ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ಪ್ರಥಮ ಕಾರ್ಯಕಾರಿ ಸಮಿತಿ ವಿಶೇಷ ಸಭೆ ಉಳ್ಳಾಲ ತೊಕ್ಕೋಟ್ಟಿನ ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಕೌನ್ಸಿಲ್ ಅಧ್ಯಕ್ಷರಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮರ್ಕಝ್ ಸಮ್ಮೇಳನ ಮಂಗಳೂರು ತಾಲೂಕು ಪ್ರಚಾರ ಸಮಿತಿ ಕನ್ವೀನರ್ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಧ್ಯಕ್ಷತಾ ಭಾಷಣ ಮಾಡಿ ಮರ್ಕಝ್ ಸಮ್ಮೇಳನ ಯಶಸ್ವಿಗಾಗಿ ಹಮ್ಮಿಕೊಂಡ ಮೊಹಲ್ಲಾ ಪ್ರಚಾರ ಸಭೆಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಇದರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಲು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಮಂಗಳೂರು ತಾಲೂಕನ್ನು ಉಳ್ಳಾಲ, ಮಂಜನಾಡಿ, ದೇರಳಕಟ್ಟೆ, ಕೋಣಾಜೆ, ಮಂಗಳೂರು, ಕ್ರಷ್ಣಾಪುರ ಎಂಬ ಆರು ರೇಂಜ್ (ವ್ಯಾಪ್ತಿ) ಗಳನ್ನಾಗಿ ವಿಂಗಡಿಸಲಾಗಿದ್ದು, ಸದ್ಯಕ್ಕೆ ಆರು ರೇಂಜುಗಳಿಂದ 46 ಮೊಹಲ್ಲಾಗಳ ಹೆಸರು ಸೂಚಿಸಲಾಗಿದ್ದು, ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಮೊಹಲ್ಲಾ ನಾಯಕರ ಸಮ್ಮತಿಯೊಂದಿಗೆ ದಿನಾಂಕ ಪ್ರಕಟಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ತಾಲೂಕು ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅಧ್ಯಯನಾ ಕಾರ್ಯದರ್ಶಿ ನಿಸಾರ್ ಸಖಾಫಿ ಉಳ್ಳಾಲ ಧನ್ಯವಾದಗೈದರು.
✍ ನವಾಝ್ ಸಖಾಫಿ ಉಳ್ಳಾಲ
ಸಂಘಟನಾ ಕಾರ್ಯದರ್ಶಿ : MTSC






