Skip to main content

KCF ಕುವೈಟ್ ಆಶ್ರಯದಲ್ಲಿ ನಡೆದ ಬ್ರಹತ್ ಇಲಲ್ ಹಬೀಬ್ ಮೀಲಾದ್ ಸಮಾವೇಶ

*ಕೆಸಿಎಫ್ ಕುವೈಟ್ ವತಿಯಿಂದ ಬೃಹತ್ "ಇಲಲ್ - ಹಬೀಬ್ " ಮಿಲಾದ್ ಸಮಾವೇಶ.*

ಜಗತ್ತು ಕಂಡ ಮಹಾ ನಾಯಕ,ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಫಟ್ಟ "ರಹ್ಮತುಲ್ ಆಲಮೀನ್" ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರು ಇಡೀ ಜಗತ್ತಿಗೆ ಬೆಳಕಾಗಿ,ಕತ್ತಲೆಯಿಂದ ಬೆಳಕಿನಡೆಗೆ ದಾರಿದೀಪವಾಗಿ ಶಾಂತಿ,ನೀತಿಯನ್ನು ಸಾರಿದ ಮುತ್ತು ನೆಬಿಯವರ ಜನ್ಮ ದಿನದ ಅಂಗವಾಗಿ "ಪ್ರೀತಿಯ ಪ್ರವಾದಿ, ಶಾಂತಿಯ ಹಾದಿ" ಎಂಬ ಘೋಷ ವಾಕ್ಯದೊಂದಿಗೆ ದಿನಾಂಕ ಡಿಸೆಂಬರ್ 23 ರ ಶುಕ್ರವಾರ  ಸಾಯಂಕಾಲ 5.30 ಗಂಟೆಗೆ ಸರಿಯಾಗಿ  ಇಂಡಿಯನ್ ಮೊಡೆಲ್  ಸ್ಕೂಲ್ ಸಾಲ್ಮಿಯಾದ ಬೃಹತ್
ಸಬಾಂಗಣದಲ್ಲಿ  ಮೌಲೂದ್ ಪಾರಾಯಣ ದೊಂದಿಗೆ ಆರಂಭವಾಯಿತು.
ಕಡಿಮೆ ಕಾಲಾವಧಿಯಲ್ಲಿ ಕ್ರಿಯಾತ್ಮಕ ಕಾರ್ಯಕ್ರಮಗಳ ಮೂಲಕ ಅನಿವಾಸಿ ಕನ್ನಡಿಗರ ಹೃದಯ ತಟ್ಟುತ್ತಿರುವ,ಮನಸ್ಸು ಮುಟ್ಟುತ್ತಿರುವ ಕೆಸಿಎಫ್. ಜಗದ ಯಾವ ಕಡೆ ತೆರಳಿದರೂ ನಾಡಪ್ರೇಮ ಜಾಗೃತವಾಗಿರುವ ಕನ್ನಡಿಗರ  ಸಂಘಟನೆಯೇ ಕೆಸಿಎಫ್.
ಕೆಸಿಎಫ್ ಮಹಬುಲ ಸೆಕ್ಟರ್  ಬುರ್ದಾ ತಂಡದಿಂದ ಬುರ್ದಾ ಅಲಾಪನೆ ನಡೆಯಿತು .  ಫರ್ವಾನಿಯ ಸೆಕ್ಟರ್ ಕಾರ್ಯದರ್ಶಿ ಕಲಂದರ್ ಶಾಫಿ  ಕಿರಾಹತ್ ಪಠಿಸಿದರು. ಇಲಲ್  ಹಬೀಬ್  ಸಮಾವೇಶದ ಮುಖ್ಯ ಅತಿಥಿಗಳಾಗಿ  ಹಾಗೂ  ಪ್ರಮುಖ ಪ್ರಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಮುಸ್ಲಿಮರ ಅಭಿಮಾನ ಧ್ವನಿ,ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶಕರು ಹಾಗೂ SSF ರಾಜ್ಯ ಅಧ್ಯಕ್ಷರು ಆದ ಬಹುಮಾನ್ಯ N.K.M ಶಾಫಿ ಸಅದಿ ಉಸ್ತಾದರು ಮಾತನಾಡಿ ಪ್ರವಾದಿ  (ಸ.ಅ)ರು ಯಾರು ಹಾಗೂ ಅವರ ಜೀವನದ ಸಂದೇಶವನ್ನು  ನಾವು ಜೀವನದಲ್ಲಿ ಅಳವಡಿಸಿ ಸಂಘಟನೆಯಲ್ಲಿ ಗುಂಪುಗಾರಿಕೆ ಮಾಡದೆ ಇಸ್ಲಾಂನ ತತ್ವಾದರ್ಶದಲ್ಲಿ ಜೀವಿಸಬೇಕು.  