ಉಳ್ಳಾಲದ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮರ್ಕಝ್ ಪ್ರಚಾರ ಸಂಗಮ.
ಮರ್ಕಝ್. ಇದೊಂದು ವಿಸ್ಮಯ, ನಮ್ಮೆಲ್ಲರ ಹೆಮ್ಮೆಯ, ಅಭಿಮಾನದ ಸಂಕೇತ, ಅನಾಥ, ನಿರ್ಗತಿಕ ಮಕ್ಕಳ ಶ್ರೇಯೋಭಿವ್ರದ್ಧಿಗಾಗಿ ಶ್ರಮಿಸುತ್ತಿರುವ ಆಶ್ರಯ ತಾಣ, ಲೌಕಿಕ, ಧಾರ್ಮಿಕ, ಸಾಮಾಜಿಕ, ಸಾಮುದಾಯಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಸಂಸ್ಥೆ, ದೇಶ ವಿದೇಶಗಳಲ್ಲಿ ಮಿಂಚುತ್ತಿರುವ ಸರಿಸಾಟಿಯಿಲ್ಲದ ನೇತಾರ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ.
ಹೌದು, ಮರ್ಕಝುಸ್ಸಖಾಫತಿಸ್ಸುನ್ನಿಯ್ಯಃ ಕ್ಯಾಲಿಕಟ್ ಕೇರಳ ಇದರ 43 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನೂರಾರು ಮೊಹಲ್ಲಾಗಳಲ್ಲಿ ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಹಮ್ಮಿಕೊಂಡ ಮರ್ಕಝ್ ಪ್ರಚಾರ ಸಂಗಮ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವ್ಯಾಪ್ತಿಗೆ ಬರುವ ಉಳ್ಳಾಲದ ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಮಾರ್ಚ್ 13, ಶುಕ್ರವಾರ ಜುಮಾ ನಮಾಝ್ ಬಳಿಕ ನಡೆಯಲಿರುವುದು.
ಸುತ್ತಮುತ್ತಲ ಮೊಹಲ್ಲಾದ ಮರ್ಕಝ್ ಹಿತೈಷಿಗಳಾದ ಸುನ್ನೀ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ತೊಕ್ಕೋಟು ಜುಮಾ ಮಸೀದಿಯಲ್ಲಿ ಜಮಾಯಿಸಿ, ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು.
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್

