-ಇಂಟರ್ ನ್ಯಾಶನಲ್ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಮಲೇಷ್ಯಾ ಸಹಯೋಗದಲ್ಲಿ ಮಲೇಷ್ಯಾ ಧರ್ಮಶಾಸ್ತ್ರ ಸಂಶೋಧನಾ ಸಂಸ್ಥೆಯು ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಕನ್ನಡಿಗ ವಿದ್ಯಾರ್ಥಿ ಹಾಫಿಝ್ ನಝೀರ್ ಅಬ್ಬಾಸ್ ಆಯ್ಕೆಗೊಂಡಿದ್ದಾರೆ. ಮಾ.19 ರಿಂದ 22ರ ತನಕ ಕೌಲಾಲಂಪುರ ವಿಶ್ವ ವಿದ್ಯಾಲಯದಲ್ಲಿ ನಡೆಯುವ ಮೂರನೇ ಅಂತಾರಾಷ್ಟ್ರೀಯ ಧರ್ಮಶಾಸ್ತ್ರ ಸಮ್ಮೇಳನದಲ್ಲಿ "ಜ್ಞಾನಗಳ ಏಕೀಕರಣ ಮತ್ತು ವಿಜ್ಞಾನದ ಜೋಡಣೆ" ಎಂಬ ವಿಷಯದಲ್ಲಿ ಅವರು ಪ್ರಬಂಧ ಮಂಡಿಸಲಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕಾವಲುಕಟ್ಟೆ ನಿವಾಸಿಗಳಾದ ಅಬ್ಬಾಸ್ ಕುಂಡದಬೆಟ್ಟು ಹಾಗೂ ಆಯಿಶಾ ಬೈತಾರ್ ರವರ ಪುತ್ರನಾಗಿರುವ ಹಾಫಿಝ್ ನಝೀರ್, ಕುಟ್ಯಾಡಿ ಸಿರಾಜುಲ್ ಹುದಾ ಕಾಲೇಜಿನ ವಿದ್ಯಾರ್ಥಿ. ಕುಂಬ್ಳೆ ಮುಹಿಮ್ಮಾತ್ ವಿದ್ಯಾಲಯದಲ್ಲಿ ಸಂಪೂರ್ಣ ಖುರ್ಆನ್ ಕಂಠಪಾಠ ಮಾಡಿರುವ ಅವರು, ಪ್ರಸ್ತುತ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ.
ವಿವಿಧ ದೇಶಗಳಿಗೆ ಸೇರಿದ 20 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವ ಸಮ್ಮೇಳನಕ್ಕೆ ಆಯ್ಕೆಯಾದ ಇಬ್ಬರು ಭಾರತೀಯರಲ್ಲಿ ಹಾಫಿಝ್ ನಝೀರ್ ಏಕೈಕ ಕನ್ನಡಿಗ. ನಾಲ್ಕು ದಿನಗಳ ಸಮ್ಮೇಳನದಲ್ಲಿ ಲಿಬಿಯಾದ ನಿವೃತ್ತ ಯುಎಇ ರಾಯಭಾರಿ ಡಾ.ಆರಿಫ್ ಅಲೀ ನಾಯಿದ್, ಜೋರ್ಡಾನಿನ ಧರ್ಮ ಶಾಸ್ತ್ರ ವಿದ್ವಾಂಸ ಡಾ. ಸಯೀದ್ ಫೌದಾ, ಹಾರ್ವರ್ಡ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಅಬ್ದುಲ್ ರಹಮಾನ್ ಮಿಹ್ರಿಜ್ ಸೇರಿದಂತೆ ಹಲವು ಪ್ರಮುಖರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
-received.
#Voice_Øf_Sunni_Muslims.
Comments
Post a Comment