ಗ್ರೂಪಿಸಂ ಮಾಡುವವನು ಕೆಸಿಎಫ್ ನ ಸದಸ್ಯತ್ವಕ್ಕೆ ಅರ್ಹನಲ್ಲ ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಚೇಯರ್ಮ್ಯಾನ್ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ  ನೆರವೇರಿಸಿದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್  ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಪ್ರಾಸ್ತವಿಕ  ಭಾಷಣ ಮಾಡಿದರು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರು ಅಧ್ಯಕ್ಷ ಭಾಷಣ ಮಾಡಿದರು. ಪಾಕಿಸ್ತಾನದ ಖಾರಿ ತಲಾತ್ ನಕ್ಸಬಂದೇ  ಕಾರ್ಯಕ್ರಮಕ್ಕೆ ಶುಭಕೋರಿದರು. ಕೆಸಿಎಫ್ ದುಬೈ ಅಜ್ಮನ್ ಝೊನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ತಿಂಗಲಾಡಿ ಶುಭ ಹಾರೈಸಿದರರು.ಕೆಸಿಎಫ್ ಕುವೈತ್ ಇಲಲ್ ಹಬೀಬ್ ಮಿಲಾದ್ ಸಮಾವೇಶದ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಬಳಂಜೆ ಆಶಂಷ ಭಾಷಣ ಮಾಡಿದರು.  ನಂತರ  ಬುರ್ದಾ ನಾತ್ ಮೂಲಕ  ಅಚ್ಚರಿಯ ಅಧ್ಯಾಯ ಬರೆದ ಸಹಸ್ರಾರು ಕನ್ನಡಿಗರ ಮನದಾಳದಲ್ಲಿ ಸ್ಥಾನ ಗಳಿಸಿದ ಪ್ರಖ್ಯಾತ ಗಾಯಕ ಕೋಗಿಲೆ ಕಂಠದ ಫಿದಾಯೇ ಮದೀನ ಅಹಮ್ಮದ್ ನಬೀಲ್ ಬರಕಾತಿ ಬೆಂಗಳೂರು  ನೆರೆದ ಸಭಿಕರ ಕಿವಿ ಗಳಿಗೆ ಮಂದಮಾರುತದಂತೆ ಅಪ್ಪಲಿಸುವ ಸಿರಿ ಹಾಡಿನೊಂದಿಗೆ  ಅಚ್ಚರಿಯ ಅಧ್ಯಾಯ ಬರೆದು ಸಹಸ್ರಾರು ಜನರ  ಮನ ರಂಜಿಸಿದರು.   ಬಹುಮಾನ್ಯ ಶಾಫಿ ಸಅದಿ ಉಸ್ತಾದರನ್ನು ಮತ್ತು ಜನಾಬ್ ಹಬೀಬ್ ಕೋಯ  ಹಾಗೂ ಫೀದಾಯೇ ಮದೀನ ಅಹಮದ್ ನಬೀಲ್ ಬರಕಾತಿ ಅವರನ್ನು ಈ ಸಂಧರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೆಸಿಎಫ್ ಅಂತರರಾಷ್ಟ್ರೀಯ ಕೌನ್ಸಿಲ್ ಖಜಾಂಜಿಯೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ಚೇಯರ್ಮ್ಯಾನ್  ಆದ ಜನಾಬ್ ಹಬೀಬ್ ಕೋಯ ಉರ್ದು ವಿನಲ್ಲಿ ಭಾಷಣ ಮಾಡಿ ಕೆಸಿಎಫ್ ಅಹ್ಲುಲ್ ಸುನ್ನತ್ ಜಮಾತಿನ ಅಡಿಸ್ಥಾನದಲ್ಲಿ ನಿಲ್ಲಲು ಹಾಗೂ ಅದರ ಪ್ರಕಾರ ನೆಡೆಯಲು ಕುವೈಟ್ ನಲ್ಲಿರುವ ಎಲ್ಲಾ ಸಂಘ  ಸಂಸ್ಥೆ ಯವರು ಕೈಜೋಡಿಸಬೇಕೆಂದು ಹಿತ ವಚನ ನೀಡಿದರು. ನಂತರ ಐ ಸಿ ಎಫ್ ಕುವೈಟ್ ಕೇಂದ್ರ ನಾಯಕ ರಾದ ಬಹುಮಾನ್ಯ ಸೈಯದ್ ಅಲವಿ ಸಖಾಫಿ  ತಂಙಳ್ ಮಂಗಾಫ್ ಹಾಗೂ ಐ ಸಿ ಎಫ್ ಕೇಂದ್ರ ಅಧ್ಯಕ್ಷರಾದ ಬಹುಮಾನ್ಯ ಹಕೀಂ ದಾರಿಮಿ ಉಸ್ತಾದ್ ರ ಸಮ್ಮುಖದಲ್ಲಿ 2017 ರ ಕೆಸಿಎಫ್ ಕ್ಯಾಲೆಂಡರ್  ಬಿಡುಗಡೆ ಮಾಡಲಾಯಿತು.  ಹಾಗೂ ಐಸಿ ಎಫ್ ಪ್ರಧಾನ  ಕಾರ್ಯದರ್ಶಿ ಜನಾಬ್ ತನ್ವೀರ್ ಶಾಹೀಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಲ್ಲದೆ ಕೆಸಿಎಫ್ ನಾಯಕರುಗಳಾದ ಫಯಾಝ್ ತಂಙಳ್ ,ಬಹುಮಾನ್ಯ ಅಬ್ದುಲ್ ಹಮೀದ್ ಸಅದಿ,ಬಹುಮಾನ್ಯ ಜಬ್ಬಾರ್ ಮದನಿ, ಕೆಸಿಎಫ್ ರಾಷ್ಟ್ರೀಯ ಸಾಂತ್ವಾನ ವಿಭಾಗದ ಚೇಯರ್ಮ್ಯಾನ್ ಅಬ್ದುಲ್ ಲತೀಫ್ ಬಂಟ್ವಾಳ.ಮಹಬುಲ ಸೆಕ್ಟರ್ ಅಧ್ಯಕ್ಷರಾದ ಬಾವಕ ಕುಪ್ಪೆಪದವು ಹಾಗೂ  ಐ ಸಿ ಎಫ್ ಕುವೈಟ್ ಇದರ ನಾಯಕರು ಅಲ್ಲದೆ ಅನೇಕ ಉಲಮಾ ಉಮರಾಗಳು ಭಾಗವಹಿಸಿದರು.ಕೆಸಿಎಫ್ ರಾಷ್ಟ್ರೀಯ ಆಡಳಿತ ವಿಭಾಗದ ಕನ್ವೀನರ್ ಜನಾಬ್ ಇಬ್ರಾಹಿಮ್ ವೇಣೂರ್ ಅವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಹಾಗೂ ಇಲಲ್ ಹಬೀಬ್ ಸ್ವಾಗತ ಸಮಿತಿಯ  ವತಿಯಿಂದ ಸನ್ಮಾನಿಸಲಾಯಿತು.ಕೆಸಿಎಫ್ ಕುವೈತ್  ಕಾರ್ಯಕರ್ತರಿಗಾಗಿ ಹಮ್ಮಿಕೊಂಡ "ವರದಕ್ಷಿಣೆಯ ಪಿಡುಗು" ಪ್ರಭಂದ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವವಿಸಲಾಯಿತು.
ಶಾಫಿ ಸಅದಿ ಉಸ್ತಾದರ ಭಕ್ತಿ ಪೂರ್ವ ದುವಾ  ಕುವೈಟ್ ನ ಇತಿಹಾಸದಲ್ಲಿ  ದೊಡ್ಡ ಆಧ್ಯಾತ್ಮಿಕ  ಸಮ್ಮೇಳನಕ್ಕೇ ಸಾಕ್ಷಿಯಾಯಿತು. ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ  ಸ್ವಾಗತಿಸಿದರು.ಮುಸ್ತಫ ಉಳ್ಳಾಲ  ಕೊನೆಯದಾಗಿ ಧನ್ಯವಾದ ಗೈದರು. ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದ್
ಕಾರ್ಯಕ್ರಮವನ್ನು  ನಿರೂಪಿಸಿದರು.
           ✍�� ಮುಸ್ತಫ ಉಳ್ಳಾಲ.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.