ದ.ಕ.ಜಿಲ್ಲಾ ಸುನ್ನೀ ಜಂಇಯ್ಯತುಲ್ ಉಲಮಾ ವತಿಯಿಂದ ಸೆಪ್ಟೆಂಬರ್ 9 ನೇ ತಾರೀಖಿನಂದು ಶನಿವಾರ ಪೂರ್ವಾಹ್ನ 10 ಗಂಟೆಗೆ ಮಂಗಳೂರು ಹಂಪನಕಟ್ಟೆ ಹೋಟೆಲ್ ಸೂರ್ಯ ದಲ್ಲಿ ನಡೆಯಲಿರುವ ತಲಾಖ್ ವಿವರಣಾ ಸಮಾವೇಶ ಮತ್ತು ಸ್ನೇಹ ಸಂವಾದ ಹಾಗೂ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಸೆಪ್ಟೆಂಬರ್ 14 ಗುರುವಾರ ಪೂರ್ವಾಹ್ನ ಮಂಗಳೂರು ಪುರ ಭವನದಲ್ಲಿ ಹಮ್ಮಿಕೊಂಡಿರುವ ತ್ರಿವಳಿ ತಲಾಖ್ ನ ಕುರಿತಾದ ವಿವರಣಾ ಸಮಾವೇಶ, ತಲಾಖ್ ಕುರಿತು ತಪ್ಪು ಕಲ್ಪನೆ ಇಟ್ಟುಕೊಂಡವರಿಗೆ ತಮ್ಮ ತಪ್ಪು ಕಲ್ಪನೆಗಳನ್ನು ದೂರ ಮಾಡಲಿರುವ ಒಂದು ಸುವರ್ಣಾವಕಾಶ ವಾಗಿದೆ.
*ಇಸ್ಲಾಂ ಧರ್ಮ ಅಲ್ಲಾಹು ನಿರ್ಮಿಸಿದ ಪ್ರಕೃತಿ ಧರ್ಮವಾಗಿದ್ದು ಇಸ್ಲಾಮಿನ ಪ್ರತಿಯೊಂದು ನಿಯಮಗಳು ಕೂಡ ಸೃಷ್ಟಿಕರ್ತ ಅಲ್ಲಾಹು ರೂಪಿಸಿರುವ ನಿಯಮಗಳಾಗಿವೆ.*
*ಇಸ್ಲಾಂ ಧರ್ಮದ ಬಗ್ಗೆ ಮತ್ತು ಇಸ್ಲಾಂ ಧರ್ಮದ ಇತಿಹಾಸದ ಬಗ್ಗೆ ಜ್ಞಾನವಿಲ್ಲದವರು ಇಸ್ಲಾಮನ್ನು ಇತರ ಸಂಸ್ಕೃತಿ ಗಳಂತೆ ಕಾಣುತ್ತಿರುವುದರಿಂದ ಮುಸ್ಲಿಮೇತರ ಸಮುದಾಯದವರಿಗೆ ಇಸ್ಲಾಮಿನ ಬಗ್ಗೆ ಹಲವಾರು ತಪ್ಪು ಕಲ್ಪನೆ ಗಳು ಮೂಡಲು ಕಾರಣವಾಗಿದೆ.*
*ಇಸ್ಲಾಂ ಧರ್ಮ ಒಂದು ತೆರೆದ ಪುಸ್ತಕವಾಗಿದ್ದು ಅದನ್ನು ಅಧ್ಯಯನ ನಡೆಸುವ ಯಾರೊಬ್ಬರಿಗೂ ಸತ್ಯ ದರ್ಶನವಾಗದೇ ಇರದು.*
*ಕರ್ನಾಟಕದ ಉಲಮಾ ನಾಯಕರು ತಲಾಖ್ ಬಗ್ಗೆ ಸಮಗ್ರ ವಿವರಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಕಾಲಿಕ ವಾಗಿದೆ.*
*ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರಿಂದ ಮಲಯಾಳಂ ಭಾಷೆಯಲ್ಲಿ ನಡೆಯಲಿರುವ ತಲಾಖ್ ಕುರಿತಾದ ಸೆಮಿನಾರ್ ಮತ್ತು ದ.ಕ.ಜಿಲ್ಲಾ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮುಹ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಅವರಿಂದ ಹಂಪನಕಟ್ಟೆ ಹೋಟೆಲ್ ಸೂರ್ಯದಲ್ಲಿ ಕನ್ನಡ ಭಾಷೆಯಲ್ಲಿ ನಡೆಯಲಿರುವ ಸೆಮಿನಾರ್ ಒಂದು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.*
*ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಸುನ್ನೀ ಸಾಹಿತ್ಯ ಮಂಡಳಿ ( ಸುಸಾಮ ) ದ.ಕ.ಜಿಲ್ಲಾ ಸುನ್ನೀ ಜಂಇಯ್ಯತುಲ್ ಉಲಮಾ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದು ಸುಸಾಮ ಅಧ್ಯಕ್ಷ ಅಬೂಶಝಾ ಅಬ್ದುರ್ರಝಾಖ್ ಅಲ್ ಖಾಸಿಮಿ ಮತ್ತು ಪ್ರಧಾನ ಕಾರ್ಯದರ್ಶಿ ಸ್ನೇಹಜೀವಿ ಖ್ಯಾತಿಯ ಹಾರಿಸ್ ಅಡ್ಕ ನೇತೃತ್ವದ ತಂಡ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿರುವುದು ನೂತನ ಸಂಘಟನೆಯ ಭಾವೀ ಯಶಸ್ಸಿನ ಶುಭ ಸೂಚನೆಯಾಗಿದೆ.*
*ಉಲಮಾ ದಿಗ್ಗಜರಾದ ಮಹ್ಮೂದುಲ್ ಫೈಝಿ ಓಲೆಮುಂಡೋವು,ಯು.ಕೆ.ಮುಹಮ್ಮದ್ ಸ ಅದಿ ವಳವೂರು,ಕೆ.ಎಂ.ಇಬ್ರಾಹಿಂ ಫೈಝಿ ಕನ್ಯಾನ, ಕೆ.ಎಂ.ಖಾಸಿಂ ಮದನಿ ಕರಾಯ,ಇಬ್ರಾಹಿಂ ಮದನಿ ಮಂಚಿ,ಎಸ್.ಪಿ.ಹಂಝ ಸಖಾಫಿ,ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು,ಆತೂರು ಸ ಅದ್ ಮುಸ್ಲಿಯಾರ್, ಕೆ.ಕೆ.ಎಂ.ಕಾಮಿಲ್ ಸಖಾಫಿ, ಸಿದ್ದೀಖ್ ಸಖಾಫಿ ಮೂಳೂರು,ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಸಹಿತ* *ಹಲವಾರು ಉಲಮಾಗಳು ಉಭಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.*
*ಪ್ರಸ್ತುತ ಕಾರ್ಯಕ್ರಮಗಳು ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.*
✍🏻 *ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*
🔴🔴🔴🔴🔴🔴🔴🔴🔴🔴🔴
Comments
Post a Comment