Skip to main content

ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ

ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ

📝 *ಮುನೀರ್ ಸಖಾಫಿ, ಸಾಲೆತ್ತೂರು.*

ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.

ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ  ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು  ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.

ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು  ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ  ಅನ್ಯ ಪುರುಷರ ಬಳಿ ತೆರಳಬಾರದು.

ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್  ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು  ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.

ಆಯಿಶಾ ಬೀವಿ ಹೋರಾಡಿದ್ದರೇ?

ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.

ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.

ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ  ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.

ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)

ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )

ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.

ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)

ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223  ರಲ್ಲೂ ಕಾಣ ಬಹುದಾಗಿದೆ.

ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.

وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)

ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.

📝ಮುನೀರ್ ಸಖಾಫಿ, ಸಾಲೆತ್ತೂರು.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.