ಆಧುನಿಕತೆ ಮನುಷ್ಯನನ್ನು ತನ್ನತ್ತ ಸೆಳೆಯುತ್ತಿದೆ. ಧಾರ್ಮಿಕತೆ ದೂರವಾಗುತ್ತಿದೆ. ಧರ್ಮ ನಿಷ್ಠೆ, ಸೃಷ್ಠಿಕರ್ತನ ಭಯ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಮನುಷ್ಯನ ಪಾರತ್ರಿಕ ಜೀವನ ಕಂಟಕಕ್ಕೆ ಸಿಲುಕುತ್ತಿದೆ. ಪ್ರತಿಯೊಬ್ಬರಿಗೂ ಇದರಿಂದ ರಕ್ಷೆ ಬೇಕು. ಸತ್ಯವಿಶ್ವಾಸಿಯ ಜೀವನದ ಅಜೇಂಡಾವು ಅದೇ. ಪಾರತ್ರಿಕ ಜೀವನದ ಗೆಲುವು!
ಧಾರ್ಮಿಕತೆಯನ್ನು ಅತ್ಯಂತ ಶೃದ್ಧೆಯಿಂದ ಪಾಲಿಸುವುದರೊಂದಿಗೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳುವುದು ಯಶಸ್ವಿ ಜೀವನದ ಹಾದಿ. ಇಂದಿನ ಕಾಲದಲ್ಲಿ ಆಧ್ಯಾತ್ಮಿಕ ವೇದಿಕೆಗಳ ಅಗತ್ಯ ಬಹಳಷ್ಟಿದೆ. ಮನುಷ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಡಿನಾದ್ಯಂತ ಆಧ್ಯಾತ್ಮಿಕ ಮಜ್ಲಿಸ್ಗಳು ನಡೆಯುತ್ತಿದೆ.
ಇನ್ ಶಾ ಅಲ್ಲಾಹ್... ಇದೇ ಫೆಬ್ರವರಿ 1 ರಂದು ನಾಳೆ ಅಸರ್ ನಮಾಝ್ ಬಳಿಕ ಮಂಚಿಲ ಮಸ್ಜಿದ್ನಲ್ಲಿ ಬೃಹತ್ ಸ್ವಲಾತ್ ವಾರ್ಷಿಕ ಮಜ್ಲಿಸ್ ನಡೆಯಲಿದೆ. ಜಾಗತಿಕ ವಿದ್ವಾಂಸ, ಆಧ್ಯಾತ್ಮಿಕ ವಲಯದ ಉನ್ನತ ನಾಯಕರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ.ಸಿ) ರವರ ಸುಪುತ್ರರಾದ ಗೌರವಾನ್ವಿತ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಅನುಗ್ರಹೀತ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ನಮ್ಮೊಳಗಿನ ಧಾರ್ಮಿಕತೆಯನ್ನು ಜಾಗೃತಿಗೊಳಿಸಲು ನಾವೂ ಕೂಡಾ ನಾಳೆ ಅಸರ್ ನಮಾಝ್ ಬಳಿಕ ಮಂಚಿಲ (ಪೆರ್ಮನ್ನೂರು, ತೊಕ್ಕೋಟ್ಟು) ಮಸ್ಜಿದ್ನಲ್ಲಿ ಹಾಜರಾಗೋಣ.
- ಎ.ಎಮ್. ಅಳೇಕಲ
Comments
Post a Comment