ಆ ಭಾಗ್ಯವಂತರು ನಮ್ಮನ್ನಗಲಿ ಇಂದಿಗೆ 6 ವರ್ಷ !
ಪ್ರತಿವರ್ಷ ರಮಳಾನ್ ಒಂದು ಆಯಿತೆಂದರೆ ಅವರು ಮೊದಲ ರಾತ್ರಿಯೇ ಖರ್ಜುರದ ಕಟ್ಟನ್ನು ಹಿಡಿದು ಸಮೀಪದ ಮಸೀದಿಯ ಉಸ್ತಾದರುಗಳಿಗೆಲ್ಲಾ ಅದನ್ನು ವಿತರಣೆ ಮಾಡುತ್ತಿದ್ದರು.
ಹಬೀಬ್ ﷺ ರ ಕುಟುಂಬಸ್ಥರಾದ ಸಾದತ್ ಗಳನ್ನು, ಧಾರ್ಮಿಕ ಉಲಮಾಗಳನ್ನು, ಮುತಅಲ್ಲಿಂಗಳನ್ನು, ಕಂಡರೆ ಅವರಿಗೆ ತುಂಬಾ ಪ್ರೀತಿ ಮತ್ತು ಆರ್ಥಿಕ ನೆರವು ನೀಡಿವುದಲ್ಲದೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಆಹಾರ ನೀಡುವುದರಲ್ಲಿ ಅವರು ಎತ್ತಿದ ಕೈ.
ನಿತ್ಯ ನಿರಂತರ ಮಸೀದಿಯೊಂದಿಗೆ ಸಂಪರ್ಕ ಮತ್ತು ಜಮಾತ್ ಗಳಲ್ಲಿ ಮೊದಲ ಸ್ವಫ್ಫ್ ನಲ್ಲೇ ಅವರ ಉಪಸ್ಥಿತಿ.
ಸುನ್ನತ್ ಜಮಾತ್ ವಿರೋಧಿಗಳನ್ನು ತನ್ನ ಗಟ್ಟಿ ಧ್ವನಿಯಲ್ಲಿ ಗದರಿಸುವ ಮನೋಧಾರ್ಡ್ಯತೆ.
ಇಂತಹ ಹತ್ತು ಹಲವಾರು ಉತ್ತಮ ಕಾರ್ಯ ತನ್ನ ಜೀವಿತಾವಧಿಯಲ್ಲಿ ಮಾಡಲು ಭಾಗ್ಯ ದೊರೆತ ಒಬ್ಬ ಮಹಾನ್ ವ್ಯಕ್ತಿ........
ಅವರೇ *ಮರಹೂಂ ಯು.ಟಿ ಇಲ್ಯಾಸ್ ಹಾಜಿ ಮುಕ್ಕಚ್ಚೇರಿ*
ಈ ಎಲ್ಲಾ ಒಳಿತುಗಳ ಕಾರಣದಿಂದಲೇ ರಮಳಾನ್ 27 ರ ಶುಕ್ರವಾರ ಲೈಲತುಲ್ ಖದ್ರ್ ದಿನ ಅಪಾರ ಪುಣ್ಯ ತುಂಬಿದ ರಾತ್ರಿ ಅವರು ಮರಣ ಹೊಂದುವ ಭಾಗ್ಯ ಪಡೆದುಕೊಂಡರು.
ಅವರು ನಮ್ಮನ್ನಗಲಿ ಇಂದಿಗೆ ಆರು ವರ್ಷ !
ಅವರಿಗಾಗಿ ನಾವು ದುಆ ಮಾಡಬೇಕಾಗಿದೆ.
ಅಲ್ಲಾಹನು ಅವರ ಸ್ಥಾನವನ್ನು ಉನ್ನತಿಗೇರಿಸಲಿ - ಆಮೀನ್
SSF Ombathukere unit
✍️Mustafa Master UAE

Comments
Post a Comment