ಮುಸ್ಲಿಮರು ಇಂದು ಅತ್ಯಂತ ಸಂತೋಷದಿಂದ ಇರುವ ಈ ಸಂದರ್ಭದಲ್ಲಿ ಬಲಿ ಪೆರುನಾಳ್ ಆಚರಣೆ ಅಂಗವಾಗಿ ಹೊಸ ಹೊಸ ಬಟ್ಟೆಗಳನ್ನ ಧರಿಸಿ ಮಸೀದಿಗಳಲ್ಲಿ ಇರುವಾಗ, ಮನೆಗಳಲ್ಲಿ ವಿಧ ವಿಧದ ಆಹಾರ ಪದಾರ್ಥಗಳನ್ನು ಮಾಡಿ, ನಮ್ಮ ಮಕ್ಕಳ ಜೊತೆ ಸ್ನೇಹಿತರ ಜೊತೆ, ಕುಟುಂಬ ಸದಸ್ಯರ ಜತೆ ಸಂತೋಷ ಹಂಚಿಕೊಳ್ಳು ಈ ಸಂದರ್ಭದಲ್ಲಿ ಲೋಕದ ವಿವಿಧ ಭಾಗಗಳಲ್ಲಿ ಪಲಸ್ಥೀನ್, ಬರ್ಮಾ ದಂತಹ ವಿವಿಧ ದೇಶಗಳಲ್ಲಿ ಮುಸ್ಲಿಮರು ಅನುಭವಿಸಿಕೊಂಡಿರುವ ಕಷ್ಟಗಳು, ದೌರ್ಜನ್ಯಗಳು, ಅತೀ ಹಿಂಸಾತ್ಮಕ ಕೃತ್ಯಗಳು ಸಾಮಾನ್ಯವಲ್ಲ, ಮುಸ್ಲಿಮರು ಎಂಬ ಏಕೈಕ ಕಾರಣಕ್ಕೆ ಮಯನ್ಮಾರ್ ಎಂಬ ನಾಡಿನಲ್ಲಿ ಬೌದ್ಧ ಧರ್ಮದ ನಾಗರಿಕರು ಮುಸ್ಲಿಮರನ್ನು ಚಿತ್ರ ಹಿಂಸೆ ನೀಡಿ ಅತೀ ಭಯಾನಕ ರೀತಿಯಲ್ಲಿ ಅನಾಗರಿಕ ರೂಪದಲ್ಲಿ ಸಾಮೂಹಿಕ ಹತ್ಯೆ ಮಾಡುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ವಾರ್ತಾ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗಿದೆ. ಕೇವಲ ಮುಸ್ಲಿಮರು ಮಯನ್ಮಾರ್ ಎಂಬ ದೇಶದಲ್ಲಿ ನಿಲ್ಲಬಾರದು ಎಂಬ ಏಕೈಕ ಕಾರಣದಿಂದ ಲೋಕದ ಮುಂದೆ ನಾವು ಶಾಂತಿಗಾಗಿ ಹೋರಾಡುವುದು, ಹಿಂಸೆಯನ್ನು ವಿರೋದಿಸುವವರಾಗಿದ್ದೇವೆ ಎಂದು ಕೂಗಿ ಹೇಳುವ ಆ ಕ್ರೂರ ಬೌದ್ಧರ ನಿಜವಾದ ಮುಖ ಲೋಕದ ಮುಂದೆ ಅನಾವರಣವಾಗಿದೆ. ಬೌದ್ಧರು ಯಾರು? ಅವರ ನಿಜವಾದ ಉದ್ದೇಶವೇನು? ಅವರ ಲಕ್ಷ್ಯವೇನು? ಎಂದು ಇದೀಗ ಲೋಕಕ್ಕೆ ಮನವರಿಕೆಯಾಗಿದೆ. ಯಾವತ್ತೂ ಆಶಾಂತಿಯಿಂದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಮೂಲಭೂತ ಸೌಕರ್ಯವೂ ಇಲ್ಲದ ಅಫ್ಘಾನ್ ಎಂಬ ದೇಶದಲ್ಲಿ ಶಾಂತಿಗಾಗಿ ಬಲಿಷ್ಠವಾದ ಅಮೇರಿಕಾ ಸೇರಿದಂತೆ ವಿವಿಧ ದೇಶಗಳು ಎಲ್ಲಾ ಆಯುಧಗಳನ್ನು ಉಪಯೋಗಿಸಿಕೊಂಡು ಅಕ್ರಮಿಸಿದರೂ ಕೂಡ ಶಾಂತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಲೋಕದ ವಿವಿಧ ಬುದ್ಧಿ ಜೀವಿಗಳು ಹೇಳಿದ ಒಂದಾಗಿದೆ ಶಾಂತಿಯನ್ನು ಯುದ್ಧದ ಮೂಲಕ ಪಡೆಯಲು ಸಾಧ್ಯವಿಲ್ಲ, ಉಗ್ರವಾದದಿಂದಲೋ ಅಶಾಂತಿಯಿಂದಲೋ ಇಲ್ಲಿ ಶಾಂತಿ ಪಡೆಯಲು ಸಾಧ್ಯವಿಲ್ಲ ಎಂದು ನೆಲ್ಯಾಡಿ ಕೇಂದ್ರ ಜುಮ್ಮಾ ಮಸೀದಿ ಖತೀರಾದ ಅಬೂ ಹನ್ನತ್ ಮಹಮ್ಮದ್ ಸಖಾಫಿ ಹೇಳಿದರು.
ಮುಸ್ಲಿಮರ ನಡುವೆ ಇರುವ ಅನೈಕ್ಯವೇ ಇಂತಹ ಘಟನೆಗಳು ಸಂಭವಿಸಲು ಕಾರಣ, ಮುಸ್ಲಿಮರು ನಡುವೆ ಭೀಕರತೆ, ಉಗ್ರವಾಧತ್ವ ಅಧಿಕವಾಗಿದೆ, ಇದರ ಲಾಭವನ್ನು ಇತರ ಧರ್ಮೀಯರು ಪಡೆದು ಮುಸ್ಲಿಮರಿಗೆ ತಿರುಗಿ ಬೀಳುವ ಅವಸ್ಥೆ ಎದುರಿಸುತ್ತಿದ್ದೇವೆ.
*"ವಹ್ತಸಿಮೂ ಭಿಹಬ್ಲಿಲ್ಲಾಃಹಿ ಜಮೀಹಾಃ"*
ಎಲ್ಲರೂ ಅಲ್ಲಾಹುವಿನ ತೌಹೀದಿನಲ್ಲಿ ಜೀವಿಸಿ, ಯಾರ ನಡುವೆ ಕೂಡ ಈ ವಿಷಯದಲ್ಲಿ ಭಿನ್ನತೆ ಉಂಟಾಗಬಾರದು. ಅಲ್ಲಾಹುವಿನ ತೌಹಿದ್ ಇದಾಗಿದೆ ನಿಜವಾದ ಇಸ್ಲಾಂ, ಇದನ್ನಾಗಿದೆ ಪೈಗಬಂರ್ (ಸ.ಅ) ನಮಗೆ ತೋರಿಸಿಕೊಟ್ಟಿದ್ದು. ನಿಮಗೆ ನೀಡಿದ್ದನ್ನು ನೀವು ಮುಷ್ಟಿ ಹಿಡಿಯಿರಿ,ಇದಾಗಿದೆ ಕುರ್ಆನ್ ಹೇಳಿ ಕೊಟ್ಟಿದ್ದು ಎಂದು ಈ ಸಂದರ್ಭ ಹೇಳಿದರು.
