Skip to main content

ತೋಕೆ ಉಸ್ತಾದರ ದಾರುಲ್ ಮುಸ್ತಫಾ ಸಂಸ್ಥೆಯನ್ನು ಬಲಪಡಿಸೋಣ..



ಕರ್ನಾಟಕದಲ್ಲಿ ಧಾರ್ಮಿಕ ವಿಷಯಗಳಲ್ಲಿ ಅಧಿಕೃತ ಫತ್ವಾ ನೀಡಲು ಅರ್ಹರಾಗಿರುವ ಕರ್ನಾಟಕ ಉಲಮಾ ಒಕ್ಕೂಟದ ನಾಯಕ ಬೇಕಲ ಉಸ್ತಾದ್, ಮಾಣಿ ಉಸ್ತಾದ್, ಮಂಜನಾಡಿ ಅಬ್ಬಾಸ್ ಉಸ್ತಾದರಂತಹ ಪ್ರಮುಖ ವಿದ್ವಾಂಸರ ನಂತರ ಕೇಳಿ ಬರುವ ಹೆಸರಾಗಿದೆ ತೋಕೆ ಉಸ್ತಾದ್!
ಯುವಕ ಆದರೆ ಅಗಾಧ ಪಾಂಡಿತ್ಯ. ಮೃದು ಸ್ವಭಾವಿ, ಆದರೆ ಅಸುನ್ನಿ ಕಂಡರೆ ಕೆಂಡವಾಗುತ್ತಾರೆ.
ಸಾಕ್ಷಾತ್ ಇಕೆ ಹಸನ್ ಉಸ್ತಾದರ ಸ್ವಭಾವದಂತೆ.
ಇಡೀ ಕರ್ನಾಟಕದಲ್ಲಿ ಕಳ್ಳ ತ್ವರೀಖತ್ ಸಹಿತ ಸುನ್ನಿಯೇತರರಿಗೆ ತೋಕೆ ಉಸ್ತಾದರ ಹೆಸರು ಕೇಳುವಾಗಲೇ ಚಳಿ ಹಿಡಿಯುತ್ತದೆ. ಅವರು ಎಂದಿಗೂ ಸುನ್ನೀ ವಿರುದ್ಧ ನಿಲುವುಗಳಲ್ಲಿ ರಾಜಿ ಮಾಡುವುದೇ ಇಲ್ಲ.
ಇಡೀ ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿಯಾಗಿ 40ರ ಆಸುಪಾಸಿನ ಯುವಕ ಆಯ್ಕೆಯಾಗುವುದೆಂದರೆ ಆ ಯುವ ವಿದ್ವಾಂಸರ ಇಲ್ಮ್ ಎಷ್ಟಿರಬಹುದು?
ಅವರ ಸಾರಥ್ಯದ ಸುನ್ನೀವಾಣಿ ಮಾಸಿಕದಲ್ಲಿ ಫಿಕ್ಹ್ ಕೋರ್ಟ್ ಎಂಬ ಕಾಲಂನಲ್ಲಿ ಸಮಕಾಲೀನ ಸಮಸ್ಯೆಗಳ ಪರಿಹಾರವಾಗಿ ಅವರು ಬರೆಯುತ್ತಿರುವ ಫಿಕ್ಹ್ (ಕರ್ಮಶಾಸ್ತ್ರ) ನಿಯಮಗಳು ಅವರ ಮಹಾ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅದೆಂತಹ ಕ್ಲಿಷ್ಟಕರ ವಿಷಯಗಳಿಗೂ ಸಹ ಸಲೀಸಾಗಿ ಗ್ರಂಥಗಳ ಆಧಾರದಿಂದ ಪರಿಹಾರ ಕೊಡುವ ಅವರ ಶೈಲಿ ಅದ್ಭುತವೇ ಸರಿ.
ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ *ಮುಲ್ತಖಲ್ ಅಸಾತಿದ್ಸಃ* ಎಂಬ ವಾಟ್ಸಪ್ ಗ್ರೂಪಲ್ಲಿ ಹಿರಿಯ ಮುದರ್ರಿಸರು, ಉಸ್ತಾದರುಗಳು ಇದ್ದಾರೆ. ಅಲ್ಲಿ ನಡೆಯುವ ಫಿಕ್ಹ್ ಚರ್ಚೆಗಳ ಕೊನೆಯ ಮಾತು ತೋಕೆ ಉಸ್ತಾದರದ್ದಾಗಿದೆ.
ಆ ಗ್ರೂಪಲ್ಲಿ ಯಾವುದೇ ಪ್ರಶ್ನೆಗಳು ಬಂದರೂ ಬ್ಯುಝಿಯ ನಡುವೆ ಬಿಡುವು ಮಾಡಿ ಬಂದು ಉತ್ತರ ಹೇಳಿ ಸಮಸ್ಯೆ ಬಗೆಹರಿಸುತ್ತಾರೆ.

