--------------------------------------
ವಿಶಾಲ ಮನಸ್ಸಿನ ಮೇರು ವ್ಯಕ್ತಿ ಅಬ್ದುಲ್ಲ ಹಾಜಿ
---------------------------------------
📝 *ಶರೀಫ್ ಎ.ಪಿ. ಹೊಸತೋಟ*
*8105914587*
🍃🍃🍃🍃🍃🍃🍃🍃🍃🍃🍃
ಭೀಕರ ಪ್ರವಾಹಕ್ಕೆ ಸಿಲುಕಿ ಮನೆ ಮಠಗಳನ್ನು ಕಳೆದು ಬೀದಿಪಾಲಾಗಿರುವ ನೂರಾರು ಕುಟುಂಬಗಳು ತಂಗಲು ಒಂದು ಆಶ್ರಯವಿಲ್ಲದೆ ಕಂಗಾಲಾದಾಗ ಅವರಿಗೆ ವಸತಿ ನಿರ್ಮಿಸಲು ಎರಡು ಎಕರೆ ಭೂಮಿ ದಾನ ಮಾಡಿದ ಅಬ್ದುಲ್ಲ ಹಾಜಿ ನಿಜಕ್ಕೂ ಗ್ರೇಟ್..
ಎರಡು ಎಕರೆ ಭೂಮಿ ನೀಡಿದ ಆ ಮನಸ್ಸು ಸಾವಿರ ಎಕರೆಗಳಷ್ಟು ವಿಶಾಲವಾದದ್ದು...
ಈ ಕಾಲದಲ್ಲೂ ಇಂತಹ ಉದಾರ ಮನೋಭಾವದ ಜನರಿದ್ದಾರಾ ಎಂದೆನಿಸಿತು..ಕಾರಣ
ಇವರಿಗೆ ಆ ಜಾಗ ಕೊಟ್ಟು ಮುಂದಿನ ಚುನಾವಣೆಯಲ್ಲಿ ಮತ ಕೇಳಬೇಕಾಗಿಲ್ಲ... ಸೀಟು ಪಡೆಯುವ ಉದ್ದೇಶವೂ ಇಲ್ಲ.. ಹೊರತು ವಸತಿ ಕಳೆದುಕೊಂಡು ಬೀದಿಪಾಲಾದ ನಿರಾಶ್ರಿತರಿಗೆ ಸಿಗುವ ಸಂತೋಷವನ್ನು ಮಾತ್ರ ಮನಸ್ಸಿನಲ್ಲಿ ಕಂಡು ಇಂತಹ ಕೆಲಸವನ್ನು ಮಾಡುತ್ತಾರೆ..
ಇದರ ಮೂಲಕ ಪರಲೋಕ ವಿಜಯ ಪಡೆಯುವುದೇ ಅವರ ಮೂಲ ಧ್ಯೇಯ. ಅಲ್ಲಾಹು ತಆಲ ಅವರಿಗೆ ಸ್ವರ್ಗದಲ್ಲೊಂದು ಭವನ ನೀಡಿ ಅನುಗ್ರಹಿಸಲಿ -ಆಮೀನ್
*ಕೋಟಿಗಟ್ಟಲೆ ಖಾಸಗಿ ಸೊತ್ತು ಸಂಪಾದಿಸಿ ಸರ್ಕಾರದ ಖಜಾನೆಯಿಂದ ಅರ್ಹ ಪರಿಹಾರ ಒದಗಿಸಿಕೊಡಲು ಆಲಸ್ಯತನ ತೋರುವ,ಹಿಂದೇಟು ಹಾಕುವ ರಾಜಕಾರಣಿಗಳಿಗೆ ಕೊಂಡಂಗೇರಿಯ ಅಬ್ದುಲ್ಲ ಹಾಜಿ ಮಾದರಿಯಾಗಿದ್ದಾರೆ..*
📒📒📒📒📒📒
*Team Writers*
*ANVARUL HUDA KODAGU*
