ತಾಜುಲ್ ಉಲಮಾರ ಹಾದಿಯಲ್ಲಿ, ಬಹುಮಾನ್ಯ ಕೂರ ತಂಙಳ್.!
ಸತ್ಯವನ್ನು ತೆರೆದು ಹೇಳುವುದರಲ್ಲಿ ಯಾರನ್ನೂ ಭಯ ಪಡದ ಓರ್ವ ಪ್ರಗಲ್ಭ ಆಲಿಂ ಮತ್ತು ಸಯ್ಯಿದ್ ಆಗಿದ್ದರು *ತಾಜುಲ್ ಉಲಮಾ, ಉಳ್ಳಾಲ ತಂಙಳ್*. ಇಂದು ಅವರ ಅದೇ ಪಾದವನ್ನು ಹಿಂಬಾಲಿಸಿ ಮುನ್ನಡೆಯುತ್ತಿರುವ ಓರ್ವ ಸೈಯ್ಯಿದ್ ಆಗಿದ್ದಾರೆ ಅವರ ಸುಪುತ್ರ ಬಹುಮಾನ್ಯ ಕೂರ ತಂಙಳ್. ಈದುಲ್ ಫಿತರ್ ಚಂದ್ರ ದರ್ಶನ ವಿಷಯದಲ್ಲಂತೂ ಅದು ಇನ್ನಷ್ಟು ಸ್ಪಷ್ಟವಾಗಿತ್ತು.
ಅಲ್ಲಾಹನನ್ನು ಭಯ ಪಡುವ ಆಲಿಂ, ಮನುಷ್ಯರಿಗೆ ಹೆದರಬೇಕಾಗಿಲ್ಲ. ತನ್ನ ನಿಲುವು ಸತ್ಯವಾಗಿದ್ದಲ್ಲಿ ಅದನ್ನು ತೆರೆದು ಹೇಳುವುದಕ್ಕೆ ಯಾರನ್ನೂ ಭಯಪಡದಿರುವುದು, ಇದು ನೈಜ ಆಲಿಂ ಗಳ ಲಕ್ಷಣವಾಗಿದೆ. ಅದನ್ನು ತನ್ನ ಜೀವನದಲ್ಲಿ ಅಳವಡಿಸುತ್ತಾ ಬಂದವರಾಗಿದ್ದಾರೆ ಬಹುಮಾನ್ಯ ಕೂರ ತಂಙಳ್.
ಮೊನ್ನೆ ಭಟ್ಕಳದಲ್ಲಿ ಚಂದ್ರ ದರ್ಶನ ವಾಯಿತು. ಅದನ್ನು ಸ್ವೀಕರಿಸಿದ ಕರಾವಳಿಯ ಖಾಝಿಗಳು ನಾಳೆ ಪೆರ್ನಾಳ್ ಎಂದು ಘೋಷಿಸಿದರು. ಆದರೆ, ಆ ವಾರ್ತೆಯಲ್ಲಿ ಕರಾವಳಿಯ ಮತ್ತೋರ್ವ ಖಾಝಿಯಾದ ಕೂರ ತಂಙಳ್ ಗೆ ವಿಶ್ವಾಸಬರಲಿಲ್ಲ. ಆ ಕಾರಣಕ್ಕೆ ಅವರು ಚಂದ್ರ ದರ್ಶನ ಕಚಿತವಾಗಿಲ್ಲ ಅಂತ ತೀರ್ಪು ಕೊಟ್ಟರು.
