ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ದ ಜನ ಜಾಗೃತಿ ಸಭೆ ಹಾಗೂ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿ
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಉಳ್ಳಾಲ ರೇಂಜ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ದ ಜನ ಜಾಗೃತಿ ಸಭೆ ಹಾಗೂ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿ ಉಳ್ಳಾಲದಲ್ಲಿ ನಡೆಯಿತು.
ಹಝ್ರತ್ ಸಯ್ಯಿದ್ ಮದನಿ ದರ್ಗಾ ಝಿಯಾರತಿನೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ರೇಂಜ್ ಮಿಷನರಿ ವಿಭಾಗದ ಚೇರ್ಮಾನ್ ವಿ.ಎ ಸಖಾಫಿ ವಳವೂರು ದುಆ ನೆರವೇರಿಸಿದರು.
ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿರುವ ಲಹರಿ ಪದಾರ್ಥಗಳ ವಿರುದ್ಧ "ಲಹರಿಯ ಆವೇಶ ಸಮಾಜದ ವಿನಾಶ" ಎಂಬ ಘೋಷಣೆಯೊಂದಿಗೆ ಉಳ್ಳಾಲ ದರ್ಗಾ ವಠಾರದಿಂದ ಪ್ರಾರಂಭಗೊಂಡ ಎಸ್ ಬಿ ಎಸ್ ವಿದ್ಯಾರ್ಥಿಗಳ ಬಾಲ ಮಸೀರ ರ್ಯಾಲಿಯು ಮೇಲಂಗಡಿ, ಮಾಸ್ತಿಕಟ್ಟೆ ಜಂಕ್ಷನ್ ಮೂಲಕ ಸಾಗಿ ಉಳ್ಳಾಲ ಪೇಟೆಯಲ್ಲಿ ಕೊನೆಗೊಂಡಿತು. ಈ ರ್ಯಾಲಿಯಲ್ಲಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಅಧೀನದ ಮದ್ರಸ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಪಾಲ್ಗೊಂಡಿದ್ದರು.
ಬಳಿಕ ಉಳ್ಳಾಲ ಪೇಟೆ ಪುರಸಭಾ ಮೈದಾನದಲ್ಲಿ ನಡೆದ ಜನ ಜಾಗ್ರತಿ ಸಭೆಯಲ್ಲಿ ಮಾತನಾಡಿದ ಉಳ್ಳಾಲ ಎಸ್ ಐ ಪ್ರದೀಪ್ ಇತ್ತೀಚಿನ ದಿನಗಳಲ್ಲಿ ಅಪರಾಧ ಕ್ರತ್ಯಗಳು ಹೆಚ್ಚುತ್ತಿದ್ದು, ಮಾದಕ ದ್ರವ್ಯಗಳ ಬಳಕೆಯೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ. ಮಾದಕ ವಸ್ತುಗಳ ಬಳಕೆಯ ವಿರುದ್ಧ ಧರ್ಮ ಗುರುಗಳ ನೇತ್ರತ್ವದಲ್ಲಿ ವಿದ್ಯಾರ್ಥಿಗಳ ಮೂಲಕ ಉಳ್ಳಾಲ ರೇಂಜ್ ನಡೆಸಿದ ಈ ಕಾರ್ಯಕ್ರಮ ಯುವಕರಿಗೆ ಜಾಗ್ರತಿ ಮತ್ತು ಅರಿವು ಮೂಡಿಸುವಂತಹದ್ದು ಮತ್ತು ಸಮಾಜದ ಉನ್ನತಿಗೆ ಪೂರಕವಾದುದಾಗಿದೆ. ರಾಜ್ಯದಾದ್ಯಂತ ಮಾದಕ ವ್ಯಸನಗಳ ವಿರುದ್ಧ ಇಂತಹ ಜಾಗ್ರತಿ ಸಭೆಗಳು ಆಗುತ್ತಿರಬೇಕು ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷರಾದ ಜಲಾಲುದ್ದೀನ್ ಮದನಿ ವಹಿಸಿದರು. ಎಸ್ ವೈ ಎಸ್ ದ.ಕ ಜಿಲ್ಲಾ ದಅವಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ಸಂದೇಶ ಭಾಷಣ ಮಾಡಿದರು. ರೇಂಜ್ ವೆಲ್ಫೇರ್ ವಿಭಾಗದ ಚೇರ್ಮಾನ್ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಮತ್ತು ಉಳ್ಳಾಲ ನಗರ ಸಭೆ ಉಪಾಧ್ಯಕ್ಷರಾದ ಅಯ್ಯೂಬ್ ಮಂಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಷನರಿ ವಿಭಾಗದ ಕಾರ್ಯದರ್ಶಿ ಸೆರ್ಕಳ ಇಬ್ರಾಹಿಂ ಸಖಾಫಿ ಸ್ವಾಗತಿಸಿ, ಮ್ಯಾಗಝಿನ್ ವಿಭಾಗದ ಕಾರ್ಯದರ್ಶಿ ಅಯ್ಯೂಬ್ ಮಹ್ಳರಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಉಳ್ಳಾಲ ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ, ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ರೇಂಜ್ ನಾಯಕರಾದ ವಿ.ಎ ಸಖಾಫಿ ವಳವೂರು, ಕೆ.ಎಂ ಮದನಿ ಕಟ್ಟತ್ತಿಲ, ವಿ.ಕೆ ಸಖಾಫಿ ಮುಕ್ಕಚ್ಚೇರಿ, ನಝೀರ್ ಮದನಿ ಮಾರ್ಗತಲೆ, ಜಾಬಿರ್ ಫಾಳಿಲಿ, ನವಾಝ್ ಸಖಾಫಿ ಉಳ್ಳಾಲ, ಶಾಕಿರ್ ಸಖಾಫಿ ಉಳ್ಳಾಲ ಸಹಿತ ರೇಂಜ್ ಅಧೀನ ಮದ್ರಸಗಳ ಉಸ್ತಾದರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments
Post a Comment