ನಂತರ ಮಾಡುನಾಡುತ್ತಾ ಭಾರತೀಯರಾದ ನಾವು ಹೆಚ್ಚು ಗೌರವ ಕೊಡುವ ಒಂದಾಗಿದೆ ಸುಪ್ರೀಂ ಕೋರ್ಟ್, ಆದರೆ ಜಾತ್ಯಾತೀತ ರಾಷ್ಟ್ರವಾದ ಪ್ರಜಾ ಪ್ರಬುತ್ವವಾದ ಈ ಭಾರತ ದೇಶದಲ್ಲಿ ಜೀವನ ನಡೆಸುವ ಸರ್ವ ಧರ್ಮಿಯರಿಗೂ ಅವರವರ ಮತ ಆಚರಣೆಗಳು, ಅವರವರ ಧಾರ್ಮಿಕ ವಿಧಿ ವಿಧಾನಗಳು ಅವರವರಿಗೆ ಆಚರಿಸುವ, ಎಲ್ಲಾ ಹಕ್ಕುಗಳು, ಎಲ್ಲಾ ಪೌರತ್ವವೂ, ಇಲ್ಲಿನ ಸಂವಿಧಾನ ಕಲ್ಪಿಸಿದೆ. ಇಲ್ಲಿನ ರಾಷ್ಟ್ರಪತಿ, ಸುಪ್ರೀಂ ಕೋರ್ಟ್, ಪಾರ್ಲಿಮೆಂಟ್ ಸಹಿತ ಎಲ್ಲರೂ ಸಮ್ಮತಿಸಿದ ನಿಯಮವಾಗಿದೆ. ಮುಸ್ಲಿಮರ ಶರೀಹತ್ ನಿಯಮಗಳಲ್ಲಿ ಒಂದಾದ ಮುತ್ತಲಾಕ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಖಂಡನೀಯ,ಶರೀಹತನ್ನು ದಿಕ್ಕರಿಸುವ ಯಾವುದೋ ಒಂದೆರಡು ಜನರ ಕೋರಿಕೆ ಮೇರೆಗೆ ಶರೀಹತ್ ನಿಯವನ್ನೇ ಬದಲಾವಣೆ ಮಾಡುವುದು ಮೂರ್ಖತನದ ಪರಮಾವದಿ, ಶರೀಹತ್ ನಿಯಮವನ್ನು ದಿಕ್ಕರಿಸುವ ಶೈತಾನುಗಳು ಎಲ್ಲಾ ಮನುಷ್ಯ ವರ್ಗದಲ್ಲೂ, ಎಲ್ಲಾ ಜಿನ್ನ್ ವರ್ಗದಲ್ಲೂ ಇವೆ. ಶರೀಹತ್ ನಿಯಮ ಸೇರಿದಂತೆ ಯಾವುದೇ ಧಾರ್ಮಿಕ ನಿಯಮಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ ಎಂದು ಮುಸ್ಲಿಮರ ಪವಿತ್ರ ಹಬ್ಬದಲ್ಲಿ ಒಂದಾದ ಬಲಿ ಪೆರ್ನಾಲ್ ಸಂದೇಶ ಬಾಷಣದಲ್ಲಿ ಹೇಳಿದರು.
ನಂತರ ಮಾತನಾಡಿದ ಅವರು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು ನಮ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಹೆಚ್ಚು ಗಮನ ಹರಿಸಬೇಕಾದ ಕಾಲಗಟ್ಟದಲ್ಲಿ ನಾವಿದ್ದೇವೆ. ಕಾಲೇಜಿಗೆ ಹೋಗುವ ಒಂದು ಬುರ್ಖಾ ಧಾರಿಣಿಯಾದ ಮುಸ್ಲಿಂ ವಿದ್ಯಾರ್ಥಿನಿ ಅನ್ಯ ಸಮುದಾಯದ ಒಬ್ಬ ವಿದ್ಯಾರ್ಥಿ ಜತೆ ಸಾರ್ವಜನಿಕ ಸೌಚಾಲಯದಲ್ಲಿ ಸಿಕ್ಕಿ ಬಿದ್ದು ಅನ್ಯ ಸಮುದಾಯದ ಜನರು ಅವರನ್ನು ವಿಡಿಯೋ ಚಿತ್ರೀಕರಣ ಮಾಡಿಸಿದ್ದು ಸಮುದಾಯದ ಗತಿಕೇಡು ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಸಮುದಾಯದ ಮುಸ್ಲಿಂ ಯುವತಿಯರನ್ನು ಅಲ್ಲಾಹು ರಕ್ಷಿಸಲಿ ಎಂದು ಹೇಳಿದರು .
ವರದಿ: ರಿಯಾ ನೆಲ್ಯಾಡಿ
Comments
Post a Comment