ನನ್ನ ಪಾಲಿಗೊಲಿದ ಸಂತೋಷದ ದಿನ.* *ಸುನ್ನೀ ಐಕ್ಯತೆಯ ಕನಸು ಸಾಕ್ಷಾತ್ಕಾರಗೊಳ್ಳಲಿ. ✍🏻 ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು.
ನನ್ನ ಪಾಲಿಗೊಲಿದ ಸಂತೋಷದ ದಿನ.*
*ಸುನ್ನೀ ಐಕ್ಯತೆಯ ಕನಸು ಸಾಕ್ಷಾತ್ಕಾರಗೊಳ್ಳಲಿ.
✍🏻 ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು.
ಕಳೆದ ಕೆಲವು ದಿನಗಳಿಂದ ಕೋಮು ವೈಷಮ್ಯಗಳಿಂದ ಬಳಲುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಯನ್ನು ಪುನರ್ತಾಪಿಸುವ ನಿಟ್ಟಿನಲ್ಲಿ ಪತ್ರಿಕಾಗೋಷ್ಟಿಯನ್ನು ಕರೆಯಲು ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ಮಂಗಳೂರಿಗೆ ಬರುವವರಿದ್ದರು. ಅವರನ್ನು ಸ್ವಾಗತಿಸಲು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಮಂಜನಾಡಿ ಅಬ್ಬಾಸ್ ಉಸ್ತಾದ್ , ಮುಮ್ತಾಝ್ ಅಲಿ ಮುಂತಾದವರೊಂದಿಗೆ ಕಾಯುತ್ತಿದ್ದೆ.
ರೈಲು ಬಂದು ನಿಂತಾಗ ಮೊದಲನೆಯದಾಗಿ ಒಬ್ಬರು ತಂಙಳರು ರೈಲಿನಿಂದ ಇಳಿದು ಬಂದರು. ನಾನು ಅವರನ್ನು ಮುಖತವಾಗಿ ನೋಡಿರದ ಕಾರಣಗಳಿಂದ ಅವರ ವೈಯಕ್ತಿಕ ಪರಿಚಯ ನನಗಿರಲಿಲ್ಲ. ನಗುತ್ತಾ ಬಂದ ಅವರಿಗೆ ಸಲಾಂ ಹೇಳುತ್ತಾ ಹಸ್ತಲಾಘವ ಮಾಡಿದಾಗ ನಗುಮೊಗದಿಂದ ಎ.ಪಿ ಉಸ್ತಾದರು ಹಿಂದಿನಿಂದ ಬರುತ್ತಿದ್ದಾರೆ ಅಂತ ಹೇಳಿದರು.
ಅವರು ಹೋದ ನಂತರವಾಗಿತ್ತು ನನಗೆ ಅರಿವಾದದ್ದು ಅದು ಇ.ಕೆ ಸಮಸ್ತದ ಅಧ್ಯಕ್ಷರಾದ ಸಯ್ಯದ್ ಜಿಫ್ರಿ ತಂಙಳ್ ರವರಾಗಿದ್ದರು ಅಂತ.
*ಎ.ಪಿ ಉಸ್ತಾದ್ ಬಂದೊಡನೆ ಉಸ್ತಾದರೊಂದಿಗೆ ಜಿಫ್ರಿ ತಂಙಳ್ ರವರು ಹೇಳಿದ ವಿಷಯವನ್ನು ಪ್ರಸ್ತಾಪಿಸಿದಾಗ ಉಸ್ತಾದರು ಹೌದು ಅವರು ನನಗಿಂತ ಮುಂದಿನ ಕಂಪಾರ್ಟ್ನಲ್ಲಿದ್ದರು. ಅವರು ನನ್ನನ್ನು ನೋಡಿ , ನನ್ನ ಬಳಿ ಬಂದು ಮಾತನಾಡಿ ಹೋಗಿದ್ದಾರೆ. ಅದಲ್ಲದೆ ಮುಸ್ಲಿಂ ಸಮುದಾಯವು ಕಾತರದಿಂದ ಕಾಯುತ್ತಿರುವ ಸುನ್ನೀ ಐಕ್ಯತೆಯ ವಿಷಯವನ್ನು ಮುಂದಿಟ್ಟು ನೀವಿರುವಾಗಲೇ ಎರಡು ಸಂಘಟನೆಯನ್ನು ಒಂದುಗೂಡಿಸಬೇಕೆಂದು ಹೇಳಿದ್ದಾರೆ. ಅದಕ್ಕೆ ನಾನು ಆ ವಿಷಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೆ ಎಂದು ಉತ್ತರಿಸಿದ್ದೇನೆ ಎಂದು ಎ.ಪಿ ಉಸ್ತಾದರು ಹೇಳಿದಾಗ ನನ್ನ ಮನಸ್ಸಿನಲ್ಲಿ ಅತಿಯಾದ ಸಂತೋಷವಾಯಿತು.*
*ಮುಸ್ಲಿಂ ಸಮುದಾಯದ ನಡುವೆ ಬಗೆಹರಿಸಲಾಗದ ರೀತಿಯಲ್ಲಿ ಹಲವು ಸಮಸ್ಯೆಗಳು ಜ್ವಲಂತವಾಗಿ ಕಾಡುತ್ತಿರುವಾಗ ಇಬ್ಬರು ನಾಯಕರೊಳಗಿನ ಮಾತುಕತೆಗಳು ಸುನ್ನೀ ಐಕ್ಯತೆಗೆ ಮುನ್ನುಡಿಯಾಗಿರಲಿ ಎಂದು ಪ್ರಾರ್ಥಿಸೋಣ.*
Comments
Post a Comment