السلام عليكم ورحمة الله وبركاته
ಇಸ್ಲಾಮಿನ ಪವಿತ್ರ ರಾತ್ರಿಗಳಲ್ಲಿ ಒಂದಾದ "ಶಅ್ ಬಾನ್ 15 ರ ಬರಾಅತ್ ರಾತ್ರಿ 08/04/2020 ಬುಧವಾರ ಅಸ್ತ ಗುರುವಾರ ರಾತ್ರಿ ಆಗಿರುತ್ತದೆ. ಬರಾಅತ್ ಉಪವಾಸ 9-4-2020 ಗುರುವಾರ ಆಗಿರುತ್ತದೆ ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾದ ಗೌರವಾನ್ವಿತ ಸಯ್ಯಿದ್ ಕೂರತ್ ತಂಗಲ್ ತಿಳಿಸಿದ್ದು, ಪುರಾತನ ಕಾಲದಿಂದಲೇ ಇದನ್ನು ಪವಿತ್ರ ರಾತ್ರಿಯಾಗಿ ಪರಿಗಣಿಸಿ, ಸತ್ಯ ವಿಶ್ವಾಸಿಗಳು ಮಸೀದಿಗಳಿಗೆ ತೆರಳಿ, ಸಾಮೂಹಿಕ ಪ್ರಾರ್ಥನೆ ಮಾಡುವುದು ರೂಢಿಯಾಗಿದೆ. ಆದರೆ ಇಂದು ದೇಶದಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ "ಲಾಕ್ ಡೌನ್" ಆದೇಶ ಜಾರಿಯಲ್ಲಿರುವುದರಿಂದ, ಸಾರ್ವಜನಿಕರು ಮಸೀದಿಗಳಿಗೆ ತೆರಳದೆ, ಮನೆಯಲ್ಲಿಯೇ ಪ್ರತ್ಯೇಕವಾಗಿ ಪ್ರಾರ್ಥಿಸಬೇಕಾಗಿ, ಎಲ್ಲಾ ಆಡಳಿತ ಸಮಿತಿ ಹಾಗೂ ಜಮಾಅತ್ ಬಾಂಧವರಲ್ಲಿ ಗೌರವಾನ್ವಿತ ಖಾಝಿ ಕೂರತ್ ತಂಗಲ್ ವಿಜ್ಞಾಪಿಸಿದ್ದಾರೆ.
ದೇಶದಲ್ಲೆಡೆ ವ್ಯಾಪಕವಾಗಿರುವ ಕೊರೋನಾ ವೈರಸ್ ನಿರ್ಮೂಲನೆಯಾಗಲು ಹಾಗೂ ದೇಶದ ಸರ್ವ ಧರ್ಮೀಯರ ಐಶ್ವರ್ಯ ಹಾಗೂ ನೆಮ್ಮದಿಗಾಗಿ ವಿಶೇಷವಾಗಿ ಪ್ರಾರ್ಥಿಸುವಂತೆಯೂ,ಈ ಮೂಲಕ ಮನವಿ ಮಾಡಲಾಗಿದೆ.
