Skip to main content

ತೆಕ್ಕಾರು ಜಮಾಅತಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ GFT ವತಿಯಿಂದ ಸನ್ಮಾನ


ತೆಕ್ಕಾರು ಜಮಾಅತಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು GFT ವತಿಯಿಂದ ಸನ್ಮಾನಿಸಲಾಯಿತು

ಗಲ್ಪ್ ಪ್ರೆಂಡ್ಸ್ ತೆಕ್ಕಾರು ವತಿಯಿಂದ ಕಳೆದ ಬಾರಿ ನಡೆದ SSLC ಪರೀಕ್ಷೆಯಲ್ಲಿ ಮತ್ತು ತೆಕ್ಕಾರು ಹಿದಾಯತುಲ್ ಇಸ್ಲಾಂ ಮದರಸದ ಹತ್ತನೇ ಕ್ಲಾಸಿನಲ್ಲಿ ಉತ್ತಮ ಅಂಕವನ್ನು ಪಡೆದಿರುವ ಫಾತಿಮತ್ ಪರ್ಹಾನಳಿಗೆ GFTವತಿಯಿಂದ ಚಿನ್ನದ ಉಂಗುರವನ್ನು ಹಾಗೂ
PUCಯ ಸಯನ್ಸ್ ವಿಭಾಗದಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಯಾದ ಮುಹಮ್ಮದ್ ಸಿನಾನ್.ದರ್ಕಾಸ್ ನಗದು ಬಹುಮಾನವನ್ನು ತೆಕ್ಕಾರು SYS ನೇತ್ವತ್ರದಲ್ಲಿ ನಡೆದ ಜಲಾಲಿಯ ಧಿಕ್ರ್ ಮಜ್ಲಿಸ್ ನಲ್ಲಿ ಸಯ್ಯದ್ ಮುಖ್ತಾರ್‍ ತಂಙಳ್ ರವರ ಮೂಲಕ ನೀಡಿ ವಿದ್ಯಾರ್ಥಿಗಳನ್ನು ಹಾಗೂ ಖತೀಬ್ ಉಸ್ತಾದರಾ‍ದ ಅಬ್ಬಾಸ್ ಮದನಿ ಬಂಡಾಡ್.ರವರನ್ನು ಶಾಲು ಹೊದಿಸಿ ನಗದು ಬಹುಮಾನವನ್ನು ನೀಡಿ ಅಬಿನಂದಿಸಲಾಯಿತು



ಪ್ರಸ್ತುತ ಕಾರ್ಯಕ್ರಮವನ್ನು ತೆಕ್ಕಾರು ಜಮಾಅತ್ ಅದ್ಯಕ್ಷರಾದ M.Tಆದಂ ವಹಿಸಿದ್ದರು 
ಜಲಾಲಿಯ ದ್ಝಿಕ್ರ್ ಮಜ್ಲಿಸ್ ವೇದಿಕೆಯಲ್ಲಿ ಜಮಾಅತ್ ಖತೀಬ್ ಉಸ್ತಾದರಾದ ಅಬ್ಬಾಸ್ ಮದನಿ ಹಾಗೂ ಮಸ್ಊದ್ ಸ‍ಅದಿ ಪದ್ಮುಂಜ ಸುಲೈಮಾನ್ ಫಾಲಿಲಿ ಅಬೂಬಕ್ಕರ್‍ ಸಿದ್ದೀಕ್ ಸಅದಿ HM ತೆಕ್ಕಾರು ಹಾಗೂ ಜಮಾಅತಿನ ಇತರ ಎಲ್ಲಾ ಉಸ್ತಾದರು ಜಮಾಅತಿನ  ಸಂಘ ಸಂಸ್ಥೆಗಳ ನಾಯಕರು ಊರ ಹಾಗೂ ಪರಊರಿನ ನಾಗರಿಕರು ಬ್ರಹತ್ ಸಂಖ್ಯೆಯಲ್ಲಿ ಸೇರಿದ ಜಲಾಲಿಯ ಝಿಕ್ರ್ ಮಜ್ಲಿಸ್ ನೇತ್ವತ್ರವನ್ನು ವಹಿಸಿದ ಬಹು ಸಯ್ಯದ್ ಮುಖ್ತಾರ್ ತಂಙಳ್‍ ರವರು ತೆಕ್ಕಾರು ಜಮಾಅತಿನ ಪ್ರವಾಸಿ ಯುವಕರ ವತಿಯಿಂದ ಮಾಡುತ್ತಿರುವ ಸೇವೆಗಳನ್ನು  ಪ್ರಸಂಶಿಸುತ್ತಾ ಜಮಾಅತಿನ ಎಲ್ಲಾ ಯುವಕರು ಪರಸ್ಪರ ಐಕ್ಯದೊಂದಿಗೆ ಸುನ್ನತ್ ಜಮಾಅತಿನ ಆಶಯ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು 
ಭೂಲೋಕದಲ್ಲಿ
ಸೀಮಿತ ದಿನಗಳಿಗೆ ಲಭಿಸುವ ಪ್ರಸಂಸೆಯನ್ನು ಬಯಸದೆ ಪರಲೋದಲ್ಲಿ ವಿಜಯಿಯಾಗಬೇಕೆಂಬ ನಿಯ್ಯತ್ ಮನಸ್ಸಿನಲ್ಲಿ ಇಟ್ಟು ನಡೆಸುವ ಜೀವ ಕಾರುಣ್ಯ ಚಟುವಟಿಯಾಗಬೇಕೆಂಬ ಸಲಹೆಗಳನ್ನು ನೀಡಿ ದುಆ ಮಾಡಿ ಹಾರೈಸಿಸರು
ಜಲಾಲಿಯ ದ್ಝಿಕ್ರ್ ಮಜ್ಲಿಸಿನಲ್ಲಿ ಬಾಗವಹಿದ ಉಸ್ತಾದರಿಗೂ ಅತಿಥಿಗಳಿಗೂ  ತೆಕ್ಕಾರು SYS ಬ್ರಾಂಚ್ ಅದ್ಯಕ್ಷರಾದ ಉಸ್ಮಾನ್ ಸಅದಿಯವರು ಸ‌್ವಾಗತವನ್ನು ಹೇಳಿ ಗಲ್ಪ್ ಪ್ರೆಂಡ್ಸ್ ತೆಕ್ಕಾರು ವತಿಯಿಂದ ನಡಸಿಕೊಂಡು ಬರುವ ಜೀವಕಾರುಣ್ಯ ಕಾರ್ಯಕ್ರಮಗಳು ನಿರಂರಂತರವಾಗಿ ಮುಂದುವರಿಸಲು ಅಲ್ಲಾಹು ಅನುಗ್ರಹಿಸಲೀ ದುಆ ಮೂಲಕ ಹಾರೈಸಿ ಸೇರಿ ಸಹಕರಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು

ವರದಿ:SYS ತೆಕ್ಕಾರ್

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.