಿಗಟ್ಟಿ ಕಠಿಣ ವಿಚಾರಣೆಗೆ ಒಳಪಡಿಸಿದರೆ ಕೊಂದ ಹಾಗೂ ಕೊಲ್ಲಿಸಿದ ನರರಾಕ್ಷಸರ ಹೆಸರು ಬೇಗನೇ ಬಹಿರಂಗಗೊಳ್ಳಬಹುದೆಂದಾಗಿದೆ ಸಾರ್ವಜನಿಕರ ಅಭಿಪ್ರಾಯ.*
*ಟಿ.ಯಂ.ಮುಹ್ಯಿದ್ದೀನ್ ಸಖಾಫಿ,ತೋಕೆ*
(ನಿರ್ದೇಶಕರು ಸುನ್ನೀ ಸಾಹಿತ್ಯ ಮಂಡಳಿ,ಮಂಗಳೂರು)
Comments
Post a Comment