ಇನ್ನು ಅಖೀದ ವಿಷಯ ಬಂದರೆ ಅಲ್ಲೂ ಉಸ್ತಾದರದ್ದೇ ಮೇಲುಗೈ. ಸುನ್ನೀ ವಿರುದ್ಧರು ತಮ್ಮ ಮೊಂಡುವಾದಗಳನ್ನು ಬಡಬಡಿಸುತ್ತಾ  ಜನಸಾಮಾನ್ಯರನ್ನು ಗೊಂದಲಗಳಲ್ಲಿ ಸಿಲುಕಿಸಲು ಪ್ರಯತ್ನಪಡುವಾಗ ಅಲ್ಲೆಲ್ಲಾ ಸುನ್ನತ್ ಜಮಾ‌ಅತ್ ಹೇಳಲು ತೋಕೆ ಉಸ್ತಾದ್ ರೆಡಿ!
ನೂತನ ಆಶಯಗಳತ್ತ ವಾಲುತ್ತಿದ್ದ ಅದೆಷ್ಟೋ ಯುವಕರು ಉಸ್ತಾದರ ಸುನ್ನತ್ ಜಮಾಅತ್ ಕ್ಲಾಸ್ ಆಲಿಸಿ ಸುನ್ನಿಸಂನಲ್ಲಿ ಭದ್ರವಾಗಿದ್ದಾರೆ.
ಕುಟುಂಬ ಕಲಹಗಳಿಂದ ಛಿದ್ರವಾಗುತ್ತಿರುವ
ಕಾಲಘಟ್ಟದ ಆನಿವಾರ್ಯತೆಗಳಲ್ಲೊಂದಾದ ಕೌಟುಂಬಿಕ ವಿಷಯಗಳ ಕುರಿತು ಧಾರಾಳ ಪ್ರಭಾಷಣಗಳು ಬೇಕು. ಆದರೆ ಅದು ಮಾತ್ರ ದೀನ್ ಎಂಬಂತೆ ಅದನ್ನೇ ತಮ್ಮ ಮ್ಯಾಟರಾಗಿ ಉಪಯೋಗಿಸುವ ಇಂದಿನ ಯುವ ಪ್ರಭಾಷಣಗಾರರಿಗಿಂತ ತೋಕೆ ಉಸ್ತಾದ್ ಭಿನ್ನ. ತನ್ನ ಅಧಿಕ ಪ್ರಭಾಷಣಗಳಲ್ಲಿಯೂ ಸುನ್ನತ್ ಜಮಾಅತ್'ಗೆ ಪ್ರಾಮುಖ್ಯತೆ ನೀಡಿ ಜನರ ವಿಶ್ವಾಸ (ಅಖೀದ)  ಭದ್ರಪಡಿಸುವಲ್ಲಿ ವಿಶೇಷ ಮುತುವರ್ಜಿ ವಹಿಸುವುದನ್ನು  ಕಾಣಬಹುದು. ಉಸ್ತಾದರಿಗೆ ಸಾಥ್ ನೀಡುವ ನಿಟ್ಟಿನಲ್ಲಿ ಇತರ ಯುವ ಪ್ರಭಾಷಣಗಾರರೂ ತಮ್ಮ ಪ್ರಭಾಷಣಗಳಲ್ಲಿ ಸುನ್ನಿಸಂಗೆ ಕೂಡಾ ಕೆಲವೊಂದು ನಿಮಿಷಗಳನ್ನು  ಹಿಕ್ಮತ್ ನೊಂದಿಗೆ ವಿನಿಯೋಗಿಸಿದ್ದಲ್ಲಿ ಸಮೂಹದಲ್ಲಿ, ವಿಶೇಷವಾಗಿ ಯುವಕರಲ್ಲಿ ಅದು ಪರಿಣಾಮ ಉಂಟುಮಾಡಬಹುದೆಂಬ ವಿಷಯದಲ್ಲಿ ಸಂಶಯವಿಲ್ಲ.

ಇನ್ಶಾಅಲ್ಲಾಹ್...
ನಾಡಿದ್ದು ಎಪ್ರಿಲ್ 04 ರಂದು ಗಡಿಯಾರು ಸಮೀಪದ ನಚ್ಚಬೆಟ್ಟು ಎಂಬಲ್ಲಿ ತೋಕೆ ಉಸ್ತಾದರು ಮುನ್ನಡೆಸುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ 4ನೇ ವಾರ್ಷಿಕ ಸಮ್ಮೇಳನ ಬಹಳ ವಿಜ್ರಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ಸೆಷನ್ ಗಳಲ್ಲಾಗಿ ಸೆಮಿನಾರುಗಳು ಹಾಗೂ ಮಜ್ಲಿಸುಗಳು ನಡೆಯಲಿದ್ದು, ಸಯ್ಯಿದ್ ಬಾಯಾರ್ ತಂಙಳ್ ರಾತ್ರಿ ಸಮಾರೋಪ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.
ಹಂಝ ಮಿಸ್ಬಾಹಿ ಓಟಪ್ಪದವು ಉಸ್ತಾದರ ಮುಖ್ಯಪ್ರಭಾಷಣ ನಡೆಯಲಿದೆ.
ಸುನ್ನೀ ಕಾರ್ಯಕರ್ತರಾದ ಎಲ್ಲರೂ ಆ ಮಹಾ ಸಂಗಮದ ವಿಜಯಕ್ಕೆ ಬೇಕಾಗಿ ಸಹಕರಿಸಬೇಕು.
ಅಲ್ಲಾಹು ತೌಫೀಕ್ ನೀಡಲಿ ಆಮೀನ್.

*-ಅಬೂಶಝ*

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.