ಉಳ್ಳಾಲ : ಮಾಸ್ತಿಕಟ್ಟೆ ಆಝಾದ್ ನಗರದ ನಾಗರಿಕರು, ಯುವಕರು ಸೇರಿ ಇತ್ತೀಚೆಗೆ ಅಸ್ತಿತ್ವಕ್ಕೆ ತಂದ ಆಝಾದ್ ನಗರ ಯೂತ್ ಫೌಂಡೇಶನ್ ವತಿಯಿಂದ ಜುಲೈ 08-2021 ರಂದು ಬಶೀರ್ ಎಂಬವರ ಚಿಕಿತ್ಸೆಗೆ 10,000 ರೂಪಾಯಿಗಳು ನೀಡುವ ಮೂಲಕ ಆಝಾದ್ ಫೌಂಡೇಶನ್ ತನ್ನ ಕಾರ್ಯ ಚಟುವಟಿಕೆಯ ಪ್ರಥಮ ಚಾರಿಟಿ ಫಂಡ್ ವರ್ಗಾವಣೆ ಮಾಡಿದೆ.
"ಮನುಷ್ಯನ ನಿಜವಾದ ಸಂಪತ್ತು ಈ ಜಗತ್ತಿನಲ್ಲಿ ಅವನು ಮಾಡುವ ಒಳಿತು ಕಾರ್ಯಗಳಾಗಿವೆ." ಎಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರವರು ಹೇಳಿರುವರು.
ಆಝಾದ್ ನಗರ ಯೂತ್ ಫೌಂಡೇಶನ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಲು ಇನ್ನೂ ಕೂಡಾ ತಮ್ಮ ಸಹಾಯ ಸಹಕಾರ ಆಶಿಸುತ್ತೇವೆ ಎಂದು ಫೌಂಡೇಶನ್ ಅಧ್ಯಕ್ಷರಾದ ಇಬ್ರಾಹಿಂ ಶೌಕತ್ ತಿಳಿಸಿದರು.
ಪ್ರಸ್ತುತ ಸೇವಾ ಕಾರ್ಯದಲ್ಲಿ ಉಪಾಧ್ಯಕ್ಷರಾದ ಅಝ್ಮಲ್ ಸುಂದರಬಾಗ್, ಪ್ರಧಾನ ಕಾರ್ಯದರ್ಶಿ ನಾಸಿರ್ ಅರಫಾತ್ ಹಾಗು ಜೊತೆ ಕಾರ್ಯದರ್ಶಿ ಶಂಸುದ್ದೀನ್ ಉಪಸ್ಥಿತರಿದಿದರು.

Comments
Post a Comment