ಉಳಿದ ಖಾಝಿಗಳಿಗೆ ಬಂದ ವಿಶ್ವಾಸ ಕೂರ ತಂಙಳ್ ಗೆ ಯಾಕೆ ಬರಲಿಲ್ಲ, ಉಳಿದ ಖಾಝಿಗಳನ್ನಾದರೂ ಸ್ವೀಕರಿಸಿ ಇವರಿಗೆ ತೀರ್ಪು ಕೊಡಬಹುದಿತ್ತಲ್ವ ಎಂದು ಕೇಳುವವರಿದ್ದಾರೆ. ಅವರಿಗೆ ಬಂದ ವಿಶ್ವಾಸ ಇವರಿಗೆ ಬರಬೇಕೆಂದೂ, ಅಥವಾ, ಇನ್ನೊಬ್ಬರನ್ನು ಸ್ವೀಕರಿಸಿ ತೀರ್ಪು ಕೊಡಬೇಕೆಂಬ ನಿಬಂಧನೆಗಳೇನೂ ಮತ್ತೊಬ್ಬ ಖಾಝಿಗೆ ಇಲ್ಲ.
*ಉದಾಹರಣೆಗೆ; ಹೆಂಡತಿಯನ್ನು ಮುಟ್ಟಿದರೆ ಹನಫೀ ಮಝ್ಹಬ್ ನಲ್ಲಿ ಉಲೂಹ್ ಮುರಿಯುವುದಿಲ್ಲ, ಶಾಫಿ ಮಝ್ಹಬ್ ನಲ್ಲಿ ಉಳೂಹ್ ಮುರಿಯುತ್ತದೆ. ಹತ್ತು ಲಕ್ಷಕ್ಕೂ ಮಿಕ್ಕ ಹದೀಸ್ ಗಳ ಜ್ಞಾನವಿರುವ ಅಬೂ ಹನೀಫ ಇಮಾಮನ್ನು ಶಾಫಿ ಇಮಾಮ್ ಗೆ ಸ್ವೀಕರಿಸಿ ತೀರ್ಪು ಕೊಡಬಾರದೇ ಎಂದು ಕೇಳಬೇಕಾಗಿಲ್ಲ. ಅಥವಾ, ಲಕ್ಷಾಂತರ ಹದೀಸ್ ಗಳ ಜ್ಞಾನವಿರುವ ಶಾಫಿ ಇಮಾಮರನ್ನು ಸ್ವೀಕರಿಸಿ ಅಬೂ ಹನೀಫ ಇಮಾಮ್ ಗೆ ತೀರ್ಪು ಕೊಡಬಾರದೆ ಎಂದೂ ಕೇಳಬೇಕಾಗಿಲ್ಲ. ಈರ್ವರೂ ಮುಜದ್ದಿದ್ ಗಳು. ಹದೀಸ್ ಗಳನ್ನು ಸಂಶೋಧನೆ ಮಾಡಿ ಸ್ವಯಂ ತೀರ್ಪು ಕೊಡಲು ಅರ್ಹತೆ ಇರುವ ಪ್ರಗಲ್ಭರಾಗಿದ್ದಾರೆ. ಆದಕಾರಣ, ಒಬ್ಬರಿಗೆ ಇನ್ನೊಬ್ಬರ ತೀರ್ಪನ್ನು ನೋಡುವ ಅಗತ್ಯವಿಲ್ಲ. ಅದರಂತೆ, ಖಾಝಿಗಳು ಕೂಡಾ ಸ್ವಯಂ ನಿರ್ಣಯ ತೆಗೆದು ಕೊಳ್ಳಲು ಅರ್ಹರಾಗಿದ್ದಾರೆ.*
ಚಂದ್ರ ದರ್ಶನ ವಾಗಿದೆ ಎಂದು ಕಚಿತವಾದ ಖಾಝಿಗೆ ಪೆರ್ನಾಳ್ ಘೋಷಿಸುವುದು ಕಡ್ಡಾಯ. ಚಂದ್ರ ದರ್ಶನ ಕಚಿತವಾಗದ ಖಾಝಿಗೆ ನೋಂಬು ಹಿಡಿಯಲು ಆಜ್ಙಾಪಿಸುವುದು ಕಡ್ಡಾಯ. ಇದನ್ನು ವಿವಾದ ಮಾಡಬೇಕಾದ ಅಗತ್ಯವೇನೂ ಇಲ್ಲ.
