Skip to main content

ಮನದಾಳದ ಮನ್ಸೂರ್ ಭಾಯ್

ಕುವೈತ್ ನ ಮರುಭೂಮಿಯಲ್ಲಿ ದಶಕಗಳ ಕಾಲ ಅಹ್ಲುಲ್ ಸುನ್ನತ್ ಜಮಾತ್ ನ ಅಡಿಸ್ಥಾನದಲ್ಲಿ ಅನಿವಾಸಿ ಮುಸ್ಲಿಂ ಕನ್ನಡಿಗರನ್ನು ಒಗ್ಗೂಡಿಸಿ ಕೆಕೆಎಸ್ಎ  ಯಿಂದ  ಕೆಸಿಎಫ್ ಎಂಬ ಸಂಘಟನೆಯನ್ನು ಬೆಳೆಸಿ ಅದರ ಬೆನ್ನೆಲುಬಾಗಿ ರಾತ್ರಿ ಹಗಲೆನ್ನದೆ ದುಡಿದ ಕ್ಷಮಾ ಶೀಲ, ಕ್ರಿಯಾಶೀಲ ಯುವ ನಾಯಕರಾಗ್ಗಿದ್ದಾರೆ  ಮಲೆನಾಡಿನ ಭತ್ತದ ಕಣಜ ಖ್ಯಾತಿಯ ಕುವೆಂಪು, ಯು.ರ್ ಅನಂತ ಮೂರ್ತಿ ಹುಟ್ಟಿದ ತೀರ್ಥಹಳ್ಳಿ ತಾಲೂಕಿನ ಸಾಗರದಲ್ಲಿರುವ ಕೋಟೆ ಗದ್ದೆ ಎಂಬ ಕುಗ್ರಾಮದ ಜನಾಬ್ ಮನ್ಸೂರ್ ಕೋಟೆ ಗದ್ದೆ.
             ಸಣ್ಣ ಹುದ್ದೆಗಾಗಿ ಕುವೈತ್ ಆಗಮಿಸಿದ ಇವರು ಸೌದಿ ಗಡಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕುವೈತ್ ನಲ್ಲಿ ಕನ್ನಡಿಗರಿಗಾಗಿ ಸುನ್ನತ್ ಜಮಾತ್ ನ ಸಂಘಟನೆಯನ್ನು ಕಟ್ಟುವ ಕನಸ್ಸು ಕಂಡಿದ್ದರು.
            ಕುವೈತ್ ಗೆ ಆಕಸ್ಮಿಕವಾಗಿ ಆಗಮಿಸಿದ ಬಹುಮಾನ್ಯ ಹಂಝ ಸಖಾಫಿ ಯವರನ್ನು ಭೇಟಿ ಯಾಗಿ ತಮ್ಮ ಇಂಗಿತವನ್ನು ತಿಳಿಸಿದಾಗ ಗೆಳೆಯರಾದ ಹಮೀದ್ ಕಾಶಿಪಟ್ಣ, ಇಬ್ರಾಹಿಮ್ ವೇಣೂರ್, ತೌಫೀಕ್ ಕಾರ್ಕಳ ಹಾಗೂ 18 ಸದಸ್ಯರು ಸೇರಿ 2010 ರ ಜೂನ್ ನಲ್ಲಿ ಕೆಕೆಎಸ್ಎ ಎಂಬ ಸಂಘಟನೆಯನ್ನು ಹುಟ್ಟಿ ಹಾಕಿದರು. ನಂತರದ ದಿನಗಳಲ್ಲಿ ಇದೇ ಸಂಘಟನೆ ಕೆಸಿಎಫ್ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ* *ಗುರುತಿಸುವಂತಾಯಿತು. ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಯಾಗಿ ಇದೀಗ ಕೆಸಿಎಫ್ ರಾಷ್ಟ್ರೀಯ ಸಂಘಟನೆಯ ಕನ್ವೀನರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದ ನೀವು ಕುವೈತ್ ನ ಕಾರ್ಯಕರ್ತರಿಗೆ ಮಾದರಿಯಾಗಿದ್ದೀರಿ. ಕಾರ್ಯಕರ್ತರ ಪಾಲಿಗೆ ನೀವು ತುಂಬಿದ ಸ್ಫೂರ್ತಿ ಎಂದೆಂದಿಗೂ ಮರೆಯಲಾಗದು.ನಿಮ್ಮ ನಗು ನಿಮ್ಮ ಕ್ಷಮಾ ಶೀಲತೆ, ಎಷ್ಟೇ ಒತ್ತಡ ಇದ್ದರೂ,ಏನೇ ಕೆಲಸ ಇದ್ದರೂ, ಯಾವುದೇ ಕಾರ್ಯದಲ್ಲೂ ತಕ್ಷಣ ಸ್ಪಂದಿಸುವ ಓರ್ವ ಮಾದರಿ ನಾಯಕರಾಗಿದ್ದೀರಿ. ಯಾವುದೇ ಸ್ಥಳದಲ್ಲಿ ಸುನ್ನತ್ ಜಮಾತ್ ನ ಸ್ವಲಾತ್ ಮಜ್ಲಿಸ್ ನಲ್ಲಿ ನಿಮ್ಮ ಸಾನಿಧ್ಯವು ಮುಂಚೂಣಿಯಲ್ಲಿ ಇರುತಿತ್ತು.
        ಸುಡುವ ಬಿಸಿಲಿನಲ್ಲೂ, ನಡುಗುತ್ತಿರುವ ಚಳಿಯಲ್ಲೂ ನೀವು  ಅಲ್-ಝೋರ್ ನಿಂದ ನೂರಾರು ಕಿಲೋಮೀಟರ್ ತನಕವೂ ನಿಮ್ಮ ಸ್ವಂತ ಖರ್ಚಿನಿಂದ ಸಂಘಟನೆಗಾಗಿ ದುಡಿದು ರಾತ್ರಿಯಲ್ಲಿ ಯಾವುದೊ ಸಿಕ್ಕಿದ ಟ್ಯಾಕ್ಸಿ ಹಿಡಿದು  ರೂಮ್ ಸೇರುವಾಗ ರಾತ್ರಿ ಎರಡು ಮೂರು ಗಂಟೆ ಯಾದರೂ ಬೆಳಗ್ಗೆ ಕೆಲಸವಿದ್ದರೂ ಎಲ್ಲವನ್ನೂ ಮೀರಿ ನಿಂತ ನೀವು ಸಂಘಟನೆಯ ಕೈ ಹಿಡಿದು ನಡು ರಾತ್ರಿಯ ನಿಶಬ್ದ ದಾರಿಯಲ್ಲಿ ಎಷ್ಟು ದೂರ ಸಾಗಿದರು ದಣಿವು ಇಲ್ಲದ   ಕೆಚ್ಚೆದೆಯ ನಾಯಕರಾದ ನೀವು ಸ್ವಂತ ಮನೆಯ ಮಕ್ಕಳು ಹೇಳಿದ ಅಗತ್ಯ ವಸ್ತುಗಳನ್ನು ಮರೆತರೂ ಸಂಘಟನೆಯ ವಿಷಯದಲ್ಲಿ ನೀವು ಯಾವುದೇ ವಸ್ತುಗಳನ್ನು  ಮರೆಯದೇ ಅಚ್ಚುಕಟ್ಟಾಗಿ ಮುನ್ನುಡಿಸಿದ ಮಾದರಿ ನಾಯಕ ನೀವು.
ಕುವೈತ್ ಗೆ ಯಾವುದೇ ಸಂಸ್ಥೆಯ, ಸಂಘಟನೆಯ ಉಸ್ತಾದರು ಆಗಮಿಸಿದಾಗ ಅವರನ್ನು ಆತ್ಮೀಯವಾಗಿ ಆಧರಿಸಿ,ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿ ಅವರ ಮನಸ್ಸು ಮುದಗೊಳಿಸಿ ಕಳುಹಿಸಿ ಮಾದರಿಯಾಗಿದ್ದೀರಿ.
