ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಮಹಾಸಭೆಯು ಉಳ್ಳಾಲ ತೋಟದ ಇಶಾಅತುಸ್ಸುನ್ನಃ ಮದ್ರಸದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಂದರಭಾಗ್ ಬದ್ರಿಯ್ಯ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮೀಯಪದವು ದುಆ ನೆರವೇರಿಸಿದರು. ರೇಂಜ್ ಪರೀಕ್ಷಾ ವಿಭಾಗದ ಅಧ್ಯಕ್ಷರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ ಸಭೆಯನ್ನು ಉದ್ಘಾಟಿಸಿದರು. 2021-22 ನೇ ಸಾಲಿನ ವಿವಿಧ ವಿಭಾಗದ ವಾರ್ಷಿಕ ವರದಿಗಳು ಮತ್ತು ಲೆಕ್ಕಪತ್ರ ಮಂಡಿಸಲಾಯಿತು.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉಸ್ತಾದರು ಅಧ್ಯಕ್ಷತಾ ಭಾಷಣ ಮಾಡಿದರು.
ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್, ಅಧ್ಯಕ್ಷರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಬಶೀರ್ ಸಖಾಫಿ ಉಳ್ಳಾಲ ಪುನರಾಯ್ಕೆಯಾದರು.
ಎಕ್ಸಾಂ, ಐಟಿ, ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಸಹ ಕಾರ್ಯದರ್ಶಿಗಳಾಗಿ ಇರ್ಫಾನ್ ಫಾಳಿಲಿ ಮಂಚಿಲ, ಮುನೀರ್ ಲತೀಫಿ ಪಟ್ಲ, ವಿ.ಕೆ ಅಬ್ದುರ್ರಹ್ಮಾನ್ ಸಖಾಫಿ ಮುಕ್ಕಚ್ಚೇರಿ ಆಯ್ಕೆಯಾದರು.
ಮ್ಯಾಗಝಿನ್ ವಿಭಾಗದ ಅಧ್ಯಕ್ಷರಾಗಿ ಅಯ್ಯೂಬ್ ಮಹ್ಲರಿ ಕಾವಲ್ಕಟ್ಟೆ, ಕಾರ್ಯದರ್ಶಿಯಾಗಿ ರಫೀಕ್ ಸಅದಿ ಅಳೇಕಲ, ಸಹ ಕಾರ್ಯದರ್ಶಿಯಾಗಿ ವಿ.ಎ ಮುಹಮ್ಮದ್ ಸಖಾಫಿ ವಳವೂರು ರವರನ್ನು ಆರಿಸಲಾಯಿತು.
ಟ್ರೈನಿಂಗ್ ಮತ್ತು ಮಿಶನರಿ ವಿಭಾಗದ ಅಧ್ಯಕ್ಷರಾಗಿ ಎಂ ಶರೀಫ್ ಸಅದಿ ಮೀಯಪದವು, ಕಾರ್ಯದರ್ಶಿಯಾಗಿ ಇಬ್ರಾಹಿಂ ಸಖಾಫಿ ಸೆರ್ಕಳ, ಸಹ ಕಾರ್ಯದರ್ಶಿಯಾಗಿ ನಝೀರ್ ಮದನಿ ಮಾರ್ಗತಲೆ ಆಯ್ಕೆಯಾದರು. ಲೆಕ್ಕ ಪರಿಶೋಧಕರಾಗಿ ಸುಲೈಮಾನ್ ಉಸ್ತಾದ್ ಸಜಿಪ, ಇರ್ಶಾದ್ ಹನೀಫಿ ತೋಟರವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸಹಿತ ಅಯ್ಯೂಬ್ ಮಹ್ಲರಿ ಹಾಗು ಇಬ್ರಾಹಿಂ ಸಖಾಫಿ ಸೆರ್ಕಳ ಜಿಲ್ಲಾ ಕೌನ್ಸಿಲರ್ ಆಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಸ್ಸಮದ್ ಅಹ್ಸನಿ ಉಳ್ಳಾಲ, ಉಸ್ಮಾನ್ ಸಖಾಫಿ ಮಾರ್ಗತಲೆ, ಮುಸ್ತಫ ಸಅದಿ ತೋಟ ಹಾಗು ಮುಹಮ್ಮದ್ ಶರೀಫ್ ಹನೀಫಿ ದಾರಂದಬಾಗಿಲು ರವರನ್ನು ಆರಿಸಲಾಯಿತು.
ರೇಂಜ್ ನೂತನಾಧ್ಯಕ್ಷರಾಗಿ ಪುನರಾಯ್ಕೆಯಾದ ಜಲಾಲುದ್ದೀನ್ ಮದನಿ ಮಾತನಾಡಿದರು. ರೇಂಜ್ ಗೌರವಾಧ್ಯಕ್ಷರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ಹಾಗು ಇರ್ಫಾನ್ ಸಅದಿ ಶುಭ ಹಾರೈಸಿ ಮಾತನಾಡಿದರು.
ರೇಂಜ್ ಪ್ರಧಾನ ಕಾರ್ಯದರ್ಶಿಯಾದ ಕೆ.ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಮಾಡಿದರು.
Comments
Post a Comment