ವಿಶ್ವ ವಿಖ್ಯಾತ ವಿದ್ವಾಂಸ ಸುಲ್ತಾನುಲ್ ಉಲಮಾರ ಶಿಷ್ಯಂದಿರಾದ ಕರ್ನಾಟಕದ ಸಖಾಫಿ ವಿದ್ವಾಂಸರ ಬೃಹತ್ ಸಂಗಮ ಹಾಗು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದರ ಮಾರ್ಗದರ್ಶನದಲ್ಲಿ ವಿಶ್ವ ವಿಖ್ಯಾತ ವಿದ್ಯಾ ಕೇಂದ್ರ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ದಿಂದ ಸಖಾಫಿ ಪದವಿಯನ್ನು ಪಡೆದು ಪವಿತ್ರ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೂತನ ಸಖಾಫಿ ವಿದ್ವಾಂಸರಿಗೆ ಅಭಿನಂದನಾ ಸಮಾರಂಭವು ಕರ್ನಾಟಕ ಸಖಾಫಿ ಕೌನ್ಸಿಲ್ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ವಹಿಸಿದರು. ಎಸ್ ವೈ ಎಸ್ ರಾಜ್ಯ ನಾಯಕ ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು ದುವಾ ನೆರವೇರಿಸಿದರು. ಎಸ್. ಎಂ. ಎ. ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ತಂಙಳ್ ಉಜಿರೆ ಮಲ್ ಜಅ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಖಾಫಿ ಕೌನ್ಸಿಲ್ ಕೇಂದ್ರ ಸಮಿತಿ ಇದರ ಉಪಾಧ್ಯಕ್ಷರಾದ ವಳ್ಳಿಯಾಡ್ ಮುಹಮ್ಮದ್ ಅಲಿ ಸಖಾಫಿ ಕೇರಳ ಮುಖ್ಯ ಪ್ರಭಾಷಣ ನಡೆಸಿದರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾದ ಜಿ ಎಂ ಕಾಮಿಲ್ ಸಖಾಫಿ ಹಾಗು ಎಸ್ ವೈ ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಐದ್ರೋಸ್ ಅಸ್ಸಖಾಫಿ ಕಿಲ್ಲೂರು ತಂಗಳ್ ಸಮಾರೋಪ ಭಾಷಣ ಮಾಡಿ ದುವಾ ನೆರವೇರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕರ್ನಾಟಕ ಸಖಾಫಿ ಕೌನ್ಸಿಲ್ ವತಿಯಿಂದ ಕರ್ನಾಟಕ ಸುನ್ನೀ ಕೊ ಆರ್ಡಿನೇಷನ್ ಸುನ್ನೀ ಸಂಘಟನೆಗಳ ಒಕ್ಕೂಟ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ, ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಎಂ ಕಾಮಿಲ್ ಸಖಾಫಿ ಹಾಗು ಎಸ್ ವೈ ಎಸ್ ಕರ್ನಾಟಕ ರಾಜ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕರ್ನಾಟಕದ ನೂತನ ಸಖಾಫಿಗಳಲ್ಲಿ ಪ್ರಥಮ ಸ್ಥಾನ ಪಡೆದ ಆಲಂಪಾಡಿ ಉಸ್ತಾದ್ ಮೆಮೋರಿಯಲ್ ಅಹ್ದಲಿಯ್ಯಃ ದರ್ಸ್ ಶಾಂತಿಪಳ್ಳ ಕುಂಬಳೆ ಇದರ ಮುದರ್ರಿಸರಾಗಿರುವ ಕೆ.ಕೆ ಕಲಂದರ್ ಅಲಿ ಹಿಮಮಿ ಸಖಾಫಿ ಸುರಿಬೈಲ್ ಹಾಗು ದ್ವಿತೀಯ ಸ್ಥಾನ ಪಡೆದ ಪ್ರಸ್ತುತ ಅಹ್ದಲಿಯ್ಯಃ ದರ್ಸ್ ಶಾಂತಿಪಳ್ಳ ಕುಂಬಳೆ ಇದರ ಮತ್ತೋರ್ವ ಮುದರ್ರಿಸರಾಗಿರುವ ಅಬ್ದುಲ್ ರವೂಫ್ ಸಖಾಫಿ ಕ್ರಷ್ಣಾಪುರ ಇವರಿಗೆ ವಿಶೇಷ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗು ಆವಾರ್ಡ್ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಳಿಕ ಮರ್ಕಝ್ ರೂಬಿ ಜ್ಯುಬಿಲಿ ಸಮ್ಮೇಳನದಲ್ಲಿ ಸಖಾಫಿ ಬಿರುದುದಾರಿಗಳಾಗಿ ಹೊರ ಹೊಮ್ಮಿದ ಉಳಿದ ಕರ್ನಾಟಕದ ನವ ಸಖಾಫಿಗಳೆಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾಗಿರುವ ಎಸ್ ಪಿ ಹಂಝ ಸಖಾಫಿ, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ.ಸಿ ಎಫ್ ಸೌದಿ ಅರೇಬಿಯ ರಾಷ್ಟ್ರೀಯಾಧ್ಯಕ್ಷರಾದ ಡಿ.ಪಿ ಬೈತಾರ್ ಸಖಾಫಿ, ಸಯ್ಯಿದ್ ನಿಝಾಮುದ್ದೀನ್ ಸಖಾಫಿ ಬಾಫಖಿ ತಂಗಲ್, ಎಸ್ ವೈ ಎಸ್ ಮಂಗಳೂರು ಝೋನ್ ಅಧ್ಯಕ್ಷರಾದ ಅಶ್ ಅರಿಯ್ಯಃ ಸಖಾಫಿ, ಎಸ್ ವೈ ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಹಾಗು ಇನ್ನಿತರ ಗಣ್ಯ ಉಲಮಾಗಳು ಉಪಸ್ಥಿತರಿದ್ದರು. ಕರ್ನಾಟಕ ಸಖಾಫಿ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ ಸುರಿಬೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಖಾಫಿ ಕೌನ್ಸಿಲ್ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಕಣ್ಣೂರು ಧನ್ಯವಾದಗೈದರು.
ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Comments
Post a Comment