ಚಂದ್ರ ದರ್ಶನ ವಿಷಯದಲ್ಲಿ ಕೂರ ತಂಙಳ್, ದಿಟ್ಟ ನಿರ್ಧಾರವನ್ನೇ ತೆಗೆದುಕೊಂಡರು. ನಿಜಕ್ಕೂ ತಂಙಳ್ ರ ಈ ನಿರ್ಧಾರ ಅಭಿನಂದನಾರ್ಹ. ಚಂದ್ರ ದರ್ಶನ ದ ಬಗ್ಗೆ ಕಚಿತವಾದ ದ.ಕ ದ ಎಲ್ಲಾ ಖಾಝಿಗಳೂ ನಾಳೆ ಪೆರ್ನಾಳ್ ಎಂದು ಕರೆ ಕೊಡುವಾಗ, ತಾನೇನಾದರು ನಾಳೆ ಪೆರ್ನಾಳ್ ಗೆ ಕರೆ ಕೊಡದಿದ್ದರೆ ಮರು ದಿನ ಅದು ಸಮುದಾಯದಲ್ಲಿ ಗೊಂದಲ ಸೃಷ್ಟಿಸಬಹುದು. ಮೊಹಲ್ಲಾಗಳಲ್ಲಿ ಗುಲ್ಮಾಲ್ ಗಳಿಗೆ ಕಾರಣವಾಗಬಹುದು ಎಂದೇನಾದರು ಹೆದರಿ ಕೂರ ತಂಙಳ್, ತನ್ನ ವಿಶ್ವಾಸಕ್ಕೆ ವಿರುದ್ಧವಾಗಿ ಪೆರ್ನಾಳ್ ಆಘೋಷಿಸಲು ಕರೆ ಕೊಟ್ಟಿದ್ದರೆ..! ಕೂರ ತಂಙಳ್ ಅಲ್ಲಾಹನ ಮುಂದೆ ಅದೆಂತಹ ಮಹಾ ಪಾಪಿಯಾಗಿರುತ್ತಿದ್ದರು.!
ತಂಙಳ್ ರನ್ನು ಬೈಹತ್ ಮಾಡಿದ ನೂರಾರು ಮೊಹಲ್ಲಾಗಳ ಸಾವಿರಾರು ಸತ್ಯ ವಿಶ್ವಾಸಿಗಳ ಒಂದು ದಿನದ ಕಡ್ಡಾಯ ಉಪವಾಸವನ್ನು ಇಲ್ಲದಾಗಿಸಿದ ಮಹಾ ಪಾಪ ಕೂರ ತಂಙಳ್ ರ ತಲೆ ಮೇಲಾಗುತ್ತಿತ್ತು. ಖಾಝಿಗಳು ಕೊಡುವ ತೀರ್ಪಿಗೆ ಖಾಝಿಗಳು ಹೊಣೆಯಾಗುತ್ತಾರೆಯೇ ಹೊರತು ಅವರನ್ನು ಅನುಸರಿಸುವವರಲ್ಲ. ಹಾಗಾಗಿ ತಂಙಳ್ ವಿವಾದ ಮಾಡುವವರಿಗೆ ಹೆದರಲಿಲ್ಲ.
ಹೌದು, ಅಲ್ಲಾಹನನ್ನು ಭಯ ಪಡುವವರಿಗೆ ಮನುಷ್ಯರಿಗೆ ಹೆದರುವ ಅಗತ್ಯವಿಲ್ಲ. ಮನುಷ್ಯರಿಗೆ ಹೆದರುವವರು ಅಲ್ಲಾಹನಿಗೆ ಭಯ ಪಡುವುದೂ ಇಲ್ಲ.
ಅಲ್ಲಾಹು ನಮ್ಮೆಲ್ಲರನ್ನು ಇಹ-ಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಅಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
Comments
Post a Comment