       ನನ್ನ ಗೆಳೆಯನ ತಂದೆ ಮರಣಹೊಂದಿದ ವಾರ್ತೆಯನ್ನು  ತಿಳಿದಾಗ ಕೇವಲ ನಾಲ್ಕು ಗಂಟೆಯಲ್ಲಿ ಆತನಿಗೆ ಟಿಕೆಟ್ ವ್ಯವಸ್ಥೆಯನ್ನು ಮಾಡಿ ಊರಿಗೆ ಹೋಗಿ ತಂದೆಯ ಅಂತಿಮ ಸಂಸ್ಕಾರ ದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟ ನಿಮ್ಮನ್ನು ಯಾವುದರಿಂದ ಹೊಗಳಲಿ.
       ನನ್ನ ಪಾಲಿಗಂತು ಸಂಘಟನಾ ಗುರು ಅಂದರೆ ತಪ್ಪಾಗಲಾರದು. ಬಿಂದಾಸ್ ಆಗಿ ಕಾಲ ಕಳೆಯುತ್ತಾ ಇದ್ದ ನನಗೆ ಉತ್ತಮವಾದ ಸಲಹೆಗಳನ್ನು ನೀಡಿ ನಾಲ್ಕು ಜನರ ಮುಂದೆ ನಿಂತು ಸುನ್ನತ್ ಜಮಾತ್ ಪರ ಮಾತನಾಡಲು. ಪತ್ರಿಕೆ ಯಲ್ಲಿ ವರದಿ ಬರೆಯುವ  ವರದಿ ವಾಗರನನ್ನಾಗಿ ರೂಪಿಸಿದ್ದೀರಿ.ಹಗಲನ್ನು ಬೆವರಿನಲ್ಲೂ, ರಾತ್ರಿಯನ್ನು ಕಣ್ಣೀರಲ್ಲಿ ಕಳೆಯುತ್ತಾ ಬದುಕುತ್ತಿದ್ದ ನನಗೆ ಸಮಾಜ ಸೇವಾಸಕ್ತಿ, ಕ್ರಿಯಾಶೀಲತೆಯನ್ನು ನನ್ನ ಬದುಕಿನಲ್ಲಿ ಕಲಿಸಿಕೊಟ್ಟಿದ್ದೀರಿ ಹಾಗೂ  ನನ್ನ ಎಲ್ಲಾ ವಿಷಯದಲ್ಲೂ ಬೆನ್ನು ತಟ್ಟಿ ಪ್ರೊತ್ಸಾಹಿಸಿದ್ದೀರಿ. ರಾತ್ರಿ ಹಗಲೆನ್ನದೆ ಎಲ್ಲಾ ಕಾರ್ಯಕರ್ತರಿಗೂ ತಕ್ಷಣ ಸ್ಫಂದಿಸಿದ್ದೀರಿ.
     ಇದೀಗ ನೀವು ತಾತ್ಕಾಲಿಕವಾಗಿ ಕುವೈತ್ ಬಿಟ್ಟು ತಾಯ್ನಾಡಿಗೆ ಹೋದ ನಂತರ ಕಾರ್ಯಕರ್ತರಾದ ನಮಗೆ ಅತೀವ ಬೇಸರ ತಂದಿದೆ.ಆದರೂ ಸುನ್ನೀ ಸಮುದಾಯದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟ ನಿಮ್ಮ ಜೀವನದ ನೆನಪುಗಳು ಮಾತ್ರ ನನ್ನ ಹೃದಯದಲ್ಲಿ ಡವ ಡವ ಗುಟ್ಟುತ್ತಾ ಇದೆ.

ನೀವು ನೀಡಿದ ಸೇವೆಯನ್ನು ಸತ್ಕರ್ಮಗಳ ಪಾಲಿಗೆ ಸೇರಿಸಲಿ.ಆಫೀಯ್ಯತ್ತಾದ ಧೀರ್ಘಾಯುಷ್ಯ ನೀಡಲಿ ಆಮೀನ್ ಯಾ ರಬ್ಬಲ್ ಆಲಮೀನ್.

      ✍�� ಮುಸ್ತಫ ಉಳ್ಳಾಲ

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.