Skip to main content

ಐತಿಹಾಸಿಕ ಉಲಮಾ ಸಂಗಮ ಯಶಸ್ವಿಗೊಳಿಸಲೇ ಬೇಕು ಯಾತಕ್ಕಾಗಿ.. ✍ *KKM ಕಾಮಿಲ್ ಸಖಾಫಿ*

ಉಲಮಾಗಳು ಪ್ರವಾದಿಗಳ ಉತ್ತರಾಧಿಕಾರಿಗಳು.ಲಕ್ಷಾಂತರ ಪ್ರವಾದಿಗಳು ಪವಿತ್ರ ದೀನಿನ ಪ್ರಚಾರಕರಾಗಿ ಬಂದಿದ್ದರಾದರೂ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು  ಅಲೈಹಿವಸಲ್ಲಮರ  ಆಗಮನದೊಂದಿಗೆ ಪ್ರವಾದಿಗಳ ಶೃಂಖಲೆಗೆ ಕೊನೆಗೊಂಡಿತ್ತು.
ನಂತರ ಅತ್ಯಂತ ಜವಾಬ್ದಾರಿ ಯುತ ಮತ್ತು ಅಷ್ಟೇ ತ್ರಾಸದಾಯಕ  ಹಾಗೂ ತ್ಯಾಗಭರಿತ ಪ್ರಭೋದನಾ ಪ್ರಚಾರ  ಕಾರ್ಯವನ್ನು  ಹೊತ್ತುಕೊಂಡವರೇ ಉಲಮಾಗಳು.

ಉಲಮಾಗಳ ಜವಾಬ್ದಾರಿ  ಸಣ್ಣದಲ್ಲ, *ಉಲಮಾಗಳು*  ಕೇವಲ ವೇತನ ಆಧರಿತ ವೃತ್ತಿ ಮಾಡಿದವರಲ್ಲ.
ನಮ್ಮನ್ನು ಮುನ್ನೆಡೆಸಿದ /ಮುನ್ನೆಡಸುತ್ತಿರುವ  ಉಲಮಾಗಳು ರಾತ್ರಿ ಹಗಲೆನ್ನದೆ ದೀನೀ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯಚರಿಸಿದ್ದರಿಂದಲೇ ಇಂದಿಗೂ ಇಸ್ಲಾಂ/ಸುನ್ನತ್  ಜಮಾತ್ ತಲೆಎತ್ತಿ  ನಿಂತಿದೆ.
ನೂತನವಾದ/ಭೀಕರವಾದ/ಕೋಮುವಾದಗಳ  ಅಲೆಗಳಲ್ಲಿ ಸಿಲುಕಿ ಮುಸ್ಲಿಂ ಯುವಕರು ಕೊಚ್ಚಿ ಹೋಗುತ್ತಿರುವ ಸಂಧಿಗ್ದಘಟ್ಟಗಳಲ್ಲಿ ನಮ್ಮ *ಉಲಮಾಗಳು* ಕ್ಷಿಪ್ರಗತಿಯಲ್ಲಿ ಕಾರ್ಯಚರಿಸಿದ್ದರಿಂದಲೇ ಸಮಾಜದಲ್ಲಿ ಸಮಗ್ರ ಸುದಾರಣೆಯಾಯಿತು.

ಇದೀಗ ಮತ್ತೊಮ್ಮೆ ಕೋಮುವಾದ ತನ್ನ ಹೆಡೆಯನ್ನು  ಬಿಚ್ಚಿದೆ.
ಯುವಕರ ಬ್ರೈನ್ ವಾಶ್ ಮಾಡಲಾಗುತ್ತಿದೆ.
ಕೋಮುವಾದ ಭಯೋತ್ಪಾದನೆಯಾಗಿ ಹಸಿರಕ್ತ ಕುಡಿಯಲು ಹಪಿಹಪಿಸುತ್ತಿದೆ.
ಅತಿರೇಕ, ಅವಿವೇಕ, ಕ್ಷಣಿಕ ಉದ್ವಿಗ್ನತೆ,  ಭಾವೋದ್ವೇಗ ಇದ್ಯಾವುದೂ ಸಮಸ್ಯೆಗೆ  ಪರಿಹಾರವಲ್ಲ.

