ವರ್ತಮಾನ ಕಾಲದಲ್ಲಿ ಮನುಷ್ಯನ ಜೀವನ ರೀತಿಯನ್ನು ನೋಡುವಾಗ SSFನ ಮಕ್ಕಳಾದ ನಾವು ದಅವಾ ಕಾರ್ಯಾಚರಣೆ ನಡೆಸುವುದು ಬಹಳ ಅನಿವಾರ್ಯವಾಗಿದೆ : ಅಬ್ದುರ್ರಹೀಂ ಝುಹ್ರಿ ಉಸ್ತಾದ್
SSF K.C NAGARA ಶಾಖೆಯು ರಾಜ್ಯ ಸಮಿತಿಯ ನಿರ್ದೇಶನದಂತೆ 10-03-2018 ರಂದು ಶಾಖಾ ಕಛೇರಿಯಲ್ಲಿ ನಡೆಸಿದ *SINERGIA CAMP*ನಲ್ಲಿ ತರಗತಿ ಮಂಡಿಸುತ್ತಾ ಉಸ್ತಾದರು ಈ ವಿಷಯವನ್ನು ಹೇಳಿದರು..
ತನ್ನ ಮಾತನ್ನು ಮುಂದುವರಿಸಿದ ಅವರು SSFನ ಕಾರ್ಯಕರ್ತನು ನಮಾಝ್ ನಿರ್ವಹಿಸದ ತನ್ನ ಸ್ನೇಹಿತನಿಗೆ,ನಮಾಝಿನ ಗೌರವದ ಬಗ್ಗೆ ತಿಳಿಹೇಳಿ ಆತನು ನಮಾಝ್ ನಿರ್ವಹಿಸುವಂತೆ ಪ್ರೇರಣೆ ನೀಡುವುದು ಕೂಡ ದಅವಾದ ಒಂದು ಭಾಗವಾಗಿದೆ ಎಂದು ಹೇಳಿದರು...ಹೀಗೆ ದಅವಾ ಅನಿವಾರ್ಯತೆಯನ್ನು ಸವಿಸ್ತಾರವಾಗಿ ವಿವರಿಸಿದರು..
ಕಾರ್ಯಕ್ರಮವು ಸ್ಥಳೀಯ ಖತೀಬರಾದ ಹನೀಫ್ ಸಖಾಫಿ ಉಸ್ತಾದರ ದುವಾದೊಂದಿಗೆ ಶಾಖಾಧ್ಯಕ್ಷ ನಝೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಶಾಖಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಸ್ವಾಗತಿಸಿ, SYS K.C ನಗರ ಬ್ರಾಂಚ್ ಕಾರ್ಯದರ್ಶಿ ಇಕ್ಬಾಲ್ M.A ಉದ್ಘಾಟಿಸಿದರು..ಕಾರ್ಯಕ್ರಮದ ಕೊನೆಯಲ್ಲಿ ತಾಜುಲ್ ಉಲಮಾ ಭವನದ ಕೂಪನ್ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಅವರಿಗೆ ನೀಡಿ ಉದ್ಘಾಟನೆ ಮಾಡಲಾಯಿತು..ನಂತರ ಶಾಖಾ ಕಾರ್ಯದರ್ಶಿ ಮುಹ್ಸಿನ್ ಧನ್ಯವಾದ ಹೇಳಿದರು..
ಕಾರ್ಯಕ್ರಮದಲ್ಲಿ ಡಿವಿಶನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ,ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್,ಕಾರ್ಯದರ್ಶಿ ಅನ್ವೀಝ್ ಕೆ.ಸಿ ರೋಡು,ಶಾಖಾ ಉಸ್ತುವಾರಿ ಅಲ್ತಾಫ್ ಕೆ.ಸಿ ರೋಡು,ಶಾಖಾ ಉಪಾಧ್ಯಕ್ಷ ಸಿರಾಜುದ್ದೀನ್ ಭಾಗವಹಿಸಿ, ಕಾರ್ಯಕ್ರಮದ ವಿಜಯಕ್ಕೆ ಮತ್ತಷ್ಟು ಮೆರುಗು ನೀಡಿದರು..
reported by
*Musthafa*
*(Ⓜmedia convener SSF kcngr)*
Comments
Post a Comment