ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿಯ ಮಹಾಸಭೆ
ಕಳೆದ ಸುಮಾರು 12 ವರ್ಷಗಳ ಹಿಂದೆ ಖ್ಯಾತ ವಾಗ್ಮಿಯೂ ಧೀರ ನೇತಾರರೂ ಆಗಿದ್ದ
ಮರ್ಹೂಂ ಟಿ.ಹೆಚ್ ಇಬ್ರಾಹಿಂ ಮದನಿ ಉಸ್ತಾದರ ಕನಸಿನ ಕೂಸಾಗಿದ್ದ ಅನಾಥ ಹಾಗೂ ನಿರ್ಗತಿಕ ವಿಧ್ಯಾಸಂಸ್ಥೆಯನ್ನು ಆರಂಭದಲ್ಲಿ 7 ಮಕ್ಕಳನ್ನು ಸೇರಿಸಿ ತಾಜುಲ್ ಉಲಮಾ ಉಳ್ಳಾಲ ತಂಙಲ್ ರವರ ದಿವ್ಯ ಸಾನಿಧ್ಯದಲ್ಲಿ ಆರಂಬಿಸಲಾಯಿತು. ಅಲ್ ಹಂದುಲಿಲ್ಲಾಹ್..
ಟಿ.ಎಚ್ ಉಸ್ತಾದರ ಮರಣಾನಂತರ ಸಂಸ್ಥೆಯು ತೀರಾ ಹಿಂದುಳಿಯುತ್ತಿರುವುದನ್ನು ಮನಗಂಡು ಊರಿನ ಹಾಗೂ ನೆರೆಯ 10 ಜನರು ಕಳೆದ 8 ವರ್ಷಗಳ ಹಿಂದೆ ರಿಯಾದಿನ ಒಂದು ಕಡೆ ಸೇರಿ ಅಲ್- ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಎಂಬ ಪುಟ್ಟ ಸಮಿತಿಯನ್ನು ರಚಿಸಿದರು.
ಸಮಿತಿಯು ಕಳೆದ 8 ವರ್ಷಗಳಿಂದ ಸೌದಿಯ ರಿಯಾದಿನಲ್ಲಿ ಕಾರ್ಯಾಚರಿಸುತ್ತಾ ಬಂದಿರುತ್ತದೆ
ಸದ್ರಿ ಸಮಿತಿಯ
ವಾರ್ಷಿಕ ಮಾಹಾ ಸಬೆಯು ಸಮಿತಿಯ ಹಾಲಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ ರಿಯಾದಿನ ಹೈಇಲ್ ಮಸ್ನ ಎಂಬಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು.
ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದೊಂದಿಗೆ ಆರಂಭಿಸಿದ ಸಭೆಯು
ಬಹು ಮಹ್ಮೂದ್ ಸಖಾಫಿ ಕೊಡಗುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಕಾರ್ಯಕ್ರಮವನ್ನು ಬಹು ಅಬ್ದುಲ್ ಕರೀಂ ಲತೀಫಿ ಬೇಂಗಿಲ ಉಧ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ಬಹು ಅಶ್ರಫ್ ಸಖಾಫಿ ಮಾಡವು ಮಾತಾಡಿ ಸ್ಥಾಪನೆಯ ಧ್ಯೇಯೋದ್ದೇಷಗಳನ್ನು ವಿವರಿಸುವುದರೊಂದಿಗೆ
ವಿಧ್ಯಾಭ್ಯಾಸ ಕ್ಷೇತ್ರದಲ್ಲಿ ಮುಸ್ಲಿಮರು ಇನ್ನಷ್ಟು ಸಂಸ್ಥೆಗಳನ್ನು ಸ್ಥಾಪಿಸಿ ಮುಂದಿನ ಪೀಳಿಗೆಯ ಅಭ್ಯುದಯಕ್ಕೆ ಶ್ರಮಿಸಬೇಕೆಂದೂ ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜದ ಉಲಮಾ ಉಮರಾಗಳು ಎಚ್ಚೆತ್ತುಕೊಳ್ಳಬೇಕೆಂದು
ಕರೆಯಿತ್ತರು. ಹಾಗೂ ಸ್ಥಾಪನೆಯು ನಡೆದು ಬಂದ ದಾರಿಯ ಬಗ್ಗೆ ವಿವರಿಸಿ ಮುಂದಿನ ಕಾರ್ಯ ಯೋಜನೆಗಳನ್ನು ಸಭೆಯ ಮುಂದಿಟ್ಟರು.
ಅಬ್ದುಲ್ ರಝಾಕ್ ಹಾಜಿಯವರು ಮಾತನಾಡಿ ನಾನು ಮೊಟ್ಟ ಮೊದಲ ಬಾರಿ ಮೂಡಡ್ಕ ಸ್ಥಾಪನೆಗೆ ಹೋದಾಗ ಅಲ್ಲಿಯ ಕಾರ್ಯ ಚಟುವಟಿಕೆಗಳನ್ನು ಕಣ್ಣಾರೆ ಕಂಡಿದ್ದು, ನಾನು ಸಾಧ್ಯವಾದಷ್ಟು ಏನಾದರೂ ಅಳಿಲು ಸೇವೆಯನ್ನು ರಿಯಾದ್ ಸಮಿತಿಯ ಮೂಲಕ ಮಾಡಲು ನನಗೆ ಪ್ರೇರಣೆಯಾಯಿತು ಎಂದರು. ಮುಂದುವರಿದ ಭಾಗವಾಗಿ ಹಿಂದಿನ
2 ವರ್ಷಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ರಿಯಾದ್ ಸಮಿತಿಯು ಸ್ಥಾಪನೆಗೆ ನೀಡಿದ ನೆರವು ಮತ್ತು ಕೈಗೊಂಡ ಕಾರ್ಯಕ್ರಮಗಳನ್ನು ಎಲ್ಲಾ ಕಾರ್ಯಕರ್ತರಿಗೆ ವಿವರಿಸುವುದರ ಜೊತೆಗೆ ನೀವೆಲ್ಲರೂ ಕೂಡಾ ಊರಿಗೆ ಹೋದರೆ ನಿಶ್ಚಿತವಾಗಿಯೂ ಸ್ಥಾಪನೆಗೆ ಒಮ್ಮೆ ಭೇಟಿ ನೀಡಬೇಕೆಂದು ಹೇಳಿದರು.
ಬಳಿಕ ಸಮಿತಿಯ ಜೊತೆ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ಮುರ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ನಂತರ ಹಳೆಯ ಸಮಿತಿ ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು: ಡಿ.ಪಿ ಯೂಸೂಫ್ ಸಖಾಫಿ ಬೈತಾರ್
ಅಧ್ಯಕ್ಷರು: ಅಬ್ದುಲ್ ರಝಾಕ್ ಹಾಜಿ ಉಜಿರೆ.
ಪ್ರಧಾನ ಕಾರ್ಯದರ್ಶಿ: ಇಬ್ರಾಹಿಂ ಬೇಂಗಿಲ.
ಕೋಶಾಧಿಕಾರಿ: ಕಾಸಿಂ ಹಾಜಿ ಕನರಾಜೆ.
ಉಪಾಧ್ಯಕ್ಷರುಗಳು:-
ಯೂಸುಫ್ ಹಾಜಿ ಕಳಂಜಿಬೈಲ್,
ಅಬ್ದುಲ್ ಖಾದರ್ ಮಠ,
ಕೆ.ಪಿ ರಶೀದ್ ಹಾಜಿ ಕಳಂಜಿಬೈಲ್,
ಹೈದರ್ ಹಾಜಿ ಸರಳಿಕಟ್ಟೆ.
ಜೊತೆ ಕಾರ್ಯದರ್ಶಿಗಳು:-
ಇಬ್ರಾಹಿಂ ಮುರ,
ಅಬ್ಬಾಸ್ ಮಾಣಿ,
ಹಬೀಬುಲ್ಲಾಹ್
ಟಿ.ಹೆಚ್.
ಸಂಘಟನಾ ಕಾರ್ಯದರ್ಶಿ:-
ಹನೀಪ್ ಹಾಜಿ ಬೆಲ್ಲಾರೆ,
ಸಲೀಂ ಕನ್ಯಾಡಿ,
ಸಂಚಾಲಕರು:-
ಅಬ್ದುಲ್ ರಝಾಕ್ ಮಾಚಾರ್.
ಸಲಹೆಗಾರರು:-
ಮಹ್ಮೂದ್ ಸಖಾಫಿ ಕೊಡಗು,
ಇಸ್ಮಾಯಿಲ್ ಜೋಗಿಬೆಟ್ಟು
ಇಬ್ರಾಹಿಂ ಕುಂತೂರು
ಕಾರ್ಯಕಾರಿ ಸದಸ್ಯರಾಗಿ:-
ಯೂಸುಪ್ ಕೊಲ್ಪೆ,
ದಾವೂದ್ ಮಡಿಕೇರಿ,
ಅಬ್ದುಲ್ ಕರೀಂ ಮಡಿಕೇರಿ, ಹನೀಪ್ ಕೆಮ್ಮಾರ,
ಇಬ್ರಾಹಿಂ ಮಾಣಿ,
ದಾವೂದ್ ಕಜೆಮಾರ್
ಬಶೀರ್ ಮೂರುಗೋಳಿ,
ಶೇಕಬ್ಬ ಕರಾಯ,
ಅಬ್ದುರಹ್ಮಾನ್ ಜೋಗಿಬೆಟ್ಟು,
ರಝಾಕ್ ಕಾಶಿಬೆಟ್ಟು,
ರಿಯಾಝ್ ಮೂಲೂರು,
ರಝಾಕ್ ಬಾರ್ಯ,
ಅಬ್ದುಲ್ ಹಮೀದ್ ಮಠ,
ರಫೀಕ್ ಸಅದಿ ಬೆದ್ರಡಿ ಕಳಂಜಿಬೈಲ್,
ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಸಖಾಫಿ ಖಿರಅತ್ ಪಠಿಸಿ, ಇಬ್ರಾಹೀಮ್ ಬೇಂಗಿಲ ಸ್ವಾಗತಿಸಿದರು. ಸಲೀಂ ಕನ್ಯಾಡಿ ನಿರೂಪಿಸಿ
ಇಬ್ರಾಹೀಮ್ ಮುರ ಕೃತಜ್ಞತೆಯನ್ನು ಸಲ್ಲಿಸಿದರು
ಈ ಸಂದರ್ಭ ನಶೀಮ್ ಉಸ್ತಾದ್ ಕೊಡಗು, ಅಬ್ದುಲ್ಲ ಮದನಿ ತೆಂಕಕಾರಂದೂರು, ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರು ಹನೀಫ್ ಬೆಳ್ಳಾರೆ, ಅಲಿಫ್ ಇಂಟರ್ನೇಶನಲ್ ಸ್ಕೂಲ್ ಶಿಫಾ ಪ್ರಿನ್ಸಿಪಾಲ್ ಮುಸ್ತಾಫ ಕೇರಳ ಮೊದಲಾದವರು ಉಪಸ್ಥಿತರಿದ್ದರು
Comments
Post a Comment