ಸಾದಾತ್ ಫಂಡ್ ಎಸೋಸಿಯೇಷನ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಸಯ್ಯಿದ್ ಕುಟುಂಬದ ತೀರಾ ಹಿಂದುಳಿದ ಸಯ್ಯಿದ್ ಹಾಗು ಸಯ್ಯಿದತ್ ಗಳಿಗೆ ಸೀರೆ ಹಾಗು ವಸ್ತ್ರ ವಿತರಣಾ ಕಾರ್ಯಕ್ರಮ ಸಾದಾತು ಫಂಡ್ ಅಸೋಸಿಯೇಷನ್ ಉಳ್ಳಾಲ ಇದರ ಅಧ್ಯಕ್ಷರಾದ ಸಯ್ಯಿದ್ ಜವಾದ್ ತಂಗಲ್ ಅಧ್ಯಕ್ಷತೆಯಲ್ಲಿ ಅಳೇಕಲದ ಯು ಡಿ ಅಶ್ರಫ್ ನಿವಾಸದಲ್ಲಿ ನಡೆಯಿತು.
ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ ಪರಂಪರೆಯಿಂದ ಬಂದ ಸಾದಾತುಗಳು ಮುಸ್ಲಿಮರಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಸಾದಾತುಗಳಿಗೆ ಸಹಾಯ ಹಸ್ತ ನೀಡುವ ಉದ್ಧೇಶದಿಂದ ಸಾದಾತ್ ಫಂಡ್ ಅಸೋಸಿಯೇಷನ್ ರಚಿಸಲಾಗಿದೆ. ಇದರ ಆಶ್ರಯದಲ್ಲಿ ಉಳ್ಳಾಲದ ತೀರಾ ಬಡತನದಲ್ಲಿರುವ ಸಯ್ಯಿದರುಗಳನ್ನು ಗುರುತಿಸಿ ಸಾಂತ್ವನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ ಎಂದು ಸಯ್ಯಿದ್ ಜವಾದ್ ತಂಗಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಾದಾತ್ ಫಂಡ್ ಎಸೋಸಿಯೇಷನ್ ಇದರ ಕಾರ್ಯ ಚಟುವಟಿಕೆಯನ್ನು ಚುರುಕುಗೊಳಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿದ್ದು, ಸಯ್ಯಿದ್ ಜಲಾಲ್ ತಂಗಲ್ ಸಂಚಾಲಕರು, ಸಯ್ಯಿದ್ ಜವಾದ್ ತಂಗಲ್ ಅಧ್ಯಕ್ಷರು, ಪೆಪ್ಸಿ ಹಂಝ ಸುಂದರಭಾಗ್ ಪ್ರಧಾನ ಕಾರ್ಯದರ್ಶಿ, ರಮೀಝ್ ಮೇಲಂಗಡಿ ಕೋಶಾಧಿಕಾರಿ, ಶಫೀಖ್ ಅಳೇಕಲ ಜೊತೆ ಕಾರ್ಯದರ್ಶಿ ಹಾಗು ಹನ್ನೊಂದು ಮಂದಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಗೌರವಾಧ್ಯಕ್ಷರಾದ ಯು ಎಸ್ ಹಂಝ ಹಾಜಿ ಭಾಗವಹಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಗಲ್, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಕಾರ್ಯದರ್ಶಿ ಅಶ್ರಫ್, ಅಳೇಕಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು ಡಿ, ಅಬ್ಬಾಸ್ ಮದನಿ ಅಳೇಕಲ, ಅಬ್ದುಲ್ ಹಮೀದ್ ಮದನಿ ಕೈಕೋ, ಇಬ್ರಾಹಿಂ ಮುಸ್ಲಿಯಾರ್ ಹಾಗು ಇನ್ನಿತರರು ಉಪಸ್ಥಿತರಿದ್ದರು.
Comments
Post a Comment