ಅಪಹಾಸ್ಯ, ನಿಂದನೆ, ಪರಿಹಾಸ್ಯ ಸಮಸ್ಯೆಯನ್ನು ಜಟಿಲಗೊಳಿಸುತ್ತದೆಯೇ ವಿನಹ  ನಂದಿಸುವ ವಿಧಾನವಲ್ಲ.
ಯುವಕರನ್ನು ,ಮಹಲ್ಲ್ ಗಳನ್ನು ಆಡಳಿತ ಸಮಿತಿಗಳನ್ನು ಹಾಗೂ ಸಮುದಾಯದ ಪ್ರತಿಯೊಬ್ಬರನ್ನು ಪ್ರಭುದ್ದಗೊಳಿಸುವ ನಲ್ಮೆಯ ದಾರಿಗೆ ಕರೆತರುವ ಮಹತ್ತರವಾದ ಜವಾಬ್ದಾರಿ ಉಲಮಾಗಳ ಮೇಲಿದೆ.

ಪಕ್ವತೆ ಹೊಂದಿದ ಕೋಮುವಾದ ವಿಷಬೀಜ ನಂಟು ಅಂಟದ ಕಾರ್ಯಗಳನ್ನು ದೂರದೃಷ್ಟಿಯಿಂದ ಸಮೀಪಿಸಿ ಪದ್ದತಿ ಆವಿಷ್ಕರಿಸುವ ಯುವ ತಲೆಮಾರೊಂದನ್ನು ಸೃಷ್ಟಿಸುವ ಅನಿವಾರ್ಯತೆ ಇದೆ.

ಜವಾಬ್ದರಿಯುತ ಸ್ಥಾನದಲ್ಲಿರುವ  ಉಲಮಾಗಳಿಂದ ಮಾತ್ರ ಸಮಾಜ ಸುದಾರಣೆ ಸಾಧ್ಯ.
ಸಮುದಾಯದ ನಾಡಿಮಿಡಿತ  ಅರಿತು  ಕಾರ್ಯಚರಿಸುವ  ಅಗತ್ಯ  ಉಲಮಾಗಳ ಮೇಲಿದೆ.

ಕೂರತಂಙಳ್,ಬೇಕಲ ಉಸ್ತಾದ್,ಮಂಜನಾಡಿ ಉಸ್ತಾದ್,ಮಾಣಿ ಉಸ್ತಾದ್ ರಂತಹ ಘಟಾನುಘಟಿ ಉಲಮಾಗಳ ನೇತೃತ್ವದಲ್ಲಿ ನಡೆಯುವ ಬೃಹತ್ ಉಲಮಾ ಸಂಗಮದಲ್ಲಿ ಸುಲ್ತಾನುಲ್  ಉಲಮಾ,ಖಲೀಲ್ ತಂಙಳ್, ಪೇರೋಡು ಉಸ್ತಾದ್, ಕೂಟಂಬಾರ ದಾರಿಮಿ ಮುಂತಾದ ದಿಗ್ಗಜ ಉಲಮಾಗಳ ಭೋಧನೆಗಳು ನಡೆಯಲಿದೆ.

*ಇನ್ಶಾಅಲ್ಲಾ SEDC ಕಾರ್ಯವ್ಯಾಪ್ತಿಯಲ್ಲಿ ಬರುವ ಸಾವಿರಕ್ಕಿಂತಲೂ ಅಧಿಕ ಉಸ್ತಾದರುಗಳು ಸೇವೆಯಲ್ಲಿದ್ದಾರೆ. ನಾಡಿದು ಅಕ್ಟೋಬರ್ 8,9,10 ದಿನಾಂಕಗಳಲ್ಲಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಬೃಹತ್ ಉಲಮಾ ಸಂಗಮ ನಡೆಯಲಿದೆ.*

ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಜಿಲ್ಲೆ,ತಾಲೂಕು,ಹಾಗೂ ಝೋನಲ್ ಸಮಿತಿಗಳನ್ನು ರಚಿಸಲಾಗಿದೆ.
ಇದರ ಅಭಿಯಾನ ಕಾರ್ಯಾವೂ ನಡೆಯು ತ್ತಿದೆ.

ಝೋನಲ್ ವ್ಯಾಪ್ತಿಗೆ  ಬರುವ  ರೇಂಜ್ ನ ಮದರಸ  ಮಸೀದಿ ಉಸ್ತಾದರುಗಳಲ್ಲದೆ ಆಯಾ ಊರಿನಲ್ಲಿರುವ  ಉಸ್ತಾದರುಗಳು ಉಲಮಾ ಸಂಗಮದಲ್ಲಿ ಭಾಗವಹಿಸಿ ಸಹಕರಿಸಿ  ವಿಜಯಗೊಳಿಸಬೇಕಾಗಿರುವುದು ಕಡ್ಡಾಯಯೆಂಬುದನ್ನು ನೆನಪಿಸುತ್ತಾ.....

*ಉಲಮಾ ಕಾನ್ಫ್ರೆನ್ಸ್ ನಲ್ಲಿ ತಮ್ಮ  ಉಪಸ್ಥಿತಿಯು  ಕಡ್ಡಾಯವಾಗಿರುವುದರಿಂದ ಅದರ ಸ್ಪಷ್ಟ ಮಾಹಿತಿಗಾಗಿ ಝೋನಲ್ ಸಮಿತಿಯ  ಕಾರ್ಯದರ್ಶಿಗಳನ್ನು ಸಂಪರ್ಕಿಸಿರಿ ಅಥವಾ ನೀವು ವಾಸಿಸುವ ಪ್ರದೇಶಗಳಲ್ಲಿ ಸಮಿತಿ ರಚನೆಯಾಗದೆ  ಇದ್ದಲ್ಲಿ  ಉಲಮಾ ಸಂಗಮ ದಿನದಂದು ರಿಜಸ್ಟ್ರೇಶನ್ ಸೌಕರ್ಯ ಮಾಡಿದ್ದರೂ ಅಂದಿನ ಸಮಯದ ಅಭಾವ ಮತ್ತು ಬ್ಯುಝಿ ಇರಬಹುದೆಂಬ ನಿಟ್ಟಿನಲ್ಲಿ ಸುಲಭ ಸೌಕರ್ಯಕ್ಕೆ ಬೇಕಾಗಿ SEDC ಪಡೀಲ್ ನಲ್ಲಿರುವ  ಇಲ್ಮ್  ಸೆಂಟರ್ ನಿಮಗಾಗಿ ಸದಾ ಸಮಯ ಬಾಗಿಲು ತೆರೆದಿದೆ.ಅಲ್ಲಿ ನಿಮ್ಮ  ಹೆಸರುಗಳನ್ನು ನೊಂದಾಯಿಸತಕ್ಕದ್ದು.*

ನನ್ನ ಪ್ರೀತಿಯ ಉಸ್ತಾದರುಗಳು ಉಲಮಾ ಸಂಗಮ ನಮ್ಮ ಸಂಗಮವಾಗಿದ್ದು ಅದರ ಸಂಪೂರ್ಣ ವಿಜಯ ನಮ್ಮ ಕೈಯಲ್ಲಾಗಿದೆ.
ತಮ್ಮ ಉಪಸ್ಥಿತಿ ಕಡ್ಡಾಯವೆಂಬುದನ್ನು ಉಸ್ತಾದರುಗಳನ್ನು ಪದೇ ಪದೇ  ನೆನಪಿಸುವುದು ಅದಬ್ ಗೆ ವಿರುದ್ದವೆಂದು ಬಗೆದು ಎಲ್ಲರನ್ನು ಮತ್ತೊಮ್ಮೆ ಮಗದೊಮ್ಮೆ ಸ್ವಾಗತಿಸುತ್ತೇನೆ.

*ಅಕ್ಟೋಬರ್ ದಿನಾಂಕ 8,9,10*
*@ ಉಪ್ಪಿನಂಗಡಿ*

ಸಂಪರ್ಕಿಸಬೇಕಾದ ನಂಬರುಗಳು:
*SEDC 8242423340*

*9844996383*

*7899953058*

(ಹೈದರ್ ಮದನಿ)

*9901892477*
(ಹಾರೀಸ್ SEDC)

✍ *KKM ಕಾಮಿಲ್ ಸಖಾಫಿ*
(ಅಧ್ಯಕ್ಷರು SEDC ಕರ್ನಾಟಕ)
    (Mob:  9448502839)

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.