ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ತ್ರಿದಿನ ಮತ ಪ್ರಭಾಷಣ ಹಾಗೂ ಅಭಿನಂದನಾ ಸಂಗಮ ಕಾರ್ಯಕ್ರಮ ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ನಡೆಯಿತು.
ರಕ್ತದಾನದ ಬಗ್ಗೆ ಯುವಕರಿಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ದೃಷ್ಠಿಯಿಂದ Inspire ಬ್ಲಡ್ ಡೋನರ್ಸ್ ಸೆಲ್ ನ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಅಲ್ ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ನೆರವೇರಿಸಿದರು.
ತಲಪಾಡಿ ರೇಂಜ್ ಮಟ್ಟದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ಸೇವೆಗೈದ ಕೆ.ಹಸನಬ್ಬ ಹಾಜಿ , ಅಬ್ಬಾಸ್ ಹಾಜಿ ಪೆರಿಬೈಲ್, ಯು.ಬಿ.ಮೊಹಮ್ಮದ್ ಹಾಜಿ, ಅಬ್ಬಾಸ್ ಪೂಮಣ್ಣು, ಮೂಸ ಕುಂಞಿ ಕೆ.ಎಮ್, ಉಮ್ಮರ್ ಮಾಸ್ಟರ್, ಮುಹಮ್ಮದ್ ಪೂಮಣ್ಣು, ಇಸ್ಮಾಯಿಲ್ ಬಿ.ಎಚ್, ಅಬ್ದುಲ್ಲ, ಇಕ್ಬಾಲ್ ಕೆ.ಸಿ.ನಗರ, ಫಾರೂಕ್ ಕೆ.ಎಮ್, ಅಬ್ಬಾಸ್ ಹಾಜಿ, ಇಸ್ಮಾಯಿಲ್ ಹಾಜಿ ಕೊಪ್ಪಳ, ಅಬ್ದುರ್ರಝಾಕ್, ಅಹ್ಮದ್ ಕುಂಞಿ ಹಾಜಿ, ಸಿದ್ದೀಕ್.ಯು.ಪಿ, ಅಬೂಬಕ್ಕರ್ ಹಾಜಿ, ಮಜೀದ್ ಕಾಟಂಗರೆ, ಕೆ.ಬಿ.ಯಹ್ಯಾ ಮೊದಲಾದವರಿಗೆ ಅಭಿನಂದನೆ ಮಾಡಲಾಯಿತು.
ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ಮಾಡಿದರು, ಅಸ್ಸಯ್ಯಿದ್ ಜಮಲುಲೈಲಿ ತಂಙಳ್ ಕಾಜೂರು ದುಆ ನೇರವೇರಿಸಿದರು,ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹೀಂ ಝುಹ್ರಿ,ಉಪಾಧ್ಯಕ್ಷ ಮುಸ್ತಫಾ ಝುಹ್ರಿ, ಸಿ.ಟಿ.ಎಮ್. ಸಲೀಂ ಅಸ್ಸಖಾಫ್ ತಂಙಳ್, ಎಸ್.ಎಸ್.ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಕೋಶಾಧಿಕಾರಿ ಅಬ್ದುಲ್ ಹಮೀದ್, ಡಾ|ಅಬ್ದುಲ್ ಖಾದರ್ ಹಾಜಿ, INSPIRE ಬ್ಲಡ್ ಡೋನರ್ಸ್ ಸೆಲ್ ಚೇರಮೆನ್ ಅಬ್ದುಲ್ ಹಕೀಮ್ ಉಪಸ್ಥಿತರಿದ್ದರು.
ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ಕಾರ್ಯದರ್ಶಿ ಶಿಹಾಬುದ್ದೀನ್ ಧನ್ಯವಾದಗೈದರು
Comments